ಪುಟ:Rangammana Vathara.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

108

ಸೇತುವೆ

"ಬಂದ್ಬಿಟ್ಟೆ ಜಯರಾಂ."
"ಹೊಸ ಬಿಡಾರದವರ ಪರಿಚಯ ಮಾಡ್ಕೊಂಡ ಹಾಗಿದೆ."
"ಅಯ್ಯೋ ಅದೊಂದು ದುರಭ್ಯಾಸ."
ಮುಂದಿದ್ದ ರಾಧಾ ಮನೆಯತ್ತ ಸಾಗುತ್ತ ಹಿಂದಿರುಗಿ ನೋಡಿದಳು. ಕತ್ತಲು.
ಚಂದ್ರಶೇಖರಯ್ಯನ ಮುಖ ಸ್ಫಷ್ಟವಾಗಿ ಕಾಣಿಸಲಿಲ್ಲ. ಆದರೆ ಆ ಕಣ್ಣುಗಳೆರಡು
ತನ್ನನ್ನೇ ದಿಟ್ಟಿಸುತ್ತಿದ್ದಂತೆ ರಾಧೆಗೆ ಭಾಸವಾಗಿ, ಮುಖದಲ್ಲಿ ರಕ್ತ ಸಂಚಾರ ತೀವ್ರ
ವಾಯಿತು.
ಚಂದ್ರಶೇಖರಯ್ಯ ತನ್ನ ಬಾಗಿಲಿನ ಬೀಗಕ್ಕೆ ಕೀಲಿಕೈ ತಿರುವುತ್ತಿದ್ದಂತೆ ಜಯ
ರಾಮು ತಡೆದು ನಿಂತು ಕೇಳಿದ:
"ನಾಲ್ಕೈದು ದಿವಸದಿಂದ ನೀವು ಊರಿನಲ್ಲಿರ್ಲಿಲ್ಲಾಂತ ತೋರುತ್ತೆ."
"ಅಯ್ಯೊ, ಇಲ್ಲೇ ಇದೀನಿ ಒಂದು ವಾರದಿಂದ."
"ನಿಜವೆ!....."
"ಯಾಕೋ ಬರಬರುತ್ತಾ ಬೆಂಗಳೂರು ಬೊಂಬಾಯಿ ಆಗ್ತಿದೆ. ಪಕ್ಕದ್ಮನೇಲಿ
ಯಾರಿದಾರೆ ಅನ್ನೋದೇ ಗೊತ್ತಾಗ್ತಾ ಇಲ್ಲ...." ಎಂದು ಚಂದ್ರಶೇಖರಯ್ಯ ನಕ್ಕು
ಬಿಟ್ಟ. ಜಯರಾಮುವೂ ನಕ್ಕು, ತನ್ನ ಮನೆಯತ್ತ ಸಾಗಿದ. ಬೊಂಬಾಯಿಯೊಡನೆ
ಹೋಲಿಕೆ. ಜಯರಾಮು ಆ ದೊಡ್ಡ ಊರನ್ನು ಕಂಡಿರಲಿಲ್ಲ. ಚಂದ್ರಶೇಖರಯ್ಯನೋ
ಲೋಕಾನುಭವಿ. ಪಕ್ಕದ ಮನೆಯಲ್ಲಿ ಯಾರಿರುವರೆಂಬುದನ್ನೂ ತಿಳಿಯಲು ಬಯಸದೆ,
ಅಥವಾ ತಿಳಿಯಲಾಗದೆ, ಜನ ಆ ದೊಡ್ಡ ನಗರದಲ್ಲಿ ಜೀವಿಸುವುದನ್ನು ಜಯರಾಮು
ಚಿತ್ರಿಸಿಕೊಂಡ.
ಆತನ ತಾಯಿ ಪಿಸು ಧ್ವನಿಯಲ್ಲಿ ಕೇಳಿದರು:
"ಏನಂದ್ನೊ?"
"ಯಾರು?"
"ಶ್! ಪಕ್ಕದ್ಮನೆಯಾತ."
"ಏನೂ ಇಲ್ಲ!"
ತಾಯಿಯ ಪಿಸುಮಾತಿನಿಂದ ಜಯರಾಮುಗೆ ಆಶ್ಚರ್ಯವಾಯಿತು.ಮಗನ
ಉತ್ತರದಿಂದ ತಾಯಿಗೆ ನಿರಾಶೆಯಾಯಿತು."ಅಪ್ಪ ಬಂದಿಲ್ವಾ ಇನ್ನೂ?"ಎನ್ನುತ್ತ,
ಕಿಟಕಿಯಿಂದ ಹೊರಗಿಣಿಕಿ ಬೀದಿಯತ್ತ ನೋಡುತ್ತಿದ್ದ ತಂಗಿಯನ್ನು ದಿಟ್ಟಿಸಿದ ಜಯ
ರಾಮು, ಏನೋ ಹೊಳೆದವನಂತೆ ತಾಯಿಯತ್ತ ನೋಡಿದ. 'ಓ' ಎನ್ನುವಂತೆ
ಆತನ ಹುಬ್ಬುಗಳು ಮೇಲಕ್ಕೆ ಚಲಿಸಿದುವು. ಮರುಕ್ಷಣವೆ ಯೋಚನೆಯ ಮೋಡ
ಕವಿದು ಮುಖ ಬಾಡಿತು.
ಆಣ್ಣ-ತಾಯಿ ಇಬ್ಬರೊಡನೆಯೂ ರಾಧಾ ಅಂದಳು:
"ಆ ಕೊನೇ ಮನೆಯಾಕೆ ಚಂಪಾ ಎಷ್ಟು ಚೆನ್ನಾಗಿ ಹಾಡ್ತಾಳೇಂತ!ವ‌‍‍‍ಠಾರ