ವಿಷಯಕ್ಕೆ ಹೋಗು

ಪುಟ:Mrutyunjaya.pdf/೬೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೬೮೨
ಮೃತ್ಯುಂಜಯ

ಯಾತನೆಯನ್ನೂ ಹಗುರಗೊಳಿಸುವ ಅಪ್ರತಿಮ ವೈದ್ಯ.” ದಟ್ಟವಾಗಿದ್ದ ಇರುಳು ಆಗಲೇ ತಿಳಿಯಾಗತೊಡಗಿತ್ತು. ಖೈಮ್‌ಹೋಪ್ ಎಚ್ಚೆತಿದ್ದ. ಸಹಿಸಲಾಗದ ನೋವು. “ಬಟಾ ಅಣ್ಣ,” ಎಂದು ಅವನು ಕ್ಷೀಣ ಧ್ವನಿ ಯಲ್ಲಿ ಕರೆದ. ಬಟಾ ಮಾವ, ಕರೀತಾರೆ ; ಬನ್ನಿ,” ಎಂದಳು ಖ್ನೆಮ್ನ ಹೆಂಡತಿ, ತುಸು ಕಾತರದ ಧ್ವನಿಯಲ್ಲಿ. ಬಟಾ ಹತ್ತಿರ ಬಂದೊಡನೆ ತ್ರೈಮ್ ಹೊಟೆಪನ ಕೈ ಬಟಾನನ್ನು ಮುಟ್ಟಲು ಯತ್ನಿಸಿತು. ಬಟಾ ಆ ಅಂಗೈಯನ್ನು ಹಿಡಿದುಕೊಂಡ. ನಿಧಾನವಾಗಿ ಪ್ರೈಮ್ ಕೇಳಿದ : "ಊರಿನ....ಗತಿ....ಏನಾಯ್ತು?” “ ಅದರ ಚಿಂತೆ ಈಗ ಬೇಡ ಖೈಮು. ....ನೀನು ವಿಶ್ರಾಂತಿ ತಗೋ. ಬೆಳಿಗ್ಗೆ ಕಣ್ಣುಗಳಿಗೆ ಔಷಧೋಪಚಾರ ಮಾಡೋಣ.” “ ನಾವು ತಪ್ಪಿಸಿಕೊಂಡು ಬಂದೆನಾ ?” “ ಹ್ಞ, ನೆಫಿಸ್ ಅತ್ತಿಗೆ, ರಾಮರಿ, ನೆಜಮುಟ್ ಅನ್ನು, ನಿನ್ನತೆ- ಹೆಂಡತಿ, ಅಹ್ರಾ , ಮಗು, ನೆಫರುರಾ, ಅನ್ನುವಿನ ಮಕ್ಕಳ ತಾಯಿ, ನನ್ನ0 ಹೆಂಡತಿ_ ಇಬ್ಬರು ಮಕ್ಕಳು.....ಮೆನ್ನಯ್ಯ, ನೆಖೆನ್ಮಾನ, ನನ್ನ ಅಂಬಿಗ ಬಂಧುಗಳು....” “ ನನಗೆ ಗೊತ್ತು. ನಾವು ಸೋತೆವು. ಹಿರಿಯರನ್ನು ಹಿಡಿದು.... ಗುಲಾಮು ಚಾಕರಿಗಾಗಿ ಜನರನ್ನು ಬಂಧಿಸಿದ್ರು....ಪೈರನ್ನೂ ಮನೆಗಳನ್ನೂ ಸುಟೇನೊ ? ಆ ಮಹಾ ಅರ್ಚಕ, ನುಟ್ ಮೋಸ್, ಬಕಿಲ ಆ ಮೂವರನ್ನು ನಾನು ಬಲಿ ತಗೋಬೇಕಾಗಿತ್ತು. ಆಗಲಿಲ್ಲ. ಬಕಿಲನಂತೂ ಸೇಡು ತೀರಿ ಸೊಂಡ.” “ ಮಾತಾಡ್ಬೇಡ.ಆಯಾಸವಾಗ್ತದೆ. ಕಣ್ಣಿನಿಂದ ರಕ್ತಸ್ರಾವವಾಗ್ತದೆ.” “ ಇಡೀ ಸಮುದಾಯದ ರಕ್ತಪ್ರವಾಹದ ಎದುರಲ್ಲಿ ಇದೇನು ಲೆಕ್ಕ ಬಟಾ ಅಣ್ಣ ?”