ಪುಟ:Naavu manushyare - Niranjana.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರ್ಣಾಟಕದಲ್ಲಿ ಈ ಚಳವಳ

ಅ.ಭಾ. ಜನತಾ ರಂಗಭೂಮಿ ಕಾರ್ಯಕಾರಿ ಸಮಿತಿಯ ಸದಸ್ಯ

ರಲ್ಲೊಬ್ಬರಾದ ಕುಮಾರ ವೆಂಕಣ್ಣ ಅವರು ಬೆಂಗಳೂರಿನಲ್ಲಿರುವರು. ಮೈಸೂರಿನ ಸಮಿತಿಗೆ ಶ್ರೀಮತಿ ಕೇಸರಿ ಕೇಶವನ್ ಅವರು ಕಾರ್ಯದರ್ಶಿನಿ ಯಾಗಿದ್ದಾರೆ. ಬೆಂಗಳೂರಿನಲ್ಲಿ ಹಿಂದೊಮ್ಮೆ ತಾವೇ ಆರಂಭಿಸಿದ ಕಾರ್ಯ ವನ್ನು ಅವರೀಗ ಮೈಸೂರಲ್ಲಿ ಮುಂದುವರಿಸುತ್ತಿದ್ದಾರೆ. ಶ್ರೀ ಶಿವರಾಮಕಾರಂತರು 1 ಮಂಗಳೂರು ಸಮಿತಿಯ ಉದ್ಘಾಟನೆಯನ್ನು ೧೯೪೩ ರ ಆಗಸ್ಟಿನಲ್ಲಿ ನೆರವೇರಿಸಿದರು. ಅದೀಗ ತನ್ನ ಕಾರ್ಯಕಲಾಪಗಳನ್ನು ಮಾಡುತ್ತಿದೆ.

ಕರ್ಣಾಟಕದಲ್ಲಿ ಪ್ರಗತಿಶೀಲ ಲೇಖಕರ ಚಳವಳವೂ ಹೊಸತು;

ಎಳೆಯದು.ಈ ನಾಡಿನಲ್ಲಿ ಇನ್ನೂ ಶಿಶುವಾಗಿರುವ ಜನತಾ ರಂಗಭೂಮಿ ಪ್ರಗತಿಶೀಲ ಲೇಖಕ-ಕಲಾವಿದರ ಯತ್ನದಿಂದ ಮುಂದೆ ಸಾಗಲಿದೆ-೧೯೪೪





೧.ಉದ್ಘಾಟನೆಗೆ ಕೋ. ಶಿ. ಕಾರಂತರನ್ನು ಕರೆದವನು ಈ ಲೇಖಕನೇ.