ಪುಟ:Rangammana Vathara.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

99

ಈಗಿನ ಕಾಲದವಳು. ಇವಳದೆಲ್ಲಾ ಸಿನಿಮಾ ಸಂಗೀತ ಇರಬಹುದು ಎಂದು ಭಾವಿಸಿ
ದ್ದರು ರಂಗಮ್ಮ. ತಮ್ಮ ಅನುಮಾನ ಸರಿ ಎಂಬುದು ಸ್ಪಷ್ಟವಾಗಲೆಂದು ಅವರು
ಗೋಡೆಯನ್ನು ಆಧರಿಸಿ ನಿಂತು ಹಾಡು ಕೇಳಲು ಸಿದ್ಧರಾದರು.
ಚಂಪಾವತಿ ಸುಮ್ಮನಿದ್ದಳು. ಸನ್ನಿವೇಶ ರೂಪುಗೊಂಡ ರೀತಿ ಕಂಡು ಆಕೆಗೆ
ಸಂತೋಷವಾಯಿತು.
ಹೊರಗೆ ನಿಂತಿದ್ದ ಕಮಲಮ್ಮನೇ ಮತ್ತೊಮ್ಮೆ ಹೇಳಿದಳು:
"ಹೇಳೀಮ್ಮಾ ಇನ್ನೊಂದು ಹಾಡು."
ಹಾಗೆ ಒತ್ತಾಯ ಮಾಡಿದ ಸ್ವರ ಇಂಪಾಗಿರಲಿಲ್ಲ.
ಚಂಪಾ ಮುಗುಳ್ನಕ್ಕು ಆರಂಭಿಸಿದಳು:
"ಕಾಲಹರಣ ಮೇಲರಾ ಹರೇ ಸೀತಾರಾಮ..."
ನಿಜವಾಗಿಯೂ! ಎಷ್ಟೋ ಜನರಿಗಿದು ಆನಿರೀಕ್ಷಿತವಾಗಿತ್ತು. ಈ ಸುಪ್ರಸಿದ್ದ
ಕೀರ್ತನೆ ಚಂಪಾವತಿಯ ಬಾಯಿಯಿಂದ ಹೊರಡಬಹುದೆಂದು ಯಾರೂ ನಿರೀಕ್ಷಿಸಿರ
ಲಿಲ್ಲ. ನಿಂತಿದ್ದ ರಂಗಮ್ಮ ಅಲ್ಲಿಯೆ ಕುಳಿತರು. ರಾಜಮ್ಮ ಎದುರು ಮನೆಯ
ಗೋಡೆಗೆ ಒರಗಿಕೊಂಡಳು.
ಹಾಡು ಮುಗಿದಾಗ ಒಂದು ಕ್ಷಣ ಯಾರೂ ಮಾತನಾಡಲಿಲ್ಲ. ಕೇಳುವವರು
ಮೂಕರಾಗುವಾಗ ಆ ಮೌನದ ಅರ್ಥವೇನೆಂಬುದು ಚಂಪಾವತಿಗೆ ಗೊತ್ತಿತ್ತು. ಸದ್ಯಃ
ಆಕೆಯ ಮಗು ಅತ್ತಿರಲಿಲ್ಲ. ಹಾಡು ಮುಗಿಸಿದ ತಾಯಿಯ ಮುಖವನ್ನೆ ನೋಡಿ ಆ
ಪೋರಿ ನಕ್ಕಳು.
ಈ ಸಭೆ ಸೇರಲು ತಾನೇ ಕಾರಣಳೆಂಬ ಹೆಮ್ಮೆಯಿಂದ ಅಹಲ್ಯಾ ಹೇಳಿದಳು:
"ಒಂದು ಕನ್ನಡ ಹಾಡು ಹೇಳ್ರೀ!"
ಬೇರೆಯೂ ಯಾರೋ ಸ್ವರ ಕೂಡಿಸಿದರು:
"ದೇವರ ನಾಮ ಹೇಳ್ರೀ!"
ವಠಾರದ ಒಡತಿಯನ್ನು ಮೆಚ್ಚಿಸಿದುದಾಯಿತೆಂದು ತಿಳಿದ ಚಂಪಾ, ಮತ್ತಷ್ಟು
ಸಮಾಧಾನದಿಂದ ಹಾಡಿದಳು:
"ಸುಲಭ ಪೂಜೆಯ ಮಾಡಿ ಬಲವಿಲ್ಲದವರು
ನಳಿನ ನಾಭನ ಪಾದ ನಳಿನ ಸೇವಕರು........."
ಕೇಳಿದವರನ್ನು ಮುಗ್ಧಗೊಳಿಸುವ ಸಮ್ಮೋಹನ ಶಕ್ತಿ ಚಂಪಾವತಿಗೆ ಇತ್ತೆಂಬು
ದರಲ್ಲಿ ಸಂದೇಹವಿರಲಿಲ್ಲ.
ಈ ಹಾಡು ಮುಗಿದಾಗ ರಂಗಮ್ಮ ತಲೆದೂಗುತ್ತ ಎದ್ದರು.
"ಇದು ದೇವರ ವರ ಚಂಪಾವತಿ,ನೀನು ಭಾಗ್ಯವಂತೆ," ಎಂದು ಹೇಳಿ, ಅವರು
ತಮ್ಮ ಬಾಗಿಲಿನತ್ತ ನಡೆದರು. ರಾಜಮ್ಮನೂ ಆಕೆಯನ್ನು ಹಿಂಬಾಳಿಸಿದಳು.

ಆದರೆ ಉಳಿದವರು ಹೊರಡಲು ಸಿದ್ಧರಿರಲಿಲ್ಲ. ಗಂಡಸರು ಯಾರೋ ಒಬ್ಬಿ