ಪುಟ:Rangammana Vathara.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

90

ಸೇತುವೆ

ಮೂಡಿದಾಗಲೆಲ್ಲ ಜಯರಾಮು ಪುಸ್ತಕಗಳಲ್ಲಿ ವಿವರಣೆ ಹುಡುಕುತ್ತಿದ್ದ. ಆದರೆ
ಸಮರ್ಪಕ ಉತ್ತರ ಅಲ್ಲಿ ಪ್ರತಿ ಸಲವೂ ಸಿಗುತ್ತಿರಲಿಲ್ಲ.
ಮನಸ್ಸಿನ ಆ ಭಾವನೆಗಳಿಗೆ ಮಾತಿನ ರೂಪ ಕೊಟ್ಟು ಆತ ಕವಿತೆಗಳನ್ನು ಬರೆದ,
ತಂಗಿ ರಾಧಾಗೆ ಅವು ಅರ್ಥವಾಗಲಿಲ್ಲಿ. ಆದರೆ ಆಕೆಯ ದೃಷ್ಟಿಯಲ್ಲಿ ಅಣ್ಣ ನಿಸ್ಸಂದೇಹ
ವಾಗಿಯೂ ದೊಡ್ಡ ಕವಿಯಾಗಿದ್ದ. ಆಕೆ ಕೇಳಿದ್ದಳು:
"ಅಣ್ಣ, ಇದನ್ನೆಲ್ಲ ಅಚ್ಚು ಹಾಕಿಸಿ ಒಂದು ಪುಸ್ತಕ ಮಾಡಬಹುದು, ಅಲ್ವಾ ?"
"ಹುಚ್ಚಿ! ಅದಕ್ಕೆಲ್ಲಾ ದುಡ್ಬೇಕು."
ಆ ವಿಷಯ ರಾಧೆಗೆ ಅರ್ಥವಾಗಿರಲಿಲ್ಲ. ಆದರೆ 'ದುಡ್ಡು'ಎಂಬ ಪದ ಅವಳ
ಬಾಯಿ ಮುಚ್ಚಿಸಿತು. ತಮ್ಮ ಮನೆಯಲ್ಲಿ ದುಡ್ಡು ಇಲ್ಲ ಎಂಬುದಷ್ಟು ಆಕೆಗೆ ಗೊತ್ತಿತ್ತು.
ತಂದೆಯೂ ಒಮ್ಮೆ ಆ ಕವಿತೆಗಳನ್ನು ನೋಡಿದರು. ಆಗ ಜಯರಾಮ ಅವರ
ಮುಖವನ್ನೇ ಪರೀಕ್ಷಿಸಿದ. ಅವರು ಪುಟ ತಿರುವಿ ಹಾಕಿ, ಬಡ ಕನ್ನಡಕವನ್ನು ತೆಗೆ
ದಿಟ್ಟು, ಮಗನನ್ನೇ ದಿಟ್ಟಿಸಿ ಹೇಳಿದರು.
"ಹುಂ. ಪಾಠ ಓದೋದು ಬಿಟ್ಬಿಟ್ಟು, ತಲೆ ಕೆಡಿಸ್ಕೊಂಡು ಎಲ್ಲಾದರೂ ಕೂತೆ
ಅಂದ್ರೆ ...."
ಜಯರಾಮುಗೆ ಮುಖಕ್ಕೆ ಹೊಡೆದ ಹಾಗಾಯಿತು. ಆತ ಮೂಕನಾಗಿ ಹೋದ.
ಬಹಳ ಪುಸ್ತಕಗಳನ್ನೋದಿ ಸಾಹಿತ್ಯದ ಅಭಿರುಚಿಯಿದ್ದ ತಂದೆಯಿಂದ ಪ್ರೋತ್ಸಾಹದ
ಮಾತು ಬರುವುದೆಂದು ಆತ ನಿರೀಕ್ಷಿಸಿದ್ದು ಸುಳ್ಳಾಯಿತು. ತನ್ನ ಕಾವ್ಯಸೃಷ್ಟಿಗೆ ಇದೇ
ಕೊನೆ ಎಂದುಕೊಂಡ.
ಅದಾದ ಮೇಲೆ ಒಮ್ಮೆ ವಠಾರದಲ್ಲಿ ಸೌದೆ ಪ್ರಕರಣ ನಡೆಯಿತು. ಇನ್ನೊಬ್ಬರ
ಮನೆಯಿಂದ ಹಾರವನ್ನಲ್ಲ ಸೀರೆಯನ್ನಲ್ಲ ಎರಡು ತುಂಡು ಸೌದೆಯನ್ನು ಹೆಂಗ
ಸೊಬ್ಬಳು ಕದ್ದಳು. ಒಮ್ಮೆ ಒಳ್ಳೆಯವಳೆನಿಸಿಕೊಡಿದ್ದ ನಾರಾಯಣಿ ಆಗ ಕಳ್ಳಿ
ಯಾದಳು. ಎಂತೆಂತಹ ಹೀನ ಸ್ಥಿತಿಗೆ ಜನರನ್ನು ಬಡತನ ತಳ್ಳುತ್ತಿತ್ತು!
ಜಯರಾಮುವಿನ ಮೇಲೆ ಆ ಘಟನೆ ವಿಚಿತ್ರ ಪರಿಣಾಮವನ್ನು ಉಂಟು ಮಾಡಿತು. ನಾರಾಯಣಿಯನ್ನು ಲೇವಡಿ ಮಾಡಿದ ಹೆಂಗಸರೊಡನೆ ಆತ ಜಗಳವಾಡಿದ.
ಕಳವು ಮಾಡಿದ ಹೆಂಗಸಿನ ನೆರವಿಗೆ ಬಂದ ಹುಡುಗನನ್ನು ನೋಡಿ ಇತರರೆಲ್ಲ ನಕ್ಕರು.
ನೆಮ್ಮದಿ ಕೆಡಸಿಕೊಂಡ ಜಯರಾಮ ಹಾಗೆಯೇ ನಾಲ್ಕು ದಿನ ತಳ್ಳಿದ.
ಐದನೆಯ ದಿನ ಆತ ಕತೆ ಬರೆಯಲೆಬೇಕಯಿತು. "ಒಂದು ತುಂಡು ಸೌದೆ"
ಬರೆದು ಮುಗಿಸಿದ ಮೇಲೆ, ಅವನಿಗೆ ಹೃದಯ ಹಗುರವೆನಿಸಿತು.
ತಂಗಿ ರಾಧೆಯೇ ಎಂದಿನಂತೆ ಅದನ್ನು ಮೊದಲು ಓದಿದಳು, ಕುಣಿದಾಡಿದಳು
"ಅಯ್ಯೋ| ಎಷ್ಟು ಚೆನ್ನಾಗಿದೆ| ಅವರ ಮನೆ ಮುಂದೆ ನಿಂತ್ಕೊಂಡು ಓದ್ಬೇಕು
ಇದನ್ನ."
ಮಕ್ಕಳ ಸಂತೋಷ ತಾಯಿಯ ಎದೆಯಲ್ಲೂ ಅಸ್ಪಷ್ಟವಾಗಿ ಪ್ರತಿಧ್ವನಿಸದಿರ