ಪುಟ:Rangammana Vathara.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮತ್ತೊಬ್ಬ ಗಂಡಸಿನ ಆಗಮನ. ಇನ್ನು ಏಳಲೇಬೇಕಲ್ಲಾ ಎಂದು ಹೆಂಗಸರು
ಚಂಪಾವತಿಯ ಮುಖವನ್ನುಮಿಕಿ ಮಿಕಿ ನೋಡಿದರು.
ಕುಳಿತಲ್ಲಿಂದಲೆ ಚಂಪಾವತಿ ಕೇಳಿದಳು;
"ಬ೦ದೇಬಿಟ್ರೇನು?"
ಹೆಬ್ಬಾಗಿಲಿಗೆ ಬಂದ ಶಂಕರನಾರಾಯಣಯ್ಯನಿಗೆ ಅಹಲೈಯ ಹಾಡಿನ ಸ್ವರ ಕೇಳಿ
ಸಿತು. ತನ್ನ ಮನೆಯ ಒಳ ಹೊರಗೆ ಜನ ಸೇರಿದ್ದರೆಂಬುದೂ ಅಸ್ಪಷ್ಟವಾಗಿ ಕಂಡಿತು.
ಆತ ಮುಗುಳುನಕ್ಕು, ಹಾಗೆಯೇ ಹಿಂತಿರುಗಿ ಹೊರಟು ಬಿಟ್ಟ.
"ವಾಪಸು ಹೋದ್ರು ಕಣ್ರಿ!"
ಆ ಹೆಂಗಸರಲ್ಲಿ ಕೆಲವರಿಗೆ ಆಶ್ಚರ್ಯವಾಯಿತು. ಕೆಲವರಿಗೆ ಚಂಪಾವತಿಯ
ಯಜಮಾನರು ಸಿಟ್ಟಾದರೇನೋ ಎಂದು ಅಳಕು.
ಆದರೆ ತನ್ನ ಗಂಡನನ್ನು ಚೆನ್ನಾಗಿ ತಿಳಿದಿದ್ದ ಚಂಪಾವತಿ ಹೇಳಿದಳು:
"ಹೊಗಲಿ ಬಿಡಿ. ಆಮೇಲೆ ಬರ್ತಾರೆ."
ಕುಳಿತಿದ್ದವರಲ್ಲಿ ಕೆಲವರೆಂದರು:
"ಕೊನೆಯದು ಒಂದು ನೀವೇ ಹೇಳಿ ಚಂಪಾವತಿ."
ಯಾವುದನ್ನು ಹೇಳುವುದು ಯೋಗ್ಯವೆಂದು ಚಂಪಾ ಒಂದು ಕ್ಷಣ
ಯೋಚಿಸಿದಳು.
"ಯಾವುದಾದರೂ ಮೈಸೂರು ಮಲ್ಲಿಗೆ ಹಾಡು ಹೇಳ್ಲೇನ್ರೀ?"
"ಓ! ಚೆನಾಗಿರುತ್ತೆ, ಅದನ್ನೇ ಹೇಳಿ," ಎಂದಳು ಅಹಲ್ಯಾ. ಕಮಲಮ್ಮ
ಮುಖ ಸ್ವಲ್ಪ ಸೊಟ್ಟಗೆ ಮಾಡಿದರು. ಆದರೆ ಆ ಹೆಂಗಸರಿಗೆ 'ಮೈಸೂರು ಮಲ್ಲಿಗೆ'
ಹಾಡುಗಳು ಅಪರಿಚಿತವಾಗಿರಲಿಲ್ಲ. ರಂಗಮ್ಮನೆದುರು 'ಆ ಹಾಡುಗಳು ಚೆನ್ನಾಗಿವೆ'
ಎಂದು ಹೇಳುವುದು ಸಾಧ್ಯವಿಲ್ಲದೆ ಹೋಗಿದ್ದರೂ ಕದ್ದು ತಿನ್ನುವ ಕೊಬ್ಬರಿ ಬೆಲ್ಲದ
ಹಾಗೆ ಅವು ಸಿಹಿಯಾಗಿದ್ದುವು.
ಚಂಪಾ ಪ್ರತಿಯೊಂದು ಪದಕ್ಕೂ ಜೀವ ತುಂಬಿ ಮೋಹಕವಾಗಿ ಹಾಡಿದಳು:
"ರಾಯರು ಬ೦ದರು ಮಾವನ ಮನೆಗೆ
ರಾತ್ರಿಯಾಗಿತ್ತು.
ಹುಣ್ಣಿಮೇ ಹರಿಸಿದ ಬಾನಿನ ನಡುವೆ
ಚಂದಿರ ಬಂದಿತ್ತು ತುಂಬಿದ ಚಂದಿರ ಬಂದಿತ್ತು..."
ಈ ಹಾಡು ಮುಕ್ತಾಯವೇ ಇಲ್ಲದೆ ಹೀಗೆಯೇ ಸಾಗಲಿ ಎನ್ನಿಸಿತು ಎಲ್ಲರಿಗೂ.
ಮಾವನ ಮನೆ, ರಾಯರು, ಪದುಮ....ಪ್ರತಿಯೊಬ್ಬರ ದಾಂಪತ್ಯ ಜೀವನದಲ್ಲೂ.
ಒಂದಲ್ಲ ಒಂದು ರೀತಿಯಲ್ಲಿ ಆ ಘಟ್ಟಗಳು ಕಳೆದಿದ್ದುವು. ಕವಿ ಹಾಡಿದಷ್ಟು ಪ್ರಿಯ
ವಾಗಿರಲಿಲ್ಲ ಯಾವುದೂ, ಮಾವನ ಮನೆಗೆ ರಾಯರು ಮೊದಲು ಬಂದಾಗ ಆದ