ಪುಟ:Mysore-University-Encyclopaedia-Vol-6-Part-12.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋವಿಂದ ಕವಿ ಮಂತ್ರಿ ಸಾಮಂತರೂ ಧ್ರುವನ ಪಕ್ಷ ವಹಿಸಿದರು. ವೆಂಗಿಯ ವಿಷ್ಣುವರ್ಧನ ಧ್ರುವನ ಮಾವನಾದುದರಿಮ್ದ ಗೋವಿಂದನ ನೆರವಿಗೆ ಬರಲಿಲ್ಲ. ಉಳಿದ ರಾರ ಸಹಾಯ ಬುರುವುದಕ್ಕೆ೪ ಮೊದಲೇ ಧ್ರುವ ಗೋವಿಂದನನ್ನು ಸೋಲಿಸಿ ರಾಜ್ಯಾಧಿಕಾರವನ್ನು ಕಿತ್ತುಕೊಂಡು ರಾಷ್ಟ್ರಕೂಟ ಸಾಮ್ರಾಜ್ಯದ ಅಧಿಪತಿಯಾದ. ಗೋವಿಂದ ೭೮೦ರಲ್ಲಿ ಯುದ್ಧರಂಗದಲ್ಲೇ ಅಸುನೀಗಿರಬೇಕೆಂದು ತೋರುವುದು. ಗೋವಿಂದ III: ರಾಷ್ಟ್ರಕೂಟ ವಂಶದ ಪ್ರಕ್ಯಾತ ರಾಜ (ಸು.೭೯೩-೮೧೪). ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಜನವಲಭ, ಕೀರ್ತಿನಾರಾಯಣ, ಜಗತ್ ರುದ್ರ, ತ್ರಿಭುವನಧವಳಱ್ ಎಂಬ ಬಿರುದುಗಳನ್ನು ಹೊಂದಿದ್ದ. ತನ್ನ ತಂದೆ ಧ್ರುವನ ಇಚ್ಛೆಯಂತೆ ಅವನ ಅನಂತರ ರಾಷ್ಟ್ರಕೂಟ ಸಿಂಹಾಸನವನ್ನೇರಿದ. ಇವನು ರಾಜನಾದ ಮೇಲೆ ಇವನ ಅಣ್ಣ ರಣಾವಲೋಕ ಸ್ತಂಭ ಸ್ವಲ್ಪಕಾಲ ತೆಪ್ಪಗಿದ್ದರೂ ತಮ್ಮನ ಏಳಿಗೆಯನ್ನು ಸಹಿಸಲಿಲ್ಲ. ತನ್ನನ್ನು ಬಿಟ್ಟು ತಮ್ಮನಿಗೆ ತಂದೆ ಪಟ್ಟಗಟ್ಟಿದುದರಿಂದ ಮೊಳೆತ ಅಸೂಯೆ ಹೆಮ್ಮರವಾಗಿ ಬೆಳೆಯತೊಡಗಿತು. ತಮ್ಮನಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಂಚಿಯವರೆಗಿನ ಹನ್ನೆರಡು ಮಂದಿ ಸಾಮಂತರನ್ನು ಒಂದುಗೂಡಿಸಿ ಗೋವಿಂದನ ವಿರೋಧವಾಗಿ ಒಂದು ಮಹತ್ತರ ಕೂಟವನ್ನು ರಚಿಸಿದ. ಅವರಲ್ಲಿ ಕಂಚಿಯ ದಂತಿಗ, ನೊಳಬವಾಡಿಯ ಚರುಪೊನ್ನೇರ ಮತ್ತು ಬನವಾಸಿಯ ಕತ್ತಿಯರ ಮುಖ್ಯರು. ಅಲ್ಲದೆ ಗೋವಿಂದನ ಕೆಲವರು ಮಂತ್ರಿಗಳೂ ಸ್ತಂಬಹನ ಪರವಾಗಿದ್ದರು. ೭೮೮ರಲ್ಲಿ ಗಂಗರಾಜ ಶ್ರೀಪುರುಷ ಮರಣಹೊಮ್ದಿದಾಗ ಅವನ ಅನಂರತ ಪಟ್ಟಕ್ಕೆ ಬರಬೇಕಾಗಿದ್ದ ಶಿವಮಾರ ರಾಷ್ಟ್ರಕೂಟ ಕಾರಾಗೃಹದಲ್ಲಿ ಬಂದಿಯಾಗಿದ್ದ. ಗೋವಿಂದ ರಣಾವಲೋದನನ್ನು ಸದೆಬಡುಯುವುದಕ್ಕೆ ಅನುಕೂಲವಾಗಲೆಂದು ಶಿವಮಾರನನ್ನು ಬಿಡಿಗಡೆಮಾಡಿ ಅವನ ರಾಜ್ಯಕ್ಕೆ ಕಳುಹಿಸಿಕೊಟ್ಟ. ಆದರೆ ಶಿವಮಾರ ರಣಾವಲೋಕ ಥಂಬಹನ ಪಕ್ಷಕ್ಕೆ ಸೇರಿಕೊಂಡ. ಗೋವಿಂದ ಸ್ತಥಂಭನ ದಂಗೆಯನ್ನಡಗಿಸಲು ನಿರತನಾದ. ಸ್ತಂಭನಿಗೆ ಮಿತ್ರರಾಜರಿಂದ ಸಹಾಯ ಬರುವುದಕ್ಕೆ ಮೊದಲೇ ಅವನನ್ನು ಸೆರೆಹಿಡಿದ. ಆದರೆ ಅವನ ತಪ್ಪನ್ನು ಕ್ಷಮಿಸಿ ಪುನಃ ಗಂಗವಾಡಿಯ ಮಾಂಡಲಿಕನನ್ನಾಗಿ ನೇಮಿಸಿದ. ಶಿವಮಾರನನ್ನು ಪುನಃ ಕಾರಾಗೃಹಕ್ಕೆ ತಲ್ಲಿದ. ಆನಂತರ ಹೋವಿಂದ ಕಂಚಿಯ ದಂತಿಗನ ಮೇಲೆ ದಂಡೆತ್ತಿಹೋಗಿ ಅವನನ್ನು ಸೋಲಿಸಿದ; ನೊಳಂಬವಾಡಿಯ ಚಾರುಪೊನ್ನೇರ ಶರಣಾಗರನಾದ. ೭೯೬ರ ಹೊತ್ತಿಗೆ ಗೋವಿಂದ ಇವೆಲ್ಲ ದಿಗ್ವಿಜಯಗಳನ್ನು ನಿರ್ವಹಿಸಿ ದಕ್ಷಿಣಾಪಥದ ಏಕೈಕ ಪ್ರಭುವಾದ. ಇತ್ತ ತನ್ನ ಅಧಿಕಾರ ನಿರ್ಬಾಧಿತವಾದ ಮೇಲೆ ಗೋವಿಂದ ತನ್ನ ದೃಷ್ಟಿಯನು ಉತ್ತರ ಭಾರತಕ್ಕೆ ಹರಿಸಿದ (ಸು.೭೯೮-೮೦೦). ಗೋವಿಂದ ನ ತಂದೆ ಧ್ರುವ ಉತ್ತರ ಭಾರತದ ದಂಡಯಾತ್ರೆಯಿಂದ ಹಿಂತಿರುಗಿ ಬಂದಮೇಲೆ ಬಂಗಾಲದ ಧರ್ಮಪಾಲ ಕನೂಜ್ಱನ್ನು ಗೆದ್ದುಕೊಂಡು ಚಕ್ರಾಯುಧನನ್ನು ಕನೂಜುನ ರಾಜನನ್ನಾಗಿ ಮಾಡಿ ತಾನು ಉಚ್ಛ್ರಾಯಸ್ಥಿತಿಗೆ ಏರಿದ್ದ. ಆದರೆ ಸ್ವಲ್ಪಕಾಲದಲ್ಲಿಯೇ ಗೂರ್ಜರ ಪ್ರತೀಹಾರ ರಾಜ ಇಮ್ಮಡಿ ನಾಗಭಟ ಪುನಃ ಕನೂಜನ್ನು ಗೆದ್ದುಕೊಮ್ಡು ಚಕ್ರಾಯುಧನನ್ನು ಓಡಿಸಿದನಲ್ಲದೆ, ಆತನ ಸಹಾಯಕ್ಕೆ ಬಂದ ಧರ್ಮಪಾಲಾನ್ನೂ ಹಿಮ್ಮೆಟ್ಟಿಸಿದ್ದ. ಈ ಸಮಯದಲ್ಲಿ ಗೋವಿಂದ ಕನೂಜಿನ ಮೇಲೆ ದಂಡೆತ್ತಿಹೋದ. ನಾಗಭಟನಿಗೂ ಮತ್ತು ಗೋವಿಂದನಿಗೂ ಪ್ರಾಯಶಃ ಝಾನ್ಸಿ, ಗ್ವಾಲಿಯರ್ಕ್ ಪ್ರಾಂತಗಳ ನಡುವೆ ಯುದ್ಧವಾಯಿತು. ಚಕ್ರಾಯುಧ, ಧರ್ಮಪಾಲ ಇಬ್ಬರೂ ಗೋವಿಂದ ನಿಗೆ ಶರಣಾದರು. ಆನಂತರ ಗೋವಿಂದ ನ ಸೈನ್ಯ ಹಿಮಾಲಯದ ತಪ್ಪಲಿನವರೆಗೂ ದಂಡೆತ್ತಿ ಹೋಗಿ ನಾನಾ ರಾಜವಂಶಗಳ ರಾಜರನ್ನು ಸದೆಬಡಿದು, ಕರ್ನಾಟಕದ ಕೀರ್ತಿ ಪ್ರತಾಪಗಳನ್ನು ಹಿಮಾಲಯಪ್ರರ್ಯಂತ ಹರಡಿತು. ಗೋವಿಂದ ಕೈಗೊಂಡ ಉತ್ತರ ಭಾರತದ ದಂಡಯಾತ್ರೆ ಕೇವಲ ದಿಗ್ವಿಜಯ ರೂಪವಿಗಿತ್ತು. ಕೀರ್ತಿ ಮತ್ತು ಕೋಶವೃದ್ಧಿಯಾಯಿತೆ ವಿನಾ ರಾಜ್ಯ ವಿಸ್ತಾರವೇನೂ ಆದಂತೆ ತೋರುವುದಿಲ್ಲ. ಈ ಹಿಂದಿನಿಂದಲೂ ರಾಷ್ಟ್ರಕೂಟಾಧೀನದಲ್ಲಿದ್ದ ಮಾಳವ ಗುಜರಾತ್ ಪ್ರದೇಶಗಳನ್ನು ಭದ್ರಪಡಿಸಿಕೊಳ್ಳಲೋಸುಗ ಸಮರ್ಥ ಯೋಧನಾಗಿದ್ದ ತನ್ನ ತಮ್ಮ ಇಂದ್ರನಿಗೆ ಆ ಪ್ರಂತಗಳ ಅಧಿಕಾರವನ್ನು ವಹಿಸಿದ. ಈ ದಂಡಯತ್ರೆಯಿಂದ ಹಿಂದಿರುಗುತ್ತಿದ್ದಾಗ ಮಾಳವದೇಶದ ಶ್ರೀಭವನ ಎಂಬಲ್ಲಿತಂಗಿದ್ದ. ಆಗ ಮಗ ಅಮೋಘವರ್ಷ್ (ನೃಪತುಂಗ ಜನಿಸಿದ.

ಗೋವಿಂದ  ದೀರ್ಘಕಾಲ ರ್ಜಧಾನಿಯಿಂದ ಹೊರಗೆ ಇದ್ದ ಅವಕಾಶವನ್ನು ಉಪಯೋಗಿಸಿಕೊಂಡು ದಕ್ಷಿಣದ ಪಲ್ಲವ, ಪಾಂಡ್ಯ, ಕೇರಳ, ಗಂಗರಾಜರು  ಗೋವಿಂದ ನ ಪ್ರಭುತ್ವವನ್ನು ಮುರಿಯಲು ಸಿದ್ಧತೆ ಮಾಡತೊಡಗಿರಾಷ್ಟ್ರಕೂಟರ ಕೆಲವು ಪ್ರಾಂತಗಳನ್ನು ಆಕ್ರಮಿಸಿದರು.  ಈ ವಾರ್ತೆಯನ್ನು ಕೇಳಿದೋಡನೆಯೇ ಈತ ತುಂಗಭದ್ರಾ ತಟಕ್ಕೆ ಧಾವಿಸಿ (ಸು.೮೦೨) ಅಲ್ಲಿ ಬೀಡುಬಿಟ್ಟಿದ್ದ ದಕ್ಷಿಣ ರಾಜರ ಸೈನ್ಯಗಳನ್ನುಪ್ರರಾಭವಗೊಳೊಸಿದ.  ಅನೇಕ ಗಂಗಸೇನಾಧಿಕಾರಿಗಳನ್ನು ಮರುಕ ತೊರಿಸದೆ ಬ್ವಲಿ ತೆಗೆದುಕೊಂಡ.  ಈ ವಿಜಯದ ಆನಂತರ ಪಲ್ಲವರ ರಾಜಧಾನಿಯಾದ ಕಂಚಿಯನ್ನು ಸೂರೆಮಾಡೆ ಸ್ವಾಧೀನಪಡಿಸಿಕೊಂಡ.  ಆನಂತರ ಪಾಂಡ್ಯ, ಕೇರಳ ರಾಜರುಗಳನ್ನು ಸೋಲಿಸಿದ.   ಗೋವಿಂದ ಕಂಚಿಯ ರಾಜ್ಯವನ್ನು ಜಯಿಸಿದನೆಂಬ ಸುದ್ದಿಯನ್ನು ಕೇಳಿದೊಡನೆಯೆ ಸಿಂಹಳದ ರಾಜ ತಾನಾಗಿಯೇ ವಿನಮ್ರನಾಗಿ ಬಂದು ನಿಗೆ ತನ್ನ ಹಾಗೂ ತನ್ನ ಅಮಾತ್ಯನ ಪ್ರತಿಮೆಗಳನ್ನು ಕಪ್ಪಾವಾಗಿ ಸಲ್ಲಿಸಿದ.

ನಾಲ್ವಡಿ ವಿಷ್ಣುವರ್ಧನ ಜೀವಿಸಿರುವವರೆಗೂಪೂರ್ವ ಚಾಳುದ್ಯ ಮತ್ತುರಾಷ್ಟ್ರಕೂಟರ ಸಂಬಂಧ ಸ್ನೇಹದಿಂದ ಕೂಡಿತ್ತು. ಅವನ ಆನಂತರ ಪಟ್ಟಕೆ ಬಂದ ಇಮ್ಮಡಿ ವಿಜಯಾದಿತ್ಯ ಸಾಮಂತನಾಗಿರಲು ಒಪ್ಪದೆ ಪ್ರತ್ಯಕ್ಷವಾಗಿ ನನ್ನು ವಿರೋಧಿಸತೊಡಗಿದ. ಈ ನಡುವೆ ವಿಜಯಾದಿತ್ಯನನ್ನು ಸೋಸಿ ವೆಂಗಿ ರಾಜಯ್ವನ್ನು ಗಳಿಸಿಕೊಟ್ಟ. ಸು.೮೭೦ರ್ತಲ್ಲಿ ಗಂಗರಾಜ್ಯದ ಮಾಂಡಲಿಕನಾಗಿದ್ದ ರಣಾವಲೋಕಸ್ತಂಭ ಸತ್ತ ಗೋವಿಂದ ತನ್ನ ತಮ್ಮ ಇಂದ್ರನ ಜ್ಯೇಷ್ಠ ಪುತ್ರನಾದ ದಂತಿವರ್ಮನನ್ನು ಗಂಗರಾಜ್ಯದ ಮಾಂಡಲಿಕನಾಗಿ ನೇಮಿಸಿದ. ಆದರೆ ದಂತಿವರ್೫ಮ ಅಕಾಲ ಮರಣಕ್ಕೆ ತುತ್ತಾದ್ದರಿಂದ ಕೊನೆಗೆ ಅದುವರೆಗೆ ಸೆಯಲ್ಲಿದ್ದ ಶಿವಮಾರನನ್ನು ಬಿಡುಗಡೆಮಾಡಿ ಗಂಗರಾಜ್ಯವನ್ನು ಅವನಿಗೇ ಮರಳಿ ನೀಡಿದ. ಭಾರತದ ಇತಿಹಾಸದ ಪುಟಗಳಲ್ಲಿ ಗಣ್ಯಸ್ಥಾನ ಪಡೆದಿರುವ ರಾಜರುಗಲಲ್ಲಿ ನೂ ಒಬ್ಬ. ಇವನ ರಾಜಕೀಯ ಪ್ರಭಾವ ಕನೂಜಿನಿಂದ ಕನ್ಯಾಕುಮಾರಿಯ ವರೆಗೂ ವ್ಯಾಪಿಸಿದ್ದಿತು. ಇವನ ಕೊನೆಗಾಲ ಶಾಂತಿ, ಸಮೃದ್ಧಿಯ ಕಾಲ. ಆ ದಿನಗಳಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ಪ್ರಾಬಲ್ಯ್, ಘನತೆ, ಗೌರವಗಳ ಉತ್ತುಂಗ ಶಿಖರವನ್ನು ಮುಟ್ಟಿತ್ತು. ಸು.೮೧೪ರಲ್ಲಿ ಇವನ ಅವಸಾನವಾಯಿತು. ಗಾಮುಂಡಬ್ಬೆ ಈತನ ಪತ್ನಿ, ಅಮೋಘವರ್ಷ ನೃಪತುಂಗ ಈತನ ಮಗ. ಗೋವಿಂದ IV: ರಾಷ್ಟ್ರಕೂಟ ದೊರೆ (೯೩೦-೩೫). ೩ನೆಯ ಇಂದ್ರನ ಕಿರಿಯ ಮಗ. ಪ್ರಭೂತವರ್ಷ, ಸುವರ್ಣವರ್ಷ, ನೃಪತುಂಗ, ನೃಪತಿತ್ರಿಣೇತ್ರ, ಸಾಹಸಾಂಕ, ರಟ್ಟಕಂದರ್ಪ ಎಂಬೂವು ಇವರ ಬಿರುದುಗಳು. ನಾಲ್ವಡಿ ಗೋವಿಂದ ಅಣ್ಣನಾದ ಇಮ್ಮಡಿ ಅಮೋಘವರ್ಷನನ್ನು ಪ್ರಾಯಶಃ ಕೊಲ್ಲಿಸಿ ಪಟ್ಟಕ್ಕೆ ಬಂದ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾದಱ್. ಆದರೂ ಔವನಮದ ಮತ್ತು ರಾಜ್ಯಮದದಿಂದ ಜನಾನುರಾಗಿಯಾಗದೆ ತನ್ನನ್ನು ತಾನೇ ನಾಶಪಡಿಸಿಕೊಂಡ. ರಾಷ್ಟ್ರಕೂಟರ ಬೆಂಬಲದಿಂದ ವೆಂಗಿ ಸಿಂಹಾಸನಾಧಿಕಾರಿಯಾಗಿದ್ದ ಇಮ್ಮಡಿ ಯುದ್ಧಮಲ್ಲನನ್ನು ೯೩೪ರಲ್ಲಿ ಇಮ್ಮಡಿ ಭೀಮ ಓಡಿಸಿ ತಾನೇ ರಾಜನಾದ. ಆದರೂ ಈ ಸಮಯದಲ್ಲಿ ನಾಲ್ಕನೆಯ ಗೋವಿಂದ ವೆಂಗಿಯ ಮೇಲೆ ರಾಷ್ಟ್ರಕೂಟರ ಪ್ರಭಾವವನ್ನು ಉಳಿಸಿಕೊಳ್ಳೂವ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ರಾಜ್ಯದ ಹೊರಗೆ ತನ್ನ ಪರಾಕ್ರಮವನ್ನು ತೋರಿಸಲು ಅಸಮರ್ಥನಾದ ಗೋವಿಂದ ವೆಂಗಿಯ ಸಿಂಹಾಸನದ ಹಕ್ಕುದಾರರಲ್ಲೊಬ್ಬನಾಗಿದ್ದ ಐದನೆಯ ವಿಜಯಾದಿತ್ಯನಿಗೆ ತನ್ನ ಚಾಳುಕ್ಯ ಸಾಮಂತ ಇಮ್ಮಡಿ ಅರಿಕೇಸರಿ ಆಶ್ರಯವನ್ನಿತ್ತನೆಂಬ ನೆಪದಲ್ಲಿ ಅರಿಕೇಸರಿಯನ್ನು ಕೆಣಕಿದ. ಅವನು ವಿಜಯಾದಿತ್ಯನನ್ನು ಒಪ್ಪಿಸಲು ನಿರಾಕರಿಸಿದ. ಇಮ್ಮಡಿ ಅರಿಕೇಸರಿ ಸಮರ್ಥ ವೀರನಾಗಿದ್ದುದೇನೋ ನಿಜ. ಆದರೆ ದೊಡ್ಡ ಸೈನ್ಯದಿಂದ ಕೂಡಿದ್ದ ಚಕ್ರವರ್ತಿಯನ್ನು ಒಬ್ಬ ಸಾಮಂತ ಎದುರಿಸುವುದು ಅಸಾಮಾನ್ಯ ಕೆಲಸವೆಂದು ಅವನು ತಿಳಿದಿದ್ದ. ಇದೇ ಸಮಯಕ್ಕೆ ಸರಿಯಾಗಿ ಗೋವಿಂದನ ಉಚ್ಚಾಟನೆಗೆ ಗೋವಿಂದನ ಅತ್ಯಾಚಾರ ಮತ್ತು ದುರಾಚಾರಗಳಿಂದ ಕೋಪಗೊಂಡಿದ್ದ ಸಾಮಂತರು ಒಟ್ಟಾಗಿ ಸೇರಿ ಮೂರನೆಯ ಅಮೋಘವರ್ಷನ ಪರವಾಗಿದ್ದ ಅವನ ಅಳಿಯ ಗಂಗ ೨ನೆಯ ಬೂತುಗ ಮುಂತಾದ ಉಳಿದ ಸಾಮಂತರಾಜರು ಅರಿಕೇಸರಿಗೆ ತಮ್ಮ ಬೆಂಬಲವನ್ನು ನೀಡಿದರು. ಗೋವಿಂದ ಚೋಳ ೧ನೆಯ ಪರಾಂತಕನಿಂದ ನೆರವನ್ನು ಬಯಸಿದರೂ ಸಕಾಲಕ್ಕೆ ಸಿಗಲಿಲ್ಲ. ೯೩೫ರಲ್ಲಿ ಸಂಭವಿಸಿದ ಯುದ್ಧದಲ್ಲಿ ಅರಿಕೇಸರಿ ಗೋವಿಂದನ್ನು ಸೋಲಿಸಿದ. ಗೋವಿಂದ ರಣರಂಗದಲ್ಲೇ ಪ್ರಾಣ ಕಳೆದುಕೊಂಡ. ಆನಂತರ್ಱ ಮೂರನೆಯ ಅಮೋಘವರ್ಷ ಪಟ್ಟಕ್ಕೆ ಬಂದ. ಈ ವಿಚಾರ ಪಂಪನ ವಿಕ್ರಮಾರ್ಜುನವಿಜಯದಲ್ಲಿ ಸ್ಪಷ್ಟವಾಗಿ ವರಿತವಾಗಿದೆ. (ಎಸ್.) ಗೋವಿಂದ ಕವಿ: ೧೬ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದ ಭಾಗವತ ಸಂಪ್ರದಾಯದ ಒಬ್ಬ ಕನ್ನಡ ಕವಿ. ಈತನನ್ನು ಗೋಪ ಕವಿ ಎಂದೂ ಕರೆಯುವುದಿದೆ. ತಾನೂ ಭೀಮರಥೀ ತೀರದ ಬುಯ್ಯರ ಗ್ರಾಮದ ಜ್ಯೋತಿ ಎಂಬ ಕರಣಿಕನ ಮಗನೆಂದೂ ಶ್ರೀಕೃಷ್ಣ ಮದನಗೋಪಾಲ ತನ್ನ ಆರಾಧಯ್ ದೈವವೆಂದೂ* ಹೇಳಿಕೊಂಡಿದ್ದಾನೆ. ಈತ ಲಕ್ಷ್ಮೀಶರನ್ನು ಸ್ತುತಿಸಿದ್ದಾನೆ.