ನಿಮ್ಮೊಂದಿಗಿದ್ದು ಆಗಾಗ್ಗೆ ಅದನ್ನು ನೆನೀತೇನೆ. ” ಬಟಾ . “ ಚಿಕ್ಕವರಿಗೆ ಪಾಠ ಹೇಳಿ ಬೆಳೆಸಬೇಕಾದವರು ನೀವೇ....” ಮೆನ್ನ : “ ಲಿಪಿಕಾರನಾಗಿ ಇದ್ದೇನೆ ಬಟಾ, ಮಂತ್ರ ತಂತ್ರಗಳ ಕಳ್ಳ ಅಯ್ಯನಲ್ಲ. ” ಅವರು ಮಾತನಾಡುತ್ತಿದ್ದಂತೆ ನೆಖೆನ್ ಎದ್ದು ಅಲ್ಲಿಗೆ ನಡೆದು ಬಂದ. ನೆಖೆನ್ : “ ಕರೆಯದೆ ಬಂದೆ. ಮುದುಕನನ್ನು ಕ್ಷಮಿಸಿ," ಮೆನ್ನ : “ ಮಹಾಶಿಲ್ಪಿ, ನಿಮ್ಮ ನೀರಾನೆ ಮೂರ್ತಿನ ಬೆಳಿಗ್ಗೆ ನೀರಾನೆ ಪ್ರಾಂತದ ದೋಣಿಕಟ್ಟೇಲಿ ಕಂಡೆ. ಅದ್ಭುತ ಶಿಲ್ಪ, ನಿಮ್ಮ ಕೃತೀನ ಒಡೆಯೋದಕ್ಕೆ ಹೇಪಾಟ್ ಆಜ್ಞೆ ಕೊಟ್ಟನಂತೆ. ಪೀಠದಿಂದ ಸಡಿ ಲಿದ ನೀರಾನೆ ಇಳಿಜಾರ: ಮಣ್ಣಿಗೆ ಬಿದ್ದು ಉರುಳಿ ನದಿಯಲ್ಲಿ ಮುಳು ಗಿತಂತೆ. ” ನೆಖೆನ್ : " ಹೂಂ ! ಅಲ್ಲಿಂದ ತಪ್ಪಿಸಿಕೊಂಡು ಬಂದ ಯೋಧರು ಹೇಳಿದ್ರು ನನಗೂ ಕೇಳಿಸ್ತು. ” ಮೆನ್ನ :"ಇಲ್ಲಿ ಕೇಳಿ, ಮಹಾಶಿಲ್ಪಿ, ಆ ನೀರಾನೆ ನದಿಯ ಆಳ ದಿಂದ ಮತ್ತೆ ಎದ್ದು ಬರದೆ.... " ನೆಖೆನ್ : “ ನನಗೂ ಆ ದಿವಸದವರೆಗೆ ಬದುಕೋ ಆಸೆ ಅಯ್ಯ.” ಮೆನ್ನ : “ ನೀವು ಪಯೋವೃದ್ದರು. ನೀವಾದರೂ ನನ್ನನು ಬರೀ ಮೆನ್ನ ಅಂತ ಕರೀರಿ, ” ನೆಖೆನ್ : “ ಆಗಲಿ ಮೆನ್ನ .... ಬಟಾ, ಓ ನನ್ನ ಅಳಿಯ ಬಟಾ, ಅಲ್ಲಿಂದ ಹೊರಡ್ತಿದ್ದಾಗ ' ನಾನೂ ಬರಲಾ' ? ಅಂತ ಕೇಳೆ ' ಎಲ್ಲಿ ನೆಲೆಸೋದಕ್ಕೆ ನೀವು ಇಷ್ಟು ಪಡ್ತೀರೋ ಅಲ್ಲೇ ನಾನೂ ಇರಲಾ ? ' ಅಂತ ಈಗ ಕೇಳಿದ್ದೇನೆ. ” ಮೆನ್ನ : " ಬಟಾ ಅಣ್ಣ, ತಕ್ಷಣ ಒಮ್ಮೊಳೋಡಿ, ನನ್ನದೊಂದು ಶರತೆ ಇದೆ. ಇವರ ಚಾಣ ಮಸೆಯೋದು ಮೊನೆ ಮಾಡೋದು ನನ್ನ ಜವಾಬ್ದಾರಿ. ಇವರು ಒಪ್ಪೋದಾದ್ರೆ ನಮ್ಮ ಜತೆ ಇರಲಿ. ” ನೆಖೆನ್ : ಈ ಸಮೂಹದ ಸಂಕಟದ ನಡುವಿನಲ್ಲಿ ಸುಕ್ಕುಗಟ್ಟದ ಈ ಮುಖಕ್ಕೆ ಮೆರುಗಿನ ಲೇಪನ ಮಾಡ್ತಿದೀರಲ್ಲ ಮೆನ್ನ, ನೀವು ಎಂಥ
ಪುಟ:Mrutyunjaya.pdf/೬೯೪
ಗೋಚರ