ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೭೫
ನನ್ನ ನಲ್ಲ
22. ದೀನಬಂಧು ಸಿ.ಎಫ್. ಆಂಡ್ರೂಜ್
(ಸೀಸಪದ್ಯ)
ಸತ್ಯಶೋಧಕನಾಗಿ ನಿತ್ಯಬೋಧಕನಾಗಿ
ಭಾರತಾಂಬೆಯ ಭಕ್ತಶ್ರೇಷ್ಠನಾಗಿ
ದುಷ್ಟದೂಷಕನಾಗಿ ಶಿಷ್ಟತೋಷಕನಾಗಿ
ದೀನಸೇವಕ ದೀನಬಂಧುವಾಗಿ
ಅಸಹಕಾರದ ಪರಿಯ ವಿಷದಗೊಳಿಸುವನಾಗಿ
ಅಪರದೇಶದ ಅಸಹಯೋಗಿಯಾಗಿ
``ನೆರೆಯವರ ನಿನ್ನಂತೆ ಅರಿಯೆಂದು ತನ್ನವರಿ
ಗರಿಕೆಪಡಿಸುವ ಕ್ರಿಸ್ತದಾಸನಾಗಿ 1
``ಚೂರು ಬೆಲ್ಜಮನಾಡ ಸ್ವಾತಂತ್ರ್ಯ ಸ್ಥೈರ್ಯಕಾಗಿ
ಘೋರ ಯುದ್ಧಕೆ ನಿಂತೆವೆಂದೇಕ ಕಂಠವಾಗಿ
ಸಾರುತಿರುವವರೇಕೆ ಭಾರತಿಯ ಬಿಡಿಕೆಗಾಗಿ
ಹೋರಾಡಲಾರಿರೋ? ಎಂದು ಸುಸ್ಪಷ್ಟವಾಗಿ 2
ತಾನೆಲ್ಲ ಪಾಶ್ವಾತ್ಯ ಪೂಮುಖರ್ಕಳಂ ಕೇಳುವಂ
``ದಾನಬೇಕಿಲ್ಲೆಮಗೆ; ಸ್ವಾತಂತ್ರ್ಯ ಬೇಕೆನ್ನುವಂ
ಜ್ಞಾನವಿಧಿ-ಕವಿ-ರವಿಯ ನೆರಳಿನಂತಿರ್ದು ಮೆರೆವಂ
ಮಾನನಿಧಿಯಾಂಡ್ರುಜಂ ಮಾನವರೊಳೊಗೆದ ದೇವಂ 3
__________