ಪುಟ:Mysore-University-Encyclopaedia-Vol-6-Part-5.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಯಿತ್ರೀ ವೇದತೃವಾದ ಈ ಮಂತ್ರವನ್ನು ಜಪಿಸುವುದರಿಂದ ವೇದಪಠನ ಪುಣ್ಯ ಲಭಿಸುತ್ತದೆ,ಮಹಾಪಾತಕಗಳು ನಶಿಸುತ್ತವೆ. ವಹ್ನಿಪುರಾಣಂದೆ ಈ ಮಂತ್ರ ಸವಿತೃದೇವತಾತ್ಮಕವಾದುದು;ಛಂದಸ್ಸು,ಗಾಯತ್ರೀ;ಋಷಿ,ವಿಶ್ವಾಮಿತ್ರ,ಕರ್ಮೇಂದ್ರಿಯಗಳು ಐದು,ಪಂಚಭೂತಗಳು,ಮನಸ್ಸು ಬುದ್ಧಿ ಆತ್ಮ ಆವ್ಯಕ್ತ -ಈ ಇಪ್ಪತ್ತನಾಲ್ಕು ಗಾಯತ್ರಿಯ ಅಕ್ಷರಗಳು.ಸಪ್ತಲೋಕಗಳು ವ್ಯಾಹೃತಿಗಳು.ಇದಕ್ಕೆ ಶಿರಸ್ಸಾಗಿರುವವ ಪರಮೇಶ್ವರ.ಈ ವಿಧವಾದ ಗಾಯತ್ರಿಯನ್ನು ಜಪಿಸಬೇಕು.ಪ್ರಾತಃಕಾಲದಲ್ಲಿ ಗಾಯತ್ರಿ,ಮಧ್ಯಾಹ್ನದಲ್ಲಿ ಸಾವಿತ್ರಿ,ಸಾಯಂಕಾಲದಲ್ಲಿ ಸರಸ್ವತಿಯನ್ನು ಧ್ಯಾನಿಸಬೇಕು.ಗಾಯತ್ರೀ ಸಾವಿತ್ರೀ ಸರಸ್ವತಿಯರನ್ನು ಆವಾಹನೆ ಮಾಡಿಕೊಂಡು ಋಷಿ ಛಂದಸ್ಸು ದೇವತೆಗಳನ್ನು ಸ್ಮರಿಸಿ ಬಳಿಕ ಈ ಮಂತ್ರವನ್ನು ಜಪಿಸುವುದು ಕ್ರಮ. ಗಾಯತ್ರೀಮಂತ್ರದೊಡನೆ ಒಂದು ಲಕ್ಷ ತಿಲಹೋಮ ಮಾಡಿದರೆ ಸರ್ವಪಾತಕಗಳೂ ನಶಿಸುತಾವೆ.ಇದು ಸರ್ವಾಭೀಷ್ಟ ಸಿದ್ಧಿಕರ ಮಂತ್ರ,ಇದನ್ನು ಜಪಿಸಿದವರಿಗೆ ಯಾವ ವಿಧವಾದ ಭಯವೂ ಇರುವುದಿಲ್ಲ.ಪ್ರತಿ ವರ್ಷ ಶ್ರಾವಣ ಮಾಸ ಕೃಷ್ಣ ಪಕ್ಷ ಪಾಡ್ಯದ ದಿವಸ ಮಿಥ್ಯಾಧೀತ(ದೋಷ) ಪ್ರಾಯಶ್ಚಿತ್ತಕ್ಕಾಗಿ ಒಂದು ಸಾವಿರ ಸಂಖ್ಯೆಯಲ್ಲಿ ಗಾಯತ್ರೀ ಬ್ರಹ್ಮನ ಪತ್ನಿ.ಯಾಗದೀಕ್ಷಾಕಾಲದಲ್ಲಿ ಬ್ರಹ್ಮ ತನ್ನ ಪತ್ನಿಯನ್ನು ಯಜವಾಟಿಕೆಗೆ ಬರುವಂತೆ ಹೇಳಿಕಳುಹಿಸುತ್ತಾನೆ.ತನ್ನ ಒಡನಾಡಿಯರಿಗಾಗಿ ಕಾಯುತ್ತಿದ್ದ ಆಕೆ ಸಕಾಲಕ್ಕೆ ಬರದೆ ಮುಹೂರ್ತ ಮಿಂಚುತ್ತ ಬರಲು ಕುಪಿತನಾದ ಬ್ರಹ್ಮ ಬೇರೆ ಪತ್ನಿಯನ್ನು ಕರೆತರುವಂತೆ ಇಂದ್ರನಿಗೆ ಆಜಾಪಿಸುತ್ತಾನೆ.ಇಂದ್ರ ಕೂಡಲೇ ಭೂಲೋಕಕ್ಕೆ ಹೋಗಿ ಒಬ್ಬ ಸುಂದರಿಯನ್ನು ಕರೆತರಲು ಆಕೆಗೆ ಗಾಯತ್ರೀ ಎಂದು ಹೆಸರಿಟ್ಟು ಗಾಂಧರ್ವ ವಿಧಿಯಿಂದ ಬ್ರಹ್ಮ ವಿವಾಹವಾಗುತ್ತಾನೆ.ಹೀಗೆಂದು ಒಂದು ಪೌರಾಣಿಕ ಕತೆ ಇದೆ. ಕೆಂಪು ಬಿಳುಪು ಹಳದಿ ನೀಲ ಬಣ್ಣಗಳ ಕಾಂತಿಯಿಂದ ಕೂಡಿರುವವಳೂ ಉಜ್ವಲವಾದ ಮೂರು ಕಣ್ಣುಳ್ಳವಳೂ ಕೆಂಪು ವಸ್ತ್ರವನ್ನು ಧರಿಸಿರುವವಳೂ ವರದಾಭಯ ಹಸ್ತಗಳನ್ನುಳ್ಳವಳೂ ಶಂಖಚಕ್ರಧಾರಣಿಯೂ ಕೈಯಲ್ಲಿ ಕಪಾಲ ಅಂಕುಶ ಜಪಮಾಲೆ ಕಮಲಗಳನ್ನು ಹಿಡಿದಿರುವವಳೂ ಕುಮಾರಿಯೂ ಆಗಿರುವಂತೆ ಗಾಯತ್ರಿ ಸ್ವರೂಪವನ್ನು ಧ್ಯಾನಿಸಬೇಕು. ವೀರಶೈವ ಪಂಥದ ಕೆರೆಯ ಪದ್ಮರಸನ ದೀಕ್ಷಾಬೋಧೆ ಎಂಬ ಗ್ರಂಥದ ದ್ವಿತೀಯ ಸ್ಥಲದಲ್ಲಿ ಇನ್ನು ಕೇಳು ಗಾಯತ್ರಿಯ ನಿಜಮಂ ಸನ್ನುತ ಭೂತಿರುದ್ರಾಕ್ಷಿಗಳಿರಮಂ ನಿಟಿಲ ತ್ರಿಪುಂಡ್ರಾಂಕಿತಯುಕ್ತಾಂಗಿಯ ಜಟೆರುದ್ರಾಕ್ಷಭಸಿತ ಸರ್ವಾಂಗಿಯ ಅಕ್ಷಮಾಲೆ ಜಪಕರದ ಕಮಂಡಲ ನಿಕ್ಷೇಪಿನಿಸಿದಾಗಮಹೃನ್ಮಂಡಲ ಋಗ್ಯಜುಸ್ಸಾಮಂ ನಿಜಮೂರುತಿಯ ಭರ್ಗಭಕ್ತಿಯ ನಿಷ್ಠೆಯ ಮನದರ್ಥಿಯ ಇದು ಗಾಯತ್ರಿಯ ನಿಜದಾಕಾರಂ _ಎಂದು ಗಾಯತ್ರಿಯ ಸ್ವರೂಪದ ವಿವರಣೆ ಇದೆ. ಗಾಯತ್ರೀಯ ಅಕ್ಷರಗಳಲ್ಲಿ ಒಂದೊಂದು ಅಕ್ಷರವೂ ಒಂದೊಂದು ಶ್ಲೋಕದಲ್ಲಿ ರುವುದನ್ನು ಶ್ರೀಮದ್ವಾಲ್ಮೀಕಿ ರಾಮಾಯಣದಿಂದ ಉದ್ದರಿಸಿ 24 ಶ್ಲೋಕಗಳುಳ್ಳ ಈ ಗ್ರಂಥ ಭಾಗಕ್ಕೆ ಗಾಯತ್ರೀರಾಮಾಯಣ ಎಂದು ಅಂಕಿತ ಮಾಡಿದ್ದಾರೆ.ಇದನ್ನು ಪ್ರತಿದಿನ ಪಠಿಸುವುದರಿಂದ ಸರ್ವಪಾಪಗಳೂ ನಶಿಸುತ್ತವೆ ಎಂದು ಫ಼ಲಶ್ರುತಿ.(ಎಸ್.ವಿನ್.ಕೆ) ಗಾಯತ್ರೀ ಛಂದಸ್ಸು:ಮುಖ್ಯವಾದ ವೈದಿಕ ಛಂದಸ್ಸುಗಳಲ್ಲಿ ಒಂದು.ಋಗ್ವೇದದ 1/4ಭಾಗ ಋಕ್ಕುಗಳು ಈ ಛಂದಸ್ಸಿನಲ್ಲಿವೆ.ಇತರ ವೈದಿಕ ಛಂದಸ್ಸುಗಳಂತೆ ಗಾಯತ್ರಿಯೂ ಉದಾತ್ತಾನುದಾತ್ತಸ್ವರಿತಳೆಂಬ ಸ್ವರಗಳೊಡನೆ ಹೇಳಲ್ಪಡುತ್ತದೆ.ಇದರ ಸಾಮಾನ್ಯ ಲಕ್ಷಣ ಹೀಗೆ; 3 ಪಾದಗಳು: ಪಾದಕ್ಕೆ 8 ಅಕ್ಷರಗಳು: ಪ್ರತಿಯೊಂದು ಪಾದವನ್ನು 4 ಅಕ್ಷರಗಳು 2 ಗಣಗಳನ್ನಾಗಿ ವಿಭಜಿಸಬಹುದು.ಹೀಗೆ ವಿಭಜಿಸಿದಾಗ 2ನೆಯ ಗಣದಲ್ಲಿ 2 ಬಾರಿ ಹ್ರಸ್ವದೀರ್ಘಾಕ್ಷರಗಳ ಅನುಕ್ರಮವಾದ ವಿನ್ಯಾಸ ( ಸಾಮಾನ್ಯವಾಗಿ ಕಂಡಬರುತ್ತದೆ. ಉದಾಹರಣೆಗೆ ಋಗ್ವೇದದ ಮೊದಲ ಮಂತ್ರವನ್ನೇ ನೋಡಬಹುದು

     |                   |
 ಆಗ್ನಿಮೀಳೇ           ಪುರೋಹಿತಂ
    |
  ಯಜಸ್ಯ ದೇವಮೃತ್ವಿಜಂ 
   -     -
   |     |

ಹೋತಾರಂ ರತ್ನಧಾತಮಂ (ಸೂಕ್ತ ೧ ಮಂತ್ರ ೧)

       -

ಇದೇ ಮಂತ್ರವನ್ನು ಗಣ ವಿಭಜಿಸಿ ೨ ನೆಯ ಗಣದಲ್ಲಿ ಲಘುಗುರುಗಳು ವಿನ್ಯಾಸವನ್ನು ಪರಿಶೀಲಿಸಿದಾಗ ಹೀಗಿರುತ್ತದೆ;

       U -U-
ಅಗ್ನಿಮೀಳೇ | ಪುರೋಹಿತಂ
      U-U-
ಯಜಸ್ಯ ದೇ | ವಮೃತ್ವಿಜಂ
     U-U-
 ಹೋತಾರಂ ರ | ತ್ನ ಧಾತಮಂ
 ಇನ್ನು ಒಂದು ಉದಾಹಣೆಯನ್ನು ನೋಡಬಹುದು.
      U-U-
  ತದ್ವಿಷ್ಣೋ ಪ | ರಮಂ ಪದಂ 
   U-U-
  ಸದಾ ಪಶ್ಯಂ | ತಿ ಸೂರಯಂ
     U-U-
  ದಿವೀವ ಚ | ಕ್ಷುರಾತತಂ
 ಹೀಗೆಯೇ ಗಾಯತ್ರಿಯ ಇನ್ನೂ ಆನೇಕ ಉದಾಹರಣೆಗಳನ್ನು ನೋಡಿದರೂ ಪ್ರತಿ ಪಾದದ ಉತ್ತರಾಧ೯ದ ೪ ಆಕ್ಷರಗಳಲ್ಲಿ ಎಂದರೆ ೨ ನೆಯ ಗಣದಲ್ಲಿ ಮೇಲೆ ತೋರಿಸಿರುವಂಥ ರೀತಿಯಲ್ಲಿ ದ್ವಿಲಗ ವಿನ್ಯಾಸ (U-,U-)ಕಂಡುಬರುತ್ತದೆ.ಹೀಗೆ ಬರಲೇಬೇಕು ನಿಬ೯ಂಧವಿಲ್ಲವಿದೆಯೂ ಆ ವಿನ್ಯಾಸ ಬಲುಮಟ್ಟಿಗೆ ಕ್ರಮ ತಪ್ಪದೆ ಬಂದಿರುವುದು ಗಮನಿಸತಕ್ಕದಾಗಿದೆ.
ಒಮ್ಮೊಮ್ಮೇ ಈ ಕ್ರಮ ವಿಪಯಾ೯ಯಗೂಂಡು ದೀಘ೯ಹ್ರಸ್ವಲಯವೂ(-U) ದೀಘ೯ ದೀಘ೯ಲಯವು (- -) ಬರುವುದುಂಟು.
   -U U -
 ಸ  ಘಾ ನ್ಂ ಸೂ | ನುಂ ಶವಸಾ
  - U  - -
 ಪೃಥುಪ್ರಗಾ | ಮಾ ಸುಶೇವಂ 
    -U - -
ಮೀಡ್ವಾ ಆಸ್ಮಾ | ಕ್ಂ ಬಭೂಯಾತ್
 ಹೀಗಿದ್ದರೂ ಇಂಥ ವ್ಯತ್ಯಾಸಗಳಿಂದ ಉದಾತ್ತಾದಿಯಾದ ಸ್ವರಸಂಗೀತಕ್ಕೆ ಯಾವ ಆತಂಕವೂ ಉಂಟಾಗುವುದಿಲ್ಲ.ಆಲ್ಲದೆ ಆಕ್ಷರ ನಿಯಮ ಸರಿಹೋಗದ ಕಡೆಗಳಲ್ಲಿ,ಹೆಚ್ಚುಕಡಿಮೆಯ ಆಕ್ಷರ ಸಂಖ್ಯೆಯಿದ್ದಲ್ಲಿ,ಕೆಲವು ಹೂಂದಾಣೆಕೆಗಳನ್ನು ಮಾಡಿಕೂಳ್ಳ ಬೇಕಾಗುತ್ತದೆ.

ಪಾದಕ್ಕೆ ೮ ಆಕ್ಷರಗಳ ೩ ಪಾದಗಳನ್ನುಳ್ಳ ಉಕ್ತಪಾದ ಗಾಯತ್ರಿಯಲ್ಲದೆ ಆಕ್ಷರ ಸಂಖ್ಯೆಯಲ್ಲಿ ಪಾದಪಾದಕ್ಕೆ ಉಂಟಾಗುವ ವ್ಯತ್ಯಾಸಗಳಿಗೆ ಆನುಗುಣವಾಗಿ ನಾಗೀ ಗಾಯತ್ರಿ,ವಾರಾಹೀ ಗಾಯತ್ರಿ ಮುಂತಾದ ಭೇದಗಳನ್ನು ಮಾ ಡಿರುವುದು ಕೂಡ ಕಂಡುಬರುತ್ತದೆ;೧) ಚತುಷ್ಟಾದ್ಗಾಯತ್ರಿ ;6 8 ೨) ಪಾದನಿಚೃದ್ಗಾಯತ್ರಿ; 7/3 ೩)ಆತಿಪಾದ ನಿಚೃದ್ಗಾಯತ್ರಿ;6,8,7=21 ೪)ನಾಗೀಗಾಯತ್ರಿ; 9,9,6=24 ೫)ವಾರಾಹೀ ಗಾಯತ್ರಿ;6,9,9=24 ೬) ವಧ೯ ಮಾನಾ ಗಾಯತ್ರಿ;6,7,8=21 ೭)ಪ್ರತಿಷ್ಟಾ ಗಾಯತ್ರಿ 8,7,6=21.