ಪುಟ:Rangammana Vathara.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

107

ಮಹಾರಾಯ್ತಿ...."
"ಹೋಗಲಿ ಬಿಡಪ್ಪಾ. ಆಷ್ಟಕ್ಕೆಲ್ಲಾ_"
"ನೀವು ಹೋಗಿ ರಾನ್ಗಮ್ನೋರೆ. ಹೊರಗೆ ದುಡಿಯೋ ಗಂಡಸಿನ ಕಷ್ಟ
ಯಾರಿಗೆ ಗೊತ್ತಾಗುತ್ತೆ?"
ಆ ಸಂಭಾಷಣೆ ಕೇಳಿಸುತ್ತಿದ್ದ ಉಪಧ್ಯಾಯರು ಹೆ೦ಡತಿಯತ್ತ ನೋಡಿದರು. ಓದುತ್ತಿದ್ದ ಇಬ್ಬರು ಹುಡುಗರೂ ಪರಸ್ಪರ ಮುಖ ನೋಡಿಕೊ೦ಡರು.ರಾಜಮ್ಮ
ಬಾಗಿಲು ಬಳಿ ನಿ೦ತರು.ಗು೦ಡಣ್ಣ ಬಾಗಿಸಿದ ತಲೆಯನ್ನು ಎತ್ತಲಿಲ್ಲ.
ಒಳಗೆ ನೆಲದ ಮೇಲೆ ಮುದುರಿದ್ದ ಹೆ೦ಗಸು ಎದ್ದು ಕುಳಿತಳು. ಬಾಗಿಲು
ತೆರೆಯಿತು.ಕೈಯಲ್ಲಿ ಪೇಟ ಹಿಡಿದುಕೊ೦ಡು ರ೦ಗಸ್ವಾಮಿ ಹೊರಬ೦ದ. ಕತ್ತಲಲ್ಲಿ
ಆ ಮುಖ ಯಾರಿಗೂ ಕಾಣಿಸಲಿಲ್ಲ.
"ಯಾಕಪ್ಪ ಹೊರಟ್ಬಿಟ್ರಿ?"-
_ಎ೦ದು ರ೦ಗಮ್ಮ ಕೇಳುತ್ತಿದ್ದ೦ತೆಯೇ ಆತ ಅ೦ಗಳ ದಾಟಿ ಬೀದಿಗಿಳಿದ.
ಒಳಗಿನಿ೦ದ ಹೆ೦ಗಸು ಗೋಳಾಡಿದಳು:
"ಊಟ ಮಾಡ್ದೇನೇ ಹೋಗ್ತಿದಾರೆ ರ೦ಗಮ್ನೋರೇ..
"ರಾಜಿ ಮಾಡಿಸಲೆ೦ದು ರ೦ಗಮ್ಮ ಕರೆದರು:
"ರ೦ಗಸ್ವಾವೂ!
ಗ೦ಡಸು ಕೇಳಲೇ ಎಲ್ಲ.' ಡ್ಯೂಟಿ'ಗಾಗಿ ಆತ ಹೊರಟು ಹೋದ.
ರ೦ಗಮ್ಮ ಸ೦ತ್ಯೆಸುವ ನುಡಿಗಳನ್ನಾಡುತ್ತಿದ್ದ೦ತೆಯೇ ಈಗ ರ೦ಗಸ್ವಾಮಿಯ
ಹೆ೦ಡತಿ, ಹೃದಯಪಾಟತ್ರೆಯನ್ನು ಆ ದಿನ ಮಟ್ಟಿಹಗೆ ಬರಿದುಗೋಳಿಸಲೆ೦ದು ತು೦ಬಿದ
ದುಂಖವನ್ನೆಲ್ಲ ಹೋರಕ್ಕೆ ಹರಿಸಿದಳು.
ಜಯರಾಮು ನಿಟ್ಟುಸಿರುಬಿಟ್ಟು ಬೇಸರದ ಧ್ವನಿಯಲ್ಲಿನ ಹೇಳಿದ:
"ನಡೀ ರಾಧಾ, ಮನೆಗೆ ಹೋಗೋಣ."
ಅವರು ಮಹಡಿಯ ಮೆಟ್ಲಲೇರುತ್ತಿದ್ದಂತೆಯೇ,ಶಂಕರನಾರಾಯಣಯ್ಯ
ಮತ್ತು ಚಂದ್ರಶೇಖರಯ್ಯ ಎಬ್ಬರೂ ವಠಾರಕ್ಕೆ ಬಂದರು.ಚಂದ್ರಶೇಖರಯ್ಯನ
ಕೈಯಲ್ಲಿ ಎಂದಿನಂತೆ ಕಡತಗಳಣನ್ನು ಹೊತ್ತ ಚರ್ಮದ ಚೀಲವಿತ್ತು.ಶಂಕರನಾರಾ
ಯಣಯ್ಯನ ಕೈಲೋಂದು ಹಸುರೆಲೆಯ ಪೊಟ್ಟಣವಿತ್ತು-ನಿತ್ಯದಂತೆಯೇ.
"ಬರ್ತೇನಿ ಶಂಕರನಾರಾಯಣಯ್ಯ. ಗುಡ್ ನೈಟ್ಎಂದು ಚಂದ್ರಶೇಖ
ರಯ್ಯನೆಂದ ಶಂಕರನಾರಾಯಣಯ್ಯ ಮಾರುತ್ತರವಿತ್ತ:
"ನಮಸ್ಕಾರ,ನಮಸ್ಕಾರ."
ಮಹಡಿಯನ್ನೇರತೊಡಗಿದ್ದ ಅಣ್ಣ ತಂಗಿಯರನ್ನು ಕಂಡು ಚಂದ್ರಶೇಖರಯ್ಯ
ಸ್ವಲ್ಪ ವೇಗವಾಗಿಯೇ ಹೆಜ್ಜೆ ಹಾಕಿದ. ಜಯರಾಮು ಮಾತನಾಡಿಸಲೇಬೇಕಾಯಿತು.
"ಇವತ್ತು ಬೇಗ್ನೆ ಬಂದ್ಬಿಟ್ಟಿದೀರಾಲ್ಲ ಚಂದ್ರಶೇಖರ್ ರವರೆ?"