ಪುಟ:Rangammana Vathara.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

91

ಲಿಲ್ಲ. ಆದರೂ ಆಕೆಯೆಂದಳು:
"ಹಾಗೇನೂ ಮಾಡ್ಬೇಡೀಪ್ಪ ಸದ್ಯ:"
ರಾಧೆ ಕೇಳಿದಳು:
"ಅಣ್ಣ, ಇದನ್ನ ಪತ್ರಿಕೆಗೆ ಕಳಿಸ್ಬಾರ್ದ ಅಣ್ಣ?"
ಕಳುಹಿಸಿ ನೋಡಬೇಕೆಂದು ಆತನಿಗೂ ಆಸೆಯಿತ್ತು. ಆದರೆ ಧೈರ್ಯವಿರಲಿಲ್ಲ.
ತನಗೆ ಮೆಚ್ಚುಗೆಯಾಗಿದ್ದ ಆ ಕತೆಯನ್ನು ದೊಡ್ದ ಪತ್ರಿಕೆಯ ಸಂಪಾದಕರು ಅಸ್ವೀಕೃತ
ವೆಂದು ಹಿಂತಿರುಗಿಸಬಹುದೆಂಬ ಭಯವಿತ್ತು.
ಪತ್ರಿಕೆಯಲ್ಲಿ ಆ ಕತೆ ಪ್ರಕಟವಾಗಿ ತನ್ನ ಹೆಸರೂ ಅಚ್ಚಾಗಿ ತನ್ನನ್ನು ಬರೆಹ
ಗಾರನೆಂದು ನಾಲ್ಕು ಜನ ಕರೆಯುವ ಕಲ್ಪನೆಯ ಚಿತ್ರ... ಅದು ಸೊಗಸಾಗಿತ್ತು... ಆ
ಆಸೆಯನ್ನು ಅದುಮಿ ಹಿಡಿಯುವುದು ಸಾಧ್ಯವಿರಲಿಲ್ಲ. ಕೊನೆಗೆ, ಅಗಲ ಕಿರಿದಾದ
ಒಂದು ಓಣಿಯಲ್ಲಿದ್ದ ಪುಟ್ಟ ಆಕೃತಿಯ ಪತ್ರಿಕೆಯಾದ 'ಕಥಾಪ್ರಿಯ' ನಿಗೆ ಜಯರಾಮು
ತನ್ನ ಕತೆಯನ್ನು ಕಳುಹಿಸಿಕೊಟ್ಟ. ಸ್ವತಃ ತಾನೇ ಆ ಸಂಪಾದಕರನ್ನು ಕಾಣುವ
ಸಾಹಸ ಮಾಡಲಿಲ್ಲ. ಆ ಅಮೂಲ್ಯ ಕೃತಿಯನ್ನು ರಚಿಸಿದವನು ಇನ್ನೂ ಬಾಲಕನೆಂದು
ತಿಳಿದರೆ ಅವರು ಅದನ್ನು ಪ್ರಕಟಿಸದೇ ಹೋಗಬಹುದೆಂಬ್ ಅಳುಕು.
ಮುಂದಿನ ತಿಂಗಳ "ಕಥಾಪ್ರೀಯ್"ನಿಗಾಗಿ ಕಾದು ಕುಳಿತದ್ದಾಯಿತು. ಅದರಲ್ಲಿ
ಅಚ್ಚಾಗಿರಲಿಲ್ಲ. ಜಯರಾಮು ಆ ಸಂಪಾದಕರಿಗೆ ಕಾಗದ ಬರೆದು ತನ್ನ ಹಸ್ತಪ್ರತಿಯ
ಬೇರೆ ಪ್ರಿಕೆಯವರು ಕೇಳಿದ್ದಾರೆ" ಎಂದು ಇನ್ನೊಂದು ಕಾಗದ ಬರೆದ. ಬೇಡವೆಂದು ಅವರು ತಿಳಿಸಿ
ಬೇರೆ ಪತ್ರಿಕೆಯವರು ಕೇಳಿದ್ದಾರೆ" ಎಂದು ಇನ್ನೊಂದು ಕಾಗದ ಬರೆದ. ಬೇಡವೆಂದು ಅವರು ತಿಳಿಸಲಿಲ್ಲ.
ಅನಂತರ ಬಂದ "ಕಥಾಪ್ರಿಯ" ಸಂಚಿಕೆಯಲ್ಲಿ "ಒಂದು ತುಂಡು ಸೌದೆ" ಅಚ್ಚಾ
ಗಿತ್ತು. ಬರೆದವರು: ಎಂ.ಎಸ್. ಜಯರಾಮು. ಅಣ್ಣ ತಂಗಿಯರ ಆನಂದಕ್ಕೆ
ಪಾರವೇ ಇರಲಿಲ್ಲ. ತಾಯಿಗೂ ಅದು ಹೊಸ ವಿಷಯವಾಗಿತ್ತು. ಆ ಪತ್ರಿಕೆಗಳಲ್ಲಿ
ಹೆಸರಾಂತ್ ಬರೆಹಗಾರರ ಕತೆಗಳಿರಲಿಲ್ಲ. ಆ ಕತೆಗಾಗಿ ತನಗೆ ನೀಡಿದ
ಪ್ರೋತ್ಸಾಹಕ್ಕಾಗಿ ವಂದಿಸಿ ಆತ ಆ ಸಂಪಾದಕರಿಗೆ ಇನ್ನೊಂದು ಕಾಗದ ಬರೆದ.
ಉತ್ತರ ಆಗಲೂ ಬರಲಿಲ್ಲ. ಆ ಕತೆಗಾಗಿ ತನಗೆ ಐದು ರೂಪಾಯಿ ಸಂಭಾವನೆ ಬಂದ
ಹಾಗೆ ಕನಸೂ ಬಿತ್ತು. ಆದರೆ ಕನಸಿನ ಲೋಕಕ್ಕೂ ವಾಸ್ತವ ಪರಿಸ್ಥಿತಿಗೂ ಹೋಲಿಕೆ
ಇರಲಿಲ್ಲ. ಸಂಭಾವನೆಯ ಹಣ ಹೋಗಲಿ, ಪತ್ರಿಕೆಯ ಒಂದು ಪ್ರತಿಯೂ ಆತನಿಗೆ
ಬರಲಿಲ್ಲ. ಆ ಪತ್ರಿಕೆಯನ್ನು ಹೆಚ್ಚು ಜನ ಓದಿದಂತೆಯೂ ತೋರಲಿಲ್ಲ. ಮಲ್ಲೇ
ಶ್ವರದ ಅಂಗಡಿ ಬೀದಿಯಲ್ಲಿ ಮಾತ್ರ ಒಂದು ಅಂಗಡಿಯಲ್ಲಿ ತಿಂಗಳ ಮೊದಲಲ್ಲಿ ಆರು
ಪ್ರತಿಗಳಿದ್ದುವು. ಒಂದನ್ನು ತಾನು ಕೊಂಡುಕೊಂಡಿದ್ದ. ಮತ್ತೆ ಎರಡು ವಾರ
ಬಿಟ್ಟು ಅತ್ತ ಹೋದಾಗ, ಊಳಿದ ಐದು ಪ್ರತಿಗಳೂ ಅಲ್ಲಿಯೇ ಇದ್ದುದು ಕಂಡುಬಂತು.
ಮತ್ತೊಮ್ಮೆ ಪ್ರವಾಸದಿಂದ ಹಿಂತಿರುಗಿದ ತಂದೆಯ ಕಣ್ಣಿಗೆ ಆ 'ಕಥಾಪ್ರಿಯ'