ಪುಟ:Naavu manushyare - Niranjana.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ನಾಟಕ ಸಾರಸ್ಯಕರ. ಆದರೆ-"

ಅವರ ಮುಖ ನೋದಿದೆ.ಮು೦ದುವರಿಸಿದರು

"ಜಾನ್‍ಬುಲ್ ಪಾತ್ರ ಮಾತ್ರ ಬೇಡ. ಅದನ್ನು ತೆಗೆದು ಹಾಕಿ

ಅನುಮತಿ ಕೊಡೋಣ."

ನಾಟಕ ಸೀಳು ಬಿಟ್ಟಂತೆ ಆಗ್ತದಲ್ಲ?"

"Sorry Mr. Rao. ಸ್ಟೇಜ್ ಮೇಲೆ ಜಾನ್ಬುಲ್ ಚಿತ್ರಣ

ಸಲ್ಲದು....”

ಗಣಪತಿ ಹೈಸ್ಕೂಲಿನಲ್ಲಿ ಬುಲ್ ಇಲ್ಲದೆಯೇ 'ಅಮೃತ್' 1 ಆಡಿದೆವು. ಆ

ವರ್ಷ ಬಿಜಾಪುರದ ಬರಗಾಲದ ವೇಳೆ ಶ್ರೀರಂಗರು ಬರೆದಿದ್ದ'ಬೀದಿಯ ಭೂತ' ಏಕಾಂಕವನ್ನೂ ಅಭಿನಯಿಸಿದೆವು. ಯಶಸ್ಸು ಲಭಿಸಿತು. ಸಂಘಟಕನಾದವನು ಹೊರಗೆ ಓಡಾಡಬೇಕೇ ಹೊರತು ಸ್ವತಃ ಬಣ್ಣ ಅಂಟಿಸಿಕೊಳ್ಳಬಾರದೆಂಬು ದನ್ನು ಆದಿನ ಕಲಿತೆ.

ಕಲಿತದ್ದನ್ನು. ಕೃತಿಗಿಳಿಸಲು ಅವಕಾಶ ದೊರೆತದ್ದು ೧೯೪೪ರಲ್ಲಿ

"ನಾವೂ ಮನುಷ್ಯರು!” ನಾಟಕವನ್ನು ಮಂಗಳೂರು ಮೈದಾನದಲ್ಲಿ ಬಯಲು ನಾಟಕವಾಗಿ ಆಡಿದಾಗ.

ಈ ಪುಸ್ತಕದ ಹೂರಣವೇ 'ನಾವೂ ಮನುಷ್ಯರು!'ನೀವು ಓದುವುದಕ್ಕೆ

ಮುನ್ನ ಅದರ ಪೃಥಕ್ಕರಣ, ಮೌಲ್ಯಮಾಪನ ಇತ್ಯಾದಿ ನಾನು ಮಾಡ ಬಾರದು.

೧೯೪೪ರ ನವೆಂಬರ್ ೭ ರಂದು 'ನಾವೂ ಮನುಷ್ಯರು!' ನಾಟಕದ

ಪ್ರಥಮ ಪ್ರದರ್ಶನ, ಮಂಗಳೂರು ಮೈದಾನಿನಲ್ಲಿ, ಮೇಜುಗಳ ಮೇಲೆ ಮೇಜುಗಳನ್ನಿರಿಸಿ ನಿರ್ಮಿಸಿದ ರಂಗಸ್ಥಲ, ಬಿದಿರು ಊರಿ ಮಾಡಿದ

1 ಕನ್ನಡದಲ್ಲಿ'ಅಮೃತ'