ಪುಟ:Rangammana Vathara.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

106

ಸೇತುವೆ

"ಕೊನೇ ಮನೆಯವರು ಒಂದೆರಡು ಹಾಡು ಹೇಳಿದ್ರು ಅಣ್ಣ. ಅದನ್ನ
ಕೇಳೋಕೆ ಈಕೆ ಬಂದಿದ್ರು."
"ಗೊತ್ತಾಯ್ತು ಕಣೇ.."
"ಅಯ್ಯೋ ! ಹ್ಯಾಗೆ ಹೊಡೀತಿದಾನೆ ಆತ!"
ಮತ್ತೇ ಹೊಸದಾಗಿ ಹೆಂಗಸಿನ ಧ್ವನಿ ಕೇಳಿಸಿತು:
"ಅಯ್ಯೋ ಹೊಡೀಬೇಡೀಂದ್ರೇ...ದಮ್ಮಯ್ಯ.."
ಜಯರಾಮು ಅವುಡುಕಚ್ಚಿ ಕಂಪಿಸುವ ಧ್ವನಿಯಲ್ಲಿ ಹೇಳಿದ:
"ಪಿಶಾಚಿ!ಬೆಲ್ಟು ಹೊಡೀತಿದಾನೋ ಏನೋ.."
"ಥೂ!ಆತ ತುಂಬಾ ಕೆಟ್ಟೋನು."
"ಹೆಂಡತಿ ಅಂದರೆ ಕಾಲಿನ ಕಸ .ಇದು ಆಕಪ್ಪೂಂತ ತಿಳಕೊಂಡಿದಾನೆ.ಮೈ
ಚರ್ಮ ಸುಲಿಯೋಕೆ ಅಲ್ಲಿ ಯಾರೂ ಇವತ್ತು ಸಿಗಲಿಲ್ವೇನೋ.."
"ಹೋಗಿ ರಂಗಮ್ನೋರನ್ನ ಕರೀಲೇ ಅಣ್ಣ?"
"ಬೇಡ ರಾಧಾ.ಇನ್ನೇನು ಅವರೇ ಬಂದ್ಬಿಡ್ತಾರೆ."
ಜಯರಾಮು ರಂಗಮ್ಮನವರ ನಡೆ ನುಡಿಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದ.
ವಠಾರದಲ್ಲಿ ಜಗಳ ಆರಂಭವಾದರೆ ಆಕ್ಷಣವೇ ಅವರು ಬರುತ್ತಿರಲಿಲ್ಲ.ಪರಿಸ್ಥಿತಿ
ತೀಕ್ಷ್ಣತೆಯ ಘಟ್ಟವನ್ನು ದಾಟಿ ಇಳಿಮುಖವಾದಾಗ ರಂಗಮ್ಮ ಬಂದು ಸ್ವರವೇರಿಸಿ
ಮಾತನಾಡಿತ್ತಿದ್ದರು:
"ಏನದು ಗಲಾಟೆ? ಈ ವಠಾರ ಕುಡುಕರ ಕೇರಿ ಕೆಟ್ಹೋಯ್ತೆ!"
ಆಗಾಗ್ಗೆ ದೇಹದ ಉಗಿ ಹೊರಹೋಗಲು ಅವಕಾಶ ಕೊಡುವುದು ಅಗತ್ಯ
ಎಂಬುದು ಅವರ ಅಭಿಪ್ರಾಯವಾಗಿತ್ತು.
ಈ ದಿನವೂ ಅವರು ಬಂದು ಪೋಲೀಸನ ಮನೆ ಬಾಗಿಲಲ್ಲಿ ನಿಂತರು:
"ರಂಗಸ್ವಾಮಿ! ರಂಗಸ್ವಾಮಿ! ಏನ್ರೀ ಅದು?"
ಒಂದು ಕ್ಷಣ ಮೌನ.ಆ ಬಳಿಕ,ತನಗೆ ಸಹಾನುಭೂತಿ ತೋರುವವರು ಬಂದ
ರೆಂದು ,ಹೆಂಗಸು ಬಾಗಿಲಿನ ಹೊರಗೂ ಕೇಳಿಸುವಂತೆ ಗಟ್ಟಿಯಾಗಿ ಅತ್ತಳು .
ಪೋಲೀಸ್ ಖಾತೆಯವನೆಂಬ ಕಾರಣದಿಂದ ಬಹುವಚನದ ಗೌರವ ಆತನಿಗೆ
ರಂಗಮ್ಮನಿಂದ ದೊರೆಯುತ್ತಿತ್ತು.
ಉತ್ತರ ಬರದೇ ಇದ್ದುದನ್ನು ಕಂಡು ರಂಗಮ್ಮ ಮತ್ತೊಮ್ಮೆ ಕೇಳಿದರು :
"ರಂಗಸ್ವಾಮೀ, ಏನಪ್ಪಾ ಅದು?"
ರಂಗಸ್ವಾಮಿ ಬಾಗಿಲು ತೆರೆಯದೆಯೇ ಹೇಳಿದ :
"ನೋಡಿ ರಂಗಮ್ನೋರೆ ಈಕೆ ಮಾಡ್ತಿರೋದು.ಇವತ್ತು ರಾತ್ರಿ ಡ್ಯೂಟಿ
ಇದೇಂತ ಆಗ್ಲೇ ಹೇಳಿದ್ದೆ.ಬಂದು ಒಂದು ತುತ್ತು ತಿಂದು ಹೋಗೋಣ ಅಂದರೆ,
ಇಲ್ಲಿ ಬಡಿಸೋವರಿಗೇ ಗತಿ ಇಲ್ಲ.ಸಂಗೀತ ಕೇಳೋಕೆ ಹೋಗಿದಾಳೆ ಈ