ಪುಟ:Naavu manushyare - Niranjana.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

 ಬಣ್ಣದ బಯలు | xix

ನನ್ನ ಪಾಲಿಗೆ ನಾಟಕ ಬರೆಯುವ ಕನಸು ಹಳೆಯದು. ಅದಿನ್ನೂ

ಹಸುರಾಗಿದೆಯಲ್ಲ. ಆಶ್ಚರ್ಯ!


* * *


ಇನ್ನೊಂದು ಲೇಖನವನ್ನು ಓದಿದಿರೆಂದರೆ, 'ನಾವೂ ಮನುಷ್ಯರು!'

ನಾಟಕದ ಪ್ರೇಕ್ಷಕ ಮಹಾಶಯರಾಗುತ್ತೀರಿ ನೀವು.

'ಭಾರತ್ತೀಯ ಜನತಾ ರಂಗಭೂಮಿ ಮತ್ತು ಪ್ರಗತಿಶೀಲ ಲೇಖಕರು'

ಎಂಬ ಲೇಖನವನ್ನು ನಾನು ಬರೆದದ್ದು ೧೯೪೪ರಲ್ಲಿ.'ನಾವೂ ಮನುಷ್ಯರು!' ರಚನೆಗೆ ಕೆಲದಿನ ಮುಂಚೆ ಇರಬೇಕು. ಜನತಾ ರಂಗಭೂಮಿ ದೇಶದ ನಾಟಕ ಕ್ಷೇತ್ರದಲ್ಲಿ ಆಗ ಮೂಡಿಬಂದ ಹೊಸ ಅಲೆ.

ಮುಂಬಯಿಯಲ್ಲಿ 'ಇಪ್ವಾ' ಈಗಲೂ ಜೀವಂತವಾಗಿದೆ. ಬೇರೆಡೆ

ಗಳಲ್ಲಿ ಅದು ಬೇರೆ ಬೇರೆ ರೂಪ ತಳೆದಿದೆ. ನಾಟಕ ಜನತೆಗೆ, ಬದುಕಿಗೆ ಹತ್ತಿರವಾಗಿರಬೇಕೆಂದು ಬಯಸುವವರಿಗೆಲ್ಲ ಜನತಾರಂಗಭೂಮಿ ಅನಿವಾರ್ಯ ವಾಗಿ ಗಮನಿಸಲೇಬೇಕಾದ ಅಧ್ಯಾಯ.

ಪ್ರವರ ಸಾಕುಮಾಡಲೆ? ಆಗಲೇ ಹೇಳಿದಂತೆ, ಲೇಖನ ಓದಿದ ಮೇಲೆ,

“ನಾವೂ , ಮನುಷ್ಯರು!" ಎಂದು ಪ್ರತಿಪಾದಿಸುವ ಪಾತ್ರಗಳನ್ನು ಭೇಟಿ ಯಾಗುತ್ತೀರಿ. ನಮಸ್ಕಾರ.


೭-೧೦-೧೯೮೫

ಬೆಂಗಳೂರು

ನಿರಂಜನ