o
ಹಂಚಿನ ಕಾರ್ಖಾನೆಯ ಕೆಲಸಗಾರ ರಾಮಣ್ಣನ ಗುಡಿಸಲು. ಹೊಟ್ಟೆನೋವು,
ಕಫ ಪೀಡಿತನಾಗಿ ರಾಮಣ್ಣ ಮಣ್ಣಿನ ತಿಟ್ಟೆಯ ಮೇಲೆ ಹಾಸಿದ ಹರಕು
ಚಾಪೆಯಲ್ಲಿ ಒಂದು ಹೊದಿಕೆ ಹೊದ್ಡುಕೊ೦ಡು ಮಲಗಿದ್ದಾನೆ. ನಾಟಕ
ಆರಂಭವಾದಾಗ ಕಾಣುವುದು ಈ ದೃಶ್ಯ.
ಸ್ವಲ್ಪ ಹೊತ್ತು ಮೌನ....ಕೆమ్ము.... "ಅಯ್ಯೋ" ನರಳುವಿಕೆ....
ಹತ್ತಿರದಲ್ಲಿರುವ ಮಣ್ಣಿನ ಪಾತ್ರವನ್ನು ಅಲ್ಲಾಡಿಸಿ ನೋಡುವನು.
ರಾಮಣ್ಣ :
ಥೂ! ನೀರೂ ಮುಗಿದುಹೋಯಿತು....ಯಾರಪ್ಪ ಈಗ
ಒಳಗಿಂದ ತರುವುದು? ರಾಮಾ! ಲಕ್ಷ್ಮಣಾ!....ಸೀತೆ!
ಸಾವಿತ್ರಿ!....ನಮ್ಮರುಕ್ಕುವಾದರೂ ಬರಬಾರ್ದೆ....ಬಯ್ಯ
ಆಯಿತು ಇಷ್ಟರಲ್ಲೇ-
(ಮೆల్లನೆ ಎದ್ದು, ಹೊದಿಕೆ ಸರಿಸಿ, ಕೆಳಕ್ಕೆ ತೆವಳಲು ನೋಡು
ವನು. ಕೃಶವಾದ ದೇಹ. ಮುಖ ಕಳೆಗು೦ದಿದೆ. ಗಡ್ಡ
బందిದೆ....ಮೈಮೇಲೆ ಅ೦ಗವಸ್ತವಿಲ್ಲ....ಸೊ೦ಟದಲ್ಲೊಂದು
ಸಣ್ಣ ಬಟ್ಟೆ....ಕೆಮ್ಮುವನು.)
(ರುಕ್ಕು ಒಳಬರುವಳು. ಕೈಯల్లి బుತ್ತಿಯ ಪಾತ್ರ....ಕೆಂಪು
ಬಣ್ಣದ ನೂಲಿನ ಸೀರೆ ಉಟ್ಟಿದ್ದಾಳೆ....ಇನ್ನೊಂದು ಕೈಯಲ್ಲಿ
ಬಂಗುಡೆ ಕಟ್ಟು.)
ರುಕ್ಕು:
ಕೂತಲ್ಲಿ ಕೂತುಕೊಳ್ಲಿಕ್ಕೂ ಆಗುವುದಿಲ್ವೊ ನಿಮಗೆ?
ರಾಮಣ್ಣ:
ಹಾo!
(ಬಾಯ್ತೆರೆದು)
ಹೆಸರು ಎತ್ತಿದ್ದೇ ಎತ್ತಿದ್ದು ಬಂದೇ ಬಿಟ್ಲಲ್ಲ! ಪಡ್ಡ
ಆಯ್ತು....ನೂರು ವರ್ಸ ಇಡೀ ಬದುಕ್ಲಿಕ್ಕೆ ಉಂಟಲ್ಲ
ಮಾರಾಯ್ತಿ ನೀನಿನ್ನು!
ರುಕ್ಕು:
(ಬುತ್ತಿ ಪಾತ್ರೆಯನ್ನು ಮೂಲೆಯಲ್ಲಿರಿಸಿ)
ನಿಮ್ಗೆ ಹೆದರಿಕೆ ಅಂತ ತೋರ್ಥದೆ ನಾನು ನೂರು ವರ್ಸ
ಬದುಕಿದ್ರೆ?....