ವಿಷಯಕ್ಕೆ ಹೋಗು

ಪುಟ:Nanna Nalla.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦

ನನ್ನ ನಲ್ಲ

11. ಶರಣರ ವಚನಗಳು

ರಯದಿ ಕೊಡವನ್ನೊಡೆದು

ಬಯಲ ನೋಡುವುದೇಕೆ ?


ಒಳಗಿಹುದೆ ಬಯಲೆಂದು

ತಿಳಿದಡದು ಸಾಲದೇ ?


ಅಂಗುರೀಯವ ಮುರಿದು

ಬಂಗಾರ ನೋಡುವರೇ ?


ಕನಕವೆಂದದನೆ ಸಲೆ

ನೆನಿಸಲದು ಸಾಲದೇ ?


ತನಗಳಿವ ತಂದು ನೆರೆ

ಘನವ ನೋಡುವದೇಕೆ ?


ಅರಿಯೆ ತಾಂ ಘನವೆಂದು

ಗುರುವೇ | ಅದು ಸಾಲದೇ ?


______