ಪುಟ:Mysore-University-Encyclopaedia-Vol-4-Part-1.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಜನಪದ ಸಂಗೀತ ಕುಣಿದಂತ ಹಿಂದೆ ನಿಂತವರು ಹಾಡುತ್ತಾರೆ;ಅವುಗಳ ಅಂಗಾಂಗಗಳ ಚಲನೆಗನುಸಾರವಾಗಿ ಮಾತನಾಡುತ್ತಾರೆ.ಕಥೆ ಸಾಗುತ್ತ ಪ್ರೇಕ್ಷಕರು ಆಟಗಾರನ ಕೈಗೊಂಬೆಗಳಾಗುತ್ತಾರೆ.ಈ ಕೌಶಲ ಅದ್ಭುತವಾದುದು.ಕಥೆಯ ಪಾತ್ರಧಾರಿಗಳಲ್ಲಿ ಹುಟ್ಟುವ ನವರಸಗಳೆಲ್ಲವೂ ಗೊಂಬೆಗಳ ಚಲನೆಗಳ ಮೂಲಕ ಪ್ರೇಕ್ಷಕನಲ್ಲಿ ಉದ್ಭವಿಸಿ ಮಾಯೆಯ ವಾತಾವರಣವನ್ನು ಕಲ್ಪಿಸುತ್ತವೆ. ತೊಗಲು ಗೊಂಬೆಯ ಆಟ:ಈ ಗೊಂಬೆಗಳು ಕಾಗದದಂತೆ ತೆಳ್ಳಗಿರುವ ಹದ ಮಾಡಿದ ಚರ್ಮದವು.ಹಿಂದೆ ಪ್ರಕಾಶವಾದ ಬೆಳ್ಳಕಿಟ್ಟರೆ ಅವು ಪರದೆಯ ಮೇಲೆ ಕಾಣುತ್ತವೆ. ಅವಕ್ಕೆ ಬಣ್ಣ ಹಾಕಿರುತ್ತಾರೆ.ತೆಳ್ಳನೆ ಪರದೆಯ ಹಿಂದೆ ಪ್ರಕಾಶವಾದ ಒಂದು ದೀಪವನ್ನು ಕೊಂಚ ಪಕ್ಕಕ್ಕೆ ನೇತುಹಾಕಿರುತ್ತಾರೆ.ಆಟಗಾರರ ಇಡೀ ಸಂಸಾರವೇ ಈ ಆಟದಲ್ಲಿ ಭಾಗವಹಿಸುತ್ತದೆ.ಒಂದೊಂದಾಗಿ ಗೊಂಬೆಗಳನ್ನು ತೆಗೆದು ಕೊಡುವುದು,ಅವನ್ನು ಕ್ರಮವಾಗಿ ಜೋಡಿಸುವುದು ಮುಂತಾದ ಕೆಲಸವನ್ನು ಹೆಂಡತಿ ಮಕ್ಕಳು ನಿರ್ವಹಿಸತ್ತಾರೆ.ಗೊಂಬೆಗಳ ಕೈಕಾಲುಗಳಿಗೆ ಕಡ್ಡಿಗಳನ್ನು ಸಿಕ್ಕಿಸಿ,ತನ್ನ ನೆರಳು ಪರದೆಯ ಮೇಲೆ ಬೀಳದಂತೆ ಬೆಳಕಿನ ಹಿಂದೆ ನಿಂತು ಅವನ್ನು ಯಜಮಾನ ಪರದೆಗೆ ಅಂಟಿಸತ್ತಾನೆ.ಅವುಗಳ ಕೈಕಾಲು ಆಡಿಸಿ ಅದಕ್ಕೆ ಸರಿಯಾಗಿ ಮಾತನಾಡುತ್ತಾನೆ.ಹೆಣ್ಣು ಗೊಂಬೆಗೆ ಹೆಂಡತಿಯ ಸ್ವರ ಸೇರುತ್ತದೆ.ಗೊಂಬೆಗಳು ಕುಣಿಯುವಾಗಿ ಮಕ್ಕಳ ಹಾಡುಗಳು,ಗೆಜ್ಜೆಶಬ್ದ,ಗಡಸು ಗಂಡಸಿನ ಮಾತುಗಳಿಗೆ ಗಂಡಿನ ಕಂಠ-ಹೀಗೆ ಈ ತೊಗಲು ಗೊಂಬೆಯ ಆಟ ಮೂಕ ಚಲನಚಿತ್ರಕ್ಕೆ ಶಬ್ದ ಜೋಡಿಸಿದಂತಿರುತ್ತದೆ. ಜನಪದ ನೃತ್ಯ ಗೀತೆಗಳು:ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಗೀತೆಗಳಿವೆ.ಇವಕ್ಕೆ ಕೆಲವು ಗಾನನೃತ್ಯಗಳೂ ಇವೆ.ಶಿವಶರಣರ ವಚನಗಳು,ಭಾರತ ವಾಚನ,ಹರಿಕಥೆ,ಶಿವಕಥೆ,ಕೀರ್ತನೆ ಇವುಗಳೆಲ್ಲ ಜನತೆಯಲ್ಲಿ ಜ್ನ್ಯನ ಪ್ರಸಾರಮಾಡುಲು ರೂಢಿಯಲ್ಲಿದ್ದ ವಿಧಾನಗಳು. ಇವುಗಳಲ್ಲಿ ಸಂಗೀತ,ಸಾಹಿತ್ಯ,ನಾಟ್ಯ,ಅಭಿನಯ ಇವುಗಳೆಲ್ಲ ಹದವಾಗಿ ಕೂಡಿಕೊಂಡಿದ್ದು ಪಂಡಿತ ಪಾಮರರೆಂಬ ಭೇದಭಾವವಿಲ್ಲದೆ ಎಲ್ಲರಿಗೂ ಮನರಂಜಕವಾಗಿ ವಿಷಯಬೋಧಕವಾಗಿದೆ.ಈಚೆಗೆ ಆಧುನಿಕ ರೀತಿಯ ನಾಟಕ ಚಲನಚಿತ್ರಗಳು ಬಂದು ಹಳೆಯ ಜನಪದ ನೃತ್ಯ ನಾಟಕಾದಿಗಳು ಹಿಂದೆ ಬಿದ್ದಿವೆ. ಕರ್ನಾಟಕ ಜನಪದ ಸಂಗೀತ:ಜನಪದ ಸಂಗೀತದ ವೈವಿಧ್ಯ,ಪ್ರಾಶಸ್ತ್ಯ,ಸೊಗಸು,ರೀತಿನೀತಿಗಳನ್ನು ಕುರಿತು ಇಲ್ಲಿ ಸಮಾಲೋಚಿಸಲಾಗಿದೆ.ಇಂದಿಗೂ ಹಳ್ಳಿಗಳಲ್ಲಿ ಮುಂಜಾನೆ ಹೆಣ್ಣುಮಕ್ಕಳು ರಾಗಿ ಬೀಸುತ್ತ ಏಳುತಲೆ ನಾನೆದ್ದು ಯಾರಾರ ನೆನೆಯಲಿ ಎಳ್ಳುಜೀರಿಗೆ ಬೆಳಿಯೋಳ-ಭೂತಾಯ ಎದ್ದೊಂದು ಗಳಿಗೆ ನೆನೆದೇನು ಎಂದು ಹಾಡಲು ಮೊದಲು ಮಾಡುತ್ತಾರೆ.ತಂಬೂರಿ ಹಿಡಿದ ಹರಿದಾಸರು ಏಳು ನಾರಾಯಣ ಏಳು ಲಕ್ಶ್ಮರಮಣ ಎಂದು ಸುಪ್ರಭಾತ ಹಾಡಿಕೊಂಡು ಬರುತ್ತಾರೆ.ಏಕನಾದ ಹಿಡಿದ ಜಂಗಮಯ್ಯಗಳು 'ನಂ‍ಬಿ ಕರೆದೆಡೆ ಒ ಎಂಬ ಶಿವನು' ಎಂಬ ವಚನ ಹಾಡಿಕೊಂಡು ಬೀದಿಯಲ್ಲಿ ಅಡ್ಡಾಡುತ್ತಾರೆ. ತಾಯಂದಿರ ಎಳೆಗುವನ್ನು ಮಲಗಿಸುವಾಗ 'ಯಾಕಳುನೆ ಎಳೆ ರಂಗ ಬೇಕಾದ್ದು ನಿನಗಿದೆ ನಾಕೆಮ್ಮೆ ಕರೆದ ನೊರೆಹಾಲುಸಕ್ಕರೆ ನೀ ಕೇಳಿದಾಗ ನಾ ಕೊಡುವೆ ಎಂದು ಜೋ ಜೋ ಜೋಗುಳವನ್ನು ಇಂಪಾಗಿ ಹಾಡಿ ಕೂಸನ್ನು ನಿದ್ದೆ ಹೋಗಿಸುತ್ತಾರೆ. ಬೆಳಗಿನಿಂದ ರಾತ್ರಿ ಮಲಗುವವರೆಗೂ ಧಾರ್ಮಿಕ ಲೌಕಿಕ ಕಾರ್ಯಗಳೆರಡಕ್ಕೂ ಸಮಯೋಚಿತ ಹಾಡುಗಳು ಇದ್ದೆ ಇವೆ.ಸಂಪ್ರದಾಯವಾಗಿ,ವಂಶಪಾರಂಪರ್ಯವಾಗಿ ಇವು ಬೆಳೆದು ಬಂದಿವೆ.ರೇಡಿಯೊ,ಸಿನಿಮಾಗಳು ಬಂದ ಮೇಲೆಯೂ ಪಟ್ಟಣದವರು ಈ ಬಗೆಯ ಹಾಡುಗಳನ್ನು ಕೇಳುವ ಆಸಕ್ತಿ ತೋರುತ್ತಿದ್ದಾರೆ. ಶತಮಾನಗಳಿಂದ,ಬಾಯಿಂದ ಬಾಯಿಗೆ ಬಂದ ಹಳ್ಳಿಹಾಡು ಸರಳ,ಅತಿ ಮನೋಹರ,ಕಲಿಯಲು ಸುಲಭ.ಶಾಸ್ತ್ರೀಯ ಸಂಗೀತದ ಕಷ್ಟ ಇದಕ್ಕಿಲ್ಲ.ನಾಲ್ಕು ಬಾರಿ ಕೇಳಿದಲ್ಲಿ ಬಂದೇ ಬಿಡುವುದು.ಜನಸಾಮಾನ್ಯರು ಆಡುವ,ಅತಿ ಬಳಕೆಯಲ್ಲಿರುವ,ಪದಗಳನ್ನೇ ಉಪಯೋಗಿಸಿಕೊಂಡು ಮಲ್ಲಿಗೆಮೊಗ್ಗುಕಟ್ಟಿದಂತೆ ಇದನ್ನು ಕಟ್ಟಿರುವರು.ಯಾರು ರಚಿಸಿದರೋ ಎಂದು ರಚಿಸಿದರೋ ಒಬ್ಬರೇ ಬರೆದರೋ ಖಂಡಿತವಾಗಿ ಹೇಳುವುದಕ್ಕೆ ಆಧಾರ ಸಾಲದು.ಗಂಡಸರೂ ಕಟ್ಟಿರಬಹುದು,ಹೆಂಗಸರೂ ಕಟ್ಟಿರಬಹುದು,ಓದು ಬರೆಹ ಬಾರದವರೂ ಕಟ್ಟಿರಬಹುದು.ಪಾಮರರು ಹಡಿಕೊಳ್ಳಲಿ ಎಂದು ಕೊನೆಗೆ ಒಳ್ಳೆಯ ಪಂಡಿತರು ರಚಿಸಿದವೂ ಇಲ್ಲಿ ಸೇರಿರಬಹುದು.ಆಯಾ ಬುಡಕಟ್ಟಿನ ಆಯಾ ಪ್ರದೇಶದ ಜನಜೀವನದ ಎಲ್ಲ ಸಂದರ್ಭಕ್ಕೆ ಸೂಕ್ತವಾದ ಸಂಗೀತವನ್ನಿಲ್ಲಿ ಸಾದರಪಡಿಸಲಾಗಿದೆ.ಕೇವಲ ಓದಿಕೊಂಡಾಗ ಸಾಹಿತ್ಯ ಸಪ್ಪೆ ಎನಿಸಿದರೂ ಹಾಡಿದಾಗ ಮೈಮರೆವಂತಾಗುತ್ತದೆ,ರೋಮಾಂಚನವಾಗುತ್ತದೆ.ಒಮ್ಮೊಮ್ಮೆ ಜಗತ್ತಿವನ ಶ್ರೇಷ್ಠ ಕವಿತೆಗೂ ಸಮತೂಗುವ ಭಾವನೆ,ಉಪಮೆ,ಅಲಂಕಾರವಸ್ತು ಇವುಗಳಲ್ಲಿ ಸಿಗುತ್ತವೆ.ಹಲಕೆಲವು ಅಶ್ಲೀಲ ಕೃತಿಗಳೆಂದು ಕಂಡುಬಂದರೂ ದನಿ ಎತ್ತಿದಾಗ ಮಹಾ ಒರಟು ಎಂದು ಕಿವಿಗೆ ಅನಿಸಿದರೂ ಕ್ಷಣಾರ್ಧದಲ್ಲಿ ಸನಾತನ ಗ್ರಾಮ್ಯಸೌಂದರ್ಯದ ಸತ್ತಾಂಶದ ಗಂಗೆ ಭೋರ್ಗರೆದು ಹರಿದು ಬಂದ ಅನುಭವವಾಗುತ್ತದೆ.ಹಳ್ಳಿಯ ಸಮಸ್ತರೂ ಇದರ ಬೆಳವಣಿಗೆಗೆ ಪೋಷಕರಾಗಿದ್ದಾರೆ. ಸಕಲರ ಹಿತಕ್ಕಾಗಿ ಸಕಲರ ಆನಂದಕ್ಕಾಗಿ,ಸರ್ವತೋಮುಖವಾಗಿ ರಚನೆಯಾದ ಸಾಹಿತ್ಯಸಂಗೀತವಿದು. ಗಂಡಸರು ಹಾಡುವ ಪದಗಳೇ ಬೇರೆ.ಹೆಂಗಸರು ಹಾಡುವ ಪದಗಳೇ ಬೇರೆ.ಕೂಡಿ ಹಾಡುವ ಪದಗಳೇ ಬೇರೆ.ಗುಂಪು ಗುಂಪಾಗಿ,ತಂಡತಂಡವಾಗಿ ಹಾಡುವ ಪದಗಳೇ ಬೇರೆ.ಒಬ್ಬರೇ ಹಾಡುವ ಪದ ಬೇರೆ.ಸಾಮಾನ್ಯವಾಗಿ ಲಾವಣಿ,ಕೋಲಾಟದ ಪದ ,ಬಂಡಿಪದ,ಕಂಸಾಳೆ ಪದ,ಕೊಡಗರ ಬೊಳಕಾಟದ ಪದ,ಕಾಡು ಜನರ ಪದ,ಸೋಲಿಗರ ಪದ-ಇವುಗಳಲ್ಲಿ ಕೇವಲ ಗಂಡ್ಸರೇ ಭಾಗವಹಿಸುವರು.ಹೆಣ್ಣುಮಕ್ಕಳು ತ್ರಿಪದಿ,ಸಾಂಗತ್ಯ,ಜೋಗುಳ,ಸುವ್ವಿ ಪದ,ಸೋಭಾನೆ,ಕಳೆ ಕೀಳುವ ಪದ-ಮೊದಲಾದವನ್ನು ಹಾಡುತ್ತಾರೆ.ಇವುಗಳಲ್ಲದೆ ಡೊಳ್ಳಿನ ಪದ,ಹಂತಿ ಪದ,ಹಚ್ಚೆಯ ಪದ,ಕುಟ್ಟೊ ಪದ,ತಿಂಗಳುಮಾವನ ಪದ,ಬೀಗಿತಿ ಪದ,ಏಲ ಪದ,ಉರುಟಣೆ ಪದ,ಎಣ್ಣೆ ಒತ್ತೋ ಪದ,ಮಾರಿ ಪದ,ಬೇಟೆ ಪದ,ಸುಗ್ಗಿ ಪದ,ಮಕ್ಕಳ ಪದ,ದಾಸರ ಪದ,ತತ್ತ್ವದ ಪದ,ಬಯಲಾಟದ ಪದ,ಭೂತನ ಪದ ಮತ್ತು ಓಬೇಲೆ ಪದಗಳೂ ಉಂಟು. ಲಾವಣಿ:ಗರಡಿಯ ಅಂಗಸಾಧನೆಯಲ್ಲಿ ಪರಿಶ್ರಮ ಹೊಂದಿದ ಆಸಾಮಿಗಳು ಗಮ್ಮತ್ತಿನಿಂದ ಲಾವಣಿ ಹಾಡುತ್ತಾರೆ.ಯುದ್ಧ ಬಂದಾಗ ಜನರನ್ನು ಜಾಗೃತಿಗೊಳಿಸಿ,ಹೋರಾಡಲು ಹುರುಪುಗೊಳಿಸುವ ಸಮ್ಮೋಹನಾಸ್ತ್ರವಿದು.ಪಶ್ಚಿಮದ ಜನಪದ ಸಾಹಿತ್ಯದ ಬ್ಯಾಲಡ್ ರಚನೆಗೆ ಇದನ್ನು ಹೋಲಿಸಬಹುದು.ಈಗಲೂ ಧಾರವಾಡ,ಹುಬ್ಬಳ್ಳಿ ಕಡೆ ತಲೆಗೆ ರಂಗಿನ ಮುಂಡಾಸು ಕಟ್ಟಿಕೊಂಡು,ಕಾಲಿಗೆ ಗೆಜ್ಜೆಕಟ್ಟಿಕೊಂಡು,ಕಡ ಹಿಡಿದುಕೊಂಡು ಲಾವಣಿಕಾರನಾದವ ತನ್ನ ಜೊತೆಗೆ ಮತ್ತೊಬ್ಬ ಅದೇ ರೀತಿ ಹಾಡುವವನನ್ನು ನಿಲ್ಲಿಸಿಕೊಂಡು ಬಲವೋಜಿನಿಂದ ಹಾಡುವುದುಂಟು. ಈ ಜಾತಿಯಲ್ಲಿ ತುರಾಯಿಲಾವಣಿ ಮತ್ತು ಕಲ್ಗಿಲಾವಣಿ ಎಂಬ ಬೇದವುಂಟು.ತಾರಾಯಿಯವ ತಾಳಹಾಕುವ ಕಡಕ್ಕೆ ಹೂವಿನ ಅಲಂಕಾರ ಮಾಡುತ್ತಾನೆ.ಕಲ್ಗಿಯವ ಮಣೆಯನ್ನೋ ನವಿಲುಗರಿಯನ್ನೋ ತೊಡಿಸುತ್ತಾನೆ.ತುರಾಯಿಯವ ಹರಿಭಕ್ತನಾದರಿ ಕಲ್ಗಿಯವ ಶಿವ ಹಾಗೂ ಪರಾಶಕ್ತಿಯ ಭಕ್ತ.ಚೆನ್ನಾಗಿ ಹಾಡಿದಲ್ಲಿ ಲಾವಣೆ ಮಂದಿಯ ಮವಸ್ಸನ್ನು ಹೊಡೆದು ಎಬ್ಬಿಸುವುದರಲ್ಲಿ ಸಂದೇಹವಿಲ್ಲ. ಪಿರಿಯಾಪಟ್ಟಣದ ಕಾಳಗದ ಲಾವಣೆ ಚಾರಿತ್ರಿಕ ಲಾವಣೆಗೊಂದು ಉತ್ತಮ ನಿದರ್ಶನ.ವೀರರಾಜನಿಗೂ ಮೈಸೂರಿನ ದಳವಾಯಿಗೂ ನಡೆದ ಯುದ್ಧವನ್ನಿದು ವರ್ಣಿಸುತ್ತಾದೆ. ಪರಿಯಾಪಟ್ಟಣದ ಜಗಳದ ಹೇಳುತೀನಿ ಕೇಳಿರಣ್ಣ ನೀವ್ ಸಭೆಯಲ್ಲಾ ಅರಿಯದ ಹಸುಮಗ ದಳವಾಯ್ ಹೊಂಟರು ಮಾಡಲಿಕೆ ಹಲ್ಲಾ!!ಪ!! ಎಂಥ ಮಾತನು ಬರದೋ ರಣಹೇಡಿ ನಾಚಿಕೆಯಿಲ್ಲವೇ ನಿನಗೆ,ಮತ್ತೆ ಮದ್ದುಗುಂಡು ಸಾಲದೆ ಹೋದರೆ ಕೊಡತೀನಿ ನಿನಗೆ,