ಪುಟ:Mysore-University-Encyclopaedia-Vol-1-Part-2.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಸತ್ ಅಸತ್ಕಾರ್ಯವಾದ ಕನ್ನಡದಲ್ಲಿ ಕರ್ಣಾಟ ಕುಮಾರಸಂಭವ ಎಂಬ ಕೃತಿಯನ್ನು ರಚಿಸಿರುವುದಾಗಿ ಜಯಕೀರ್ತಿ ಹೇಳುತ್ತಾನೆ.ಆದರೂ ಇವನ ಈ ಕೃತಿಯಾಗಲಿ ಅಥವಾ ಕನ್ನಡದಲ್ಲಿ ಬರೆದಿದ್ದರೆ,ಆ ಕೃತಿಗಳಾಗಲಿ ಲಭ್ಯವಾಗಿಲ್ಲ. ವರ್ಧಮಾನ ಮಹಾವೀರ ತೀರ್ಥಂಕರನ ಜೀವನವನ್ನು ವಾಸ್ತುವಾಗಿ ಉಳ್ಳ ವರ್ಧಮಾನ ಚರಿತ ಮತ್ತು ಶಾಂತಿನಾಥ ತೀರ್ಥಂಕರನ ಜೀವನವನ್ನು ನಿರೂಪಿಸುವ ಶಾಂತಿಪುರಾಣ ಎಂಬ ಅವನ ಸಂಸ್ಕೃತಕೃತಿಗಳು ದೊರಕಿವೆ.ಈ ಸಂಸ್ಕೃತಕವಿ ಅಸಗನೂ ಅಭಿನ್ನರು ಎಂಬ ಹೇಸರಿನ ಹೋಲಿಕೆಯಿಂದ ನಂಬಬಹುದಾಗಿದೆ. ವರ್ಧಮಾನಚರಿತವನ್ನು ಸಂವತ್ಸರ ೯೧೦ರಲ್ಲಿ ಬರೆದುದಾಗಿ ಕವಿ ಹೇಳಿಕೊಂಡಿದ್ದಾನೆ.ಈ ಕೃತಿಯನ್ನು ಬರೆದಮೇಲೆ ಶಾಂತಿಪುರಾಣವನ್ನು ಬರೆದಿರುವುದರಿಂದಲೂ ಈ ಶಾಂತಿ ಪುರಾಣವನ್ನು ಇತರ ಕೃತಿಗಳನ್ನೂ ನೋಡಿರಬಹುದಾದ ಪೊನ್ನ ತನ್ನ ಕನ್ನಡ ಶಾಂತಿಪುರಾಣವನ್ನು ಸು.೯೫೦ರಲ್ಲಿ ರಚಿಸಿರುವುದರಿಂದಲೂ ಈ ತೇದಿಗಿಂತ ಹಿಂದೆಯೇ ಅಸಗ ಸಾಕಷ್ಟೂ ಪ್ರಸಿದ್ದನಾಗಿರಬೇಕು.ಆದ್ದರಿಂದ ಸಂವತ್ಸರ ಎಂದು ಆ.ನೇ.ಉಪಧೈ ಅವರು ಸಕಾರಣವಾಗಿ ಊಹಿಸಿ,ವರ್ಧಮಾನ ಚರಿತದ ರಚನೆಯ ಕಾಲ ಪ್ರಶ.೮೫೩ ಎಂದು ತೀರ್ಮಾನಿಸಿದ್ದಾರೆ. ವರ್ಧಮಾನಚರಿತ ಮತ್ತು ಶಾಂಯತಿಪುರಾಣಗಳಲ್ಲಿ ಕವಿ ತನ್ನ ಸ್ವಂತ ವಿಷಯಗಳನ್ನು ಹೇಳಿಕೊಂಡಿದ್ದಾನೆ.ಪಟುಮತಿ ಅನವನ ತಂದೆ.ವೈರೆತಿ ಅವನ ತಾಯಿ.ಇಬ್ಬರು ನಿಷ್ಟಾವಂತ ಜೈನರು.ಶಬ್ದ ಸಮಯಾರ್ಣವಪರಾಂಗತನಾಗಿದ್ದ ನಾಗನಂದ್ಯಾಚಾರ್ಯ ಅಸಗನ ಗುರು.ಪ್ರಶ.೮೫೩ರಲ್ಲಿ ಭಾವಕೀರ್ತಿಮುನಿಯ ಸಾನ್ನಿಧ್ಯದಲ್ಲಿ ವರ್ದಮಾನಚರಿತವನ್ನು ಬರೆದು ಮುಗಿಸಿದ.ಈ ಕೃತಿರಚನೆಗೆ ಕಾರಣಕರ್ತಳಾದವಳು ಮದ್ಗಲ್ಯ(ಮಾಂದ್ಗಲ್ಯ) ಪರ್ವತದ ತುದಿಯಲ್ಲಿ ವಸವಾಗ್ಗಿದ್ದ ಸಂಪತ್ ಎಂಬ ಶ್ರಾವಕಿ(ಈ ಪರ್ವತ ಯಾವದು ಎಂಬುದಿನ್ನೂ ನಿರ್ಧಾರವಾಗಬೇಕಾಗಿದೆ).ಬಳಿಕ ಆತ ಜೋಡಳ ದೇಶಕ್ಕೆ ಬಂದು ಅಲ್ಲಿ ಶ್ರೀನಾಥನ ಸಾಮ್ರಾಜ್ಯದಲ್ಲಿ ವಿರಲಾ ಎಂಬ ಪಟ್ಟಣದಲ್ಲಿ ಜೈನಧರ್ಮಸಂಬಂಧಿಯಾದ ಎಂಟು ಕೃತಿಗಳನ್ನು ರಚಿಸಿದ.ಅಸಗನಿಗೆ ಜಿನಾಪ ಎಂಬ ಹೇಸರಿನ ಮಿತ್ರನಿದ್ದ.ಈತ ಬ್ರಾಹ್ಮಣನಾದರೂ ಜೈನಧರ್ಮದಲ್ಲಿ ಆಸಕ್ತನಾಗಿದ್ದ(ಬಹುಶಃ ಆತ ಜೈನಬ್ರಾಹ್ಮಣ).ತನಗೆ ದೀರ್ಘ ಕೃತಿಯೊಂದನ್ನು ರಚಿಸಲು ಆತ್ಮವಿಶ್ವಾಸ ಸಾಲದೆ ಹೋಗಿದ್ದರೂ ತನ್ನ ಗೆಳೆಯನಿಗೆ ಪುರಾಣಗಳ ವಿಷಯದಲ್ಲಿ ಇದ್ದ ಶ್ರದ್ಧೆಯ ಫಲವಾಗಿ ಅಸಗ ಶಾಂತಿಪುರಾಣವನ್ನು ರಚಿಸಿದ.ಇವನ ವರ್ಧಮಾನಚರಿತವನ್ನು ಧವಲನೆಂಬ ಅಪಭ್ರಂಶ ಕವಿ ತನ್ನ ಹರಿವಂಶ ಪುರಾಣದಲ್ಲಿ ಪ್ರಶಂಸಿದ್ದಾನೆ.ವರ್ಧಮಾನಚರಿತಕ್ಕೆ ಸುಮಾರು ೧೭ನೇಯ ಶತಮಾನಕ್ಕೆ ಸೇರಿದ ಒಂದು ಟೀಕೆಯಿದೆ.

ಮೇಲೆ ಹೇಳಿದಂತೆ ಅಸಗ ಆ ಎರಡು ಸಂಸ್ಕೃತ ಕಾವ್ಯಗಳನ್ನಲ್ಲದೆ ಇನ್ನೂ ಎಂಟು ಕೃತಿಗಳನ್ನು ರಚಿಸಿದ್ದಾನೆ.ಅವು ಯಾವ ಭಾಷೆಯಲ್ಲಿವೆಯೋ ತಿಳಿಯದು. ಪೊನ್ನ ತನ್ನ ಶಾಂತಿಪುರಾಣದಲ್ಲಿ ತಾನು ಕನ್ನಡಗವಿತೆಯಲ್ಲಿ ಅಸಗನಿಗಿಂತ ನೂರ್ಮಡಿಎಂದು ಹೇಳಿಕೊಂಡಿದ್ದಾನೆ.ದುರ್ಗಚಸಿಂಹ ಮತ್ತು ನಯಸೇನರು ಅಸಗನ ದೇಸಿಯನ್ನು ಕೊಂಡಿದ್ದಾರೆ.ವರ್ಧಮಾನಪುರಾನಣಾದ ಕರ್ತೃ ಆಚಣ್ಣ ಇವನನ್ನು ಸ್ಮರಿಸಿದ್ದಾನೆ.ಬ್ರಹ್ಮಶಿವ ಪೊನ್ನ ಪಂಪರ ಸಾಲಲ್ಲಿ ಹೇಳಿರುವ ರಜಕ ಯಾರೂ ಅಲ್ಲ,ಅಸಗನೆ.ಕೇಶಿರಾಜ ತನ್ನ ಶಬ್ಧಮಣಿದರ್ಪಣದಲ್ಲಿ ಅಸಗನಿಂದಲೂ ಭಾಷಾಪ್ರಯೋಗಗಳನ್ನು ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

ಇಷ್ಟಾದರೂ ಅಸಗ ಕನ್ನಡದಲ್ಲಿ ಬರೆದದ್ದೇನು ಎಂಬುದು ಮಾತ್ರ ತಿಳಿದುಬಂದಿಲ್ಲ.ಜಯಕೀರ್ತಿ ತನ್ನ ಛಂದೋನುಶಾಸನದ ಏಳನೆಯ ಅಧಿಕಾರದಲ್ಲಿ ಸಮಾನಾಕ್ಷರ(ದೊರೆಯಕ್ಕರ) ಎಂಬ ಅಂಶವೃತ್ತ ಅಸಗನ ಕರ್ಣಾಟ ಕುಮಾರಸಂಭವದಲ್ಲಿ ಬಳಕೆಯಾಗಿದೆ ಎಂದು ಹೇಳುತ್ತಾನೆ.(ಅಸಗಾಖ್ಯ ಕವಿನಾ ಪ್ರತಿಪಾದಿತಂ ನನು ಕರ್ಣಾಟ ಕುಮಾರಸಂಭವ ಕಾವ್ಯೇ).ಹಾಗೆಯೇ ಛಂದೋವತಂಸ ಎಂಬ ಇನ್ನೊಂದು ಅಂಶವೃತ್ತ ಕುಮಾರಸಂಭವ ಮುಂತಾದ ಕಾವ್ಯಗಳಲ್ಲಿದೆ ಎನ್ನುತಾನೆ(ಛಂದೋವತಂಸ ನಾಮೇತಿ ಚತುಷ್ಟದಿಕಾ ಸಂದೃಷ್ಟಾಸೌ ಕುಮಾರಸಂಭವಾದೌ).ಇದರಿಂದ ಕೊನೆಗೂ ಅಸಗನ ಕನ್ನಡ ಕೃತಿಯೊಂದರ ಹೆಸರು ದೊರೆತಂತಾಯಿತು.

ಆದರೆ ಆ ಕಾವ್ಯದ ಸ್ವರೂಪವೇನೋ ತಿಳಿಯದು.ಹೆಸರನ್ನು ನೋಡಿದರೆ ನಮಗೆ ಸಹಜವಾಗಿ ಸಂಸ್ಕೃತಕವಿ ಕಾಳಿದಾಸ ಕುಮಾರಸಂಭವ ಜ್ಜಾಪಕಕ್ಕೆ ಬರುತ್ತದೆ.ಇದು ಅದರ ಅನುವಾದವಿರಬಹುದೆ?ನಮಗೆ ತಿಳಿದಮಟ್ಟಿಗೆ ಯಾವ ಪ್ರಾಚೀನ ಕನ್ನಡ ಕವಿಯೂ ಸಂಸ್ಕೃತ ಕೃತಿಯೊಂದನ್ನು ಅದು ಇರುವಂತೆಯೇ ಅನುವಾದಿಸಿಲ್ಲ.ಹಾಗಾದರೆ ಇದು ಅದರ ರೂಪಾಂತರವೇ ಇರಬಹುದು.ಆದರೆ ಎಂಥ ರೂಪಾಂತರ?ತಿಳಿಯದು.ಅದರ ವಸ್ತು ಶಿವಪಾರ್ವತಿಯರ ವಿವಾಹಕ್ಕೆ ಸಂಬಂಧಿಸಿದ್ದು ಎಂದು ಭಾವಿಸಲು ಅಭ್ಯಂತರವಿಲ್ಲ

ಎರಡನೆಯ ನಾಗವರ್ಮನ ಕಾವ್ಯಾವಲೋಕದಲ್ಲಿ ಶಿವ ಪಾರ್ವತಿಯರಿಗೆ ಸಂಬಂಧಿಸಿದ ಸುಮಾರು ಹದಿಮೂರು ಪದ್ಯಗಳಿವೆ.ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವದಲ್ಲಿ ಶಿವಶಿವೆಯರನ್ನು ಕುರಿತು ಕೆಲವು ಪದ್ಯಗಳಿವೆ.ಕೇಶಿರಾಜನ ಶಬ್ಧಮಣಿ ದರ್ಪಣದಲ್ಲೂ ಅವರನ್ನು ಕುರಿತ ಪದ್ಯಗಳು ಪದ್ಯಖಂಡಗಳು ಇವೆ.ಇವೆಲ್ಲವೂ ಅಲ್ಲದಿದ್ದರೂ ಕೆಲವಾದರೂ ಅಸಗನ ಕರ್ಣಾಟ ಕುಮಾರಸಂಭವ ಕಾವ್ಯಕ್ಕೆ ಸೇರಿದ ಪದ್ಯಗಳಿರಬಹುದು ಎಂದು ವಿದ್ವಾಂಸರು ಊಹೆ ಮಾಡಿದ್ದಾರೆ.ಆದರೆ ಅಲ್ಲಿ ಒಂದುಮಾತನ್ನು ಹೇಳುವುದು ಅವಶ್ಯಕ.ಆ ಪದ್ಯಗಳ್ನ್ನು ಬರೆದ ಕವಿ ಒಬ್ಬನೇ ಆಗಿದ್ದರೆ ಅವನಿಗೆ ಶಿವನಲ್ಲಿ ಅಪಾರವಾದ ಗೌರವ,ಭಕ್ತಿಭಾವನಗಳಿವೆ.ಕಾವ್ಯಾವಲೋಕನದಲ್ಲಿ ಶಿವ ಮತ್ತು ಪಾರ್ವತಿಯರಿಗೆ ಇಂದ್ರ ನಮಸ್ಕಾರ ಮಾಡಿದುದರ ವರ್ಣನೆಯನ್ನಾಗಲಿ,ಶಿವ ನಮ್ಮನ್ನು ಕರುಣಿಸಲಿ ಎಂಬ ಪ್ರಾರ್ಥನಾ ಪದ್ಯವನ್ನಾಗಲಿ ನೋದಬಹುದು.ಅರ್ಧನಾರೀಶ್ವರನ ವರ್ಣನೆಯಲ್ಲಿ ವ್ಯಂಗ್ಯ ಕುಚೋದ್ಯಗಳು ಸುಳಿವೂ ಇಲ್ಲ.ಮತ್ತು ಎಲ್ಲಿಯೂ ಜೈನಧರ್ಮದ ಛಾಯೆಯೂ ಕಂಡುಬರುವುದಿಲ್ಲ.ಅಲ್ಲಿ ದ್ವನೆತವಾಗಿರುವ ಕಥೆ ಎಲ್ಲರಿಗೂ ಪರಿಚಿತವಾದ ಶಿವಪಾರ್ವತಿಯರ ವಿವಾಹ.ಜೈನನಾದ ಅಸಗ ಹೀಗೆ,ಇಷ್ಟು ಅಪಾರ ಭಕ್ತಿಯಿಂದ ಅನ್ಯದೈವವೊಂದರ ಕತೆಯನ್ನು ರಚಿಸಲು ಸಾದ್ಯವೇ ಎಂಬ ಸಂದೇಹವೂ ಮೂಡದಿರದು.ಏಕೆ ಸಾದ್ಯವಿಲ್ಲ ಎಂದು ಉತ್ತರವನ್ನು ಕೊಡಲೂ ಸಾಧ್ಯ.ಆ ಪದ್ಯಗಳು ಅಸಗನವು ಇರಬಹುದೇ ಎಂದು ಊಹೆಸುವಾಗ ಮೇಲಿನ ಸಂಗತಿ ಮನಸ್ಸಿನಲ್ಲಿದ್ದರೆ ಒಳ್ಳೆಯದು.ಒಟ್ಟಿನಲ್ಲಿ ಈತನ ಕನ್ನಡ ಕೃತಿಗಳು ದೊರೆಯುವವರೆಗೂ ಇವನ ವಿಷಯವಾಗಿ ಹೆಚ್ಚೇನನ್ನು ಹೇಳಲಾಗುವುದಿಲ್ಲ.

ಅಸತ್:ಸತ್ ಎಂಬ ಪದಕ್ಕೆ ವಿರುದ್ಧವದುದು.ಸತ್ ಎಂಬ ಪದವನ್ನು ಅನೇಕ ಅರ್ಥಗಳಲ್ಲಿ ಉಪಯೋಗಿಸಿರುವಂತೆಯೇ ಅಸತ್ ಎಂಬ ಪದವನ್ನೂ ಬೇರೆ ಬೇರೆ ಅರ್ಥಗಳಲ್ಲಿ ಉಪಯೋಗಿಸಲಾಗಿದೆ.ಸತ್ ಎಂದರೆ ಇರುವುದು ಎಂಬುದು ಒಂದು ಅರ್ಥ.ಅಸತ್ ಎಂದರೆ ಇಲ್ಲದಿರುವುದು(ಋಗ್ವೇದ).ಸತ್ ಎಂಬ ಪದವನ್ನು ಸತ್ಯವಾದದ್ದು ಎಂಬ ಪದ ಅಸತ್ಯವಾದದ್ದು ಎಂಬ ಅರ್ಥದಲ್ಲೂ ಉಪಯೋಗಿಸುವುದುಂಟು.ಹಾಗೆಯೇ ಅಸ್ತ್ ಎಂಬ ಪದ ಅಸತ್ಯವಾದದ್ದು ಎಂಬ ಅರ್ಥದಲ್ಲೂ ಉಪಯೋಗದಲ್ಲಿದೆ(ಋಗ್ವೇದ).ಸತ್ ಎಂಬ ಪದವನ್ನು ಒಳ್ಳೆಯದು,ಮಂಗಳಕರವಾದದ್ದು ಎಂಬ ಮೂರನೆಯ ಅರ್ಥದಲ್ಲಿ ಉಪಯೋಗಿಸಿರುವಂತೆಯೇ ಅಸತ್ ಪದವನ್ನು ಅನಿಷ್ಟವಾದದ್ದು,ಕೆಟ್ಟದ್ದು ಎಂಬ ಅರ್ಥದಲ್ಲೂ ಉಪಯೋಗಿಸಿದೆ(ರಘುವಂಶ).ಪಾಶ್ಚಾತ್ಯ ಆಧುನಿಕ ತಾತ್ತ್ವಿಕರು ಸಾಮಾನ್ಯವಾಗಿ ಸತ್ಯ ಮುಂತಾದುವು ವಾಸ್ತವ ವಿಷಯಗಳಲ್ಲಿ ಕೇವಲ ಧ್ಯೇಯಗಳು ಎಂದು ಭವಿಸುತ್ತಾರೆ.ಒಳ್ಳೆಯದೇ ಸತ್.ಅದೇ ವಾಸ್ತವವಾದದ್ದು.ಕೆಟ್ಟದ್ದು,ಅರೂಪವಾದದ್ದು ಚಿರಸ್ಥಾಯಿಯಾಗಿ ನಿಲ್ಲತಕ್ಕದ್ದಲ್ಲ;ವಿನಾಶ ಹೊಂದತಕ್ಕದ್ದು-ಎಂದು ಪ್ಲೇಟೊ ಭಾವಿಸಿರುತ್ತಾನೆ.ಸಾಮಾನ್ಯವಾಗಿ ಭಾರತೀಯತಾತ್ತ್ವಿಕರೂ ಅದೇ ರೀತಿಯಾಗಿ ಭಾವಿಸಿರುತ್ತಾರೆ.ಅಸತ್ಯವಾದ,ಅಮಂಗಳಕರವಾದ,ದುಃಖಕರವಾದ ಈ ಸಂಸಾರ ಅಸ್ಥಿರ ಮತ್ತು ಅಂತ್ಯಗೊಳ್ಳುವಂಥಾದ್ದು ಎಂದು ಅವರು ಭಾವಿಸಿರುವುದರಿಂದ ಯಾವ ಭಾರತೀಯ ದರ್ಶನವೂ ನಿರಾಶಾವಾದವಲ್ಲವೆಂದು ಎಂ.ಹಿರಿಯಣ್ಣನವರು ಹೇಳಿದ್ದಾರೆ.

ಅಸತ್ ಮತ್ತು ಸತ್ ಎಂಬ ವಿಷಯಗಳನ್ನು ಕುರಿತು ಭಾರತೀಯ ದಾರ್ಶನಿಕರ ಭಾವನೆಗಳು ಭಿನ್ನವಾಗಿವೆ.ಇವುಗಳಿಗೆ ಅನುಸಾರವಾಗಿ ಅದರ ಕಾರ್ಯಕಾರಣ ವಾದಗಳೂ ಭಿನ್ನವಾಗಿವೆ.ವೈಶೇಷಿಕರು ಅಸತ್ಕಾರ್ಯವಾದಿಗಳು.ಕಾರಣದಲ್ಲಿ ಇಲ್ಲದ್ದು,ಕಾರ್ಯರೂಪದಲ್ಲಿ ಹೊಸದಾಗಿ ಹುಟ್ಟುತ್ತದೆ ಎಂಬುದು ಅವರ ವಾದ.ಸಾಂಖ್ಯರು ಸತ್ಕಾರ್ಯವಾದಿಗಳು.ಕಾರಣದಲ್ಲಿ ಅವ್ಯಕ್ತವಾದ ಇರುವುದೇ ಕಾರ್ಯದಲ್ಲಿ ವ್ಯಕ್ತ ರೂಪದಲ್ಲಿ ವಿಕಾಸ ಹೊಂದುತ್ತದೆ ಎಂಬುದು ಅವರ ವಾದ(ನೋಡಿ-ಕಾರ್ಯಕಾರಣಭಾವ). ಹಾಗೆಯೇ ಇರವಿನ ವಿಚಾರವಾಗಿ ಬೆಳೆದಿರುವ ಭಿನ್ನಾಭಿಪ್ರಾಯಗಳಿಗನುಗುಣವಾಗಿ ಜ್ನಾನವಿಷಯಕ್ಕೆ ಸಂಬಂಧಿಸಿದಂತೆ ಪಾರಮಾರ್ಥಿಕಸತ್ತಾ,ವ್ಯಾವಹರಿಕಸತ್ತಾ.ಪ್ರಾತಿಭಾಸಿಕಸತ್ತಾ ಎಂದು ಅದ್ವೈತಿಗಳು ಮೂರು ವಿಧವಾಗಿ ವಿಂಗಡಿಸಿರುತ್ತಾರೆ.ಇವುಗಳಲ್ಲಿ ಪಾರಮಾರ್ಥಿಕಸತ್ತಾ ಚಿರಸ್ಥಿರವಾದ ಸತ್;ವ್ಯಾವಹಾರಿಕಸತ್ತಾ ಸದಸತ್ವಿಲಕ್ಷಣವಾದದ್ದು;ಪ್ರಾತಿಭಾಸಿಕಸತ್ತಾ ಕ್ಷಣಿಕವಾದುದು.ಸಂಪೂರ್ಣವಾಗಿ ವಿನಾಶಹೊಂದುವುದು ಅಸತ್

ಅಸತ್ಕಾರ್ಯವಾದ:ಕಾರ್ಯ ಕಾರಣಗಳ ಪರಸ್ಪರ ಸಂಬಂಧವನ್ನು ಕುರಿತ ವಾದಗಳಲ್ಲಿ ಒಂದು.ಕಾರ್ಯ ಮತ್ತು ಕಾರಣಗಳಿಗೆ ಇರುವ ಸಂಬಂಧ ಎಂಥದು ಎಂಬುದು ತತ್ತ್ವಶಾಸ್ತ್ರದ ಒಂದು ಮುಖ್ಯ ಪ್ರಶ್ನೆ.ಕಾರಣದಲ್ಲಿ ಅವ್ಯಕ್ತವಾಗಿ ಇದ್ದುದೇ ಕಾರ್ಯವಾಗಿ ವ್ಯಕ್ತವಾಗುತ್ತದೆ ಎಂಬುದು ಒಂದು ಉತ್ತರ.ಹೀಗೆ ಉತ್ತರ ಕೊಡುವುವವರು ಸತ್ಕಾರ್ಯವಾದಿಗಳು.ಸಾಂಖ್ಯರು ಸತ್ಕಾರ್ಯ ವಾದಿಗಳು.ಕಾರಣ ಕಾರ್ಯದಲ್ಲಿಲ್ಲ.ಅದು ಹೊಸದಾಗಿ ಹುಟ್ಟಿದ್ದು.ಆದ್ದರಿಂದ ಕಾರ್ಯ ಕಾರಣದಿಂದ ತೀರಭಿನ್ನ ಎಂಬುದು ಇನ್ನೊಂದು ಉತ್ತರ.ಹೀಗೆ ಉತ್ತರ ಕೊಡುವವರು ಅಸತ್ಕಾರ್ಯ ವಾದಿಗಳು.ವೈಶೇಷಿಕರು ಅಸತ್ಕಾರ್ಯ ವಾದಿಗಳು.ಕಾರ್ಯ ಕಾರಣಾಂತರಗಳಿಂದ ಭಿನ್ನ ಮತ್ತು ಅದು ಹೊಸದಾಗಿ