ಪುಟ:Rangammana Vathara.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

106

ಸೇತುವೆ

"ಕೊನೇ ಮನೆಯವರು ಒಂದೆರಡು ಹಾಡು ಹೇಳಿದ್ರು ಅಣ್ಣ. ಅದನ್ನ
ಕೇಳೋಕೆ ಈಕೆ ಬಂದಿದ್ರು ."
"ಗೊತಾಯ್ತು ಕಣೇ..."
"ಅಯ್ಯೋ!ಹ್ಯಾಗೆ ಹೊಡೀತಿದಾನೆ ಆತ!"
ಮತ್ತೆ ಹೊಸದಾಗಿ ಹೆಂಗಸಿನ ಧ್ವನಿ ಕಳಿಸಿತು:
"ಅಯ್ಯೋ ಹೋಡೇಬೇಡೀಂದ್ರೆ....ದಮ್ಮಯ್ಯ...."
ಜಯರಾಮು ಅವುಡುಕಚ್ಚಿ ಕಂಪಿಸುವ ಧ್ವನಿಯಲ್ಲಿ ಹೇಳಿದ:
"ಪಿಶಾಚಿ!ಬೆಲ್ಟು ಬಿಚ್ಛಿ ಹೊಡೀತಿದಾನೋ ಏನೋ...."
"ಥೂ!ಆತ ತುಂಬಾ ಕೇಟ್ಟೋನು."
"ಹೆಂಡತಿ ಅಂದರೆ ಕಾಲಿನ ಕಸ.ಇದು ಲಾಕಪ್ಪೊಂತ ತಿಳಕೊಂಡಿದಾನೆ. ಮ್ಯೆ
ಚರ್ಮ ಸುಲಿಯೋಕೆ ಅಲ್ಲಿ ಯಾರೂ ಇವತ್ತು ಸಿಗಲಿಲ್ವೇನೋ...."
"ಹೋಗಿ ರಂಗಮ್ನೋರನ್ನ ಕರೇಲೆ ಅಣ್ಣ?"
"ಬೇಡ ರಾಧಾ. ಇನ್ನೇನು ಅವರೇ ಬಂದ್ಬಿಡ್ತಾರೆ.
"ಜಯರಾಮು ರಂಗಮ್ಮನವರ ನಡೆ ನುಡಿಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ.
ವಠಾರದಲ್ಲಿ ಜಗಳ ಆರಂಭವಾದರೆ ಆ ಕ್ಷಣವೇ ಅವರು ಬರುತ್ತಿರಲಿಲ್ಲ.ಪರಿಸ್ಥಿತಿ
ತೀಕ್ಷ್ಣತೆಯ ಘಟ್ಟವನ್ನು ದಾಟಿ ಇಳಿಮುಖವಾದಾಗ ರಂಗಮ್ಮ ಬಂದು ಸ್ವರವೇರಿಸಿ
ಮಾತನಾಡುತ್ತಿದ್ದರು:
"ಏನದು ಗಲಾಟೆ? ಈ ವಠಾರ ಕುಡುಕರ ಕೇರಿ ಕೆಟೋಯ್ತೆ!"
ಆಗಾಗ್ಗೆ ದೇಹದ ಉಗಿ ಹೊರಹೋಗಲು ಅವಕಾಶ ಕೊಡುವುದು ಅಗತ್ಯ
ಎಂಬುದು ಅವರ ಅಭಿಪ್ರಾಯವಾಗಿತ್ತು.
ಈ ದಿನವೂ ಅವರ ಬಂದು ಪೋಲೀಸನ ಮನೆ ಬಾಗಿಲಲ್ಲಿ ನಿಂತರು:
"ರಂಗಸ್ವಾಮೀ!ರಂಗಸ್ವಾಮೀ!ಏನ್ರೀ ಅದು?"
ಒಂದು ಕ್ಷಣ ಮೌನ. ಆ ಬಳಿಕ, ತನಗೆ ಸಹಾನುಭೂತಿ ತೋರುವವರು ಬಂದ
ರೆಂದು, ಹೆಂಗಸು ಬಾಗಿಲಿನ ಹೋರಗೂ ಕೇಳಿಸುವಂತೆ ಗಟ್ಟಿಯಾಗಿ ಅತ್ತಳು.
ಪೋಲೀಸ್ ಖಾತೆಯವನೆಂಬ ಕಾರಣದಿಂದ ಬಹುವಚನದ ಗೌರವ ಆತನಿಗೆ
ರಂಗಮ್ಮನಿಂದ ದೊರೆಯುತ್ತಿತ್ತು.
ಉತ್ತರ ಬಂದೇ ಇದ್ದುದನ್ನು ಕಂಡು ರಂಗಮ್ಮ ಮತ್ತೋಮ್ಮೆ ಕೇಳಿದರು:
"ರಂಗಸ್ವಾಮಿ ಏನಪ್ಪಾ ಅದು?"
ರಂಗಸ್ವಾಮಿ ಬಾಗಿಲು ತೆರೆಯದೆಯೇ ಹೇಳಿದ:
"ನೋಡಿ ರಂಗಮ್ನೋರೆ ಈಕೆ ಮಾಡಿರೋದು. ಇವತ್ತು ರಾತ್ರೆ ಡ್ಯೂಟಿ
ಇದೇಂತ ಆಗ್ಲೇ ಹೇಳಿದ್ದೆ. ಬಂದು ಒಂದು ತುತ್ತು ತಿಂದು ಹೋಗೋಣ ಅಂದರೆ,
ಇಲ್ಲಿ ಬಡಿಸೋವರಿಗೇ ಗತಿ ಇಲ್ಲ. ಸಂಗೀತ ಕೇಳೋಕೆ ಹೋಗಿದಾಳೆ ಈ