ಪುಟ:Rangammana Vathara.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

112

ಸೇತುವೆ

ಗಂಡ ಹೆಂಡತಿ ಇಬ್ಬರೂ ಊಟಕ್ಕೆ ಕುಳಿತು ಒಬ್ಬರಿಗೊಬ್ಬರು ಬಡಿಸುತ್ತ
ಉಂಡರು.
ಊಟ ಮುಗಿದು ಅವರು,ಸುವಾಸಿತ ಅಡಿಗೆ ಪುಡಿ ಬಾಯಿಗೆ ಹಾಕಿಕೊಂಡರು.
ಶಂಕರನಾರಾಯಣಯ್ಯ ಸಿಗರೇಟು ಹಚ್ಚಿದ.
ಅಷ್ಟರಲ್ಲಿ ಓಣಿಯಿಂದ ರಂಗಮ್ಮನ ಸ್ವರ ಕೇಳಿಸಿತು.
"ಆಗ್ತಾ ಬಂತೇನ್ರೇ?ಇನ್ನು ಹತ್ನಿಮಿಷ.ದೀಪ ಆರಿಸ್ತೀನಿ".
ದಂಪತಿ ಮಲಗಿಕೊಂಡು ಆ ವಿಷಯ ಈ ವಿಷಯ ಮಾತನಾಡಿದರು. ಅಷ್ಟ
ರಲ್ಲೇ ದೀಪ ಆರಿತು.ಹೊರಳಿ,ಪರಸ್ಪರ ಮುಖಗಳನ್ನು ಸಮೀಪಕ್ಕೆ ತಂದರು.
ಪಿಸುಮಾತಿನ ಸಂಭಾಷಣೆ ಮತ್ತೂ ನಡೆಯಿತು.
"ಎದುರು ಸಾಲ್ನಲ್ಲಿ ಎರಡ್ನೇ ಮನೆ ಇಲ್ವಾ-ಅಲ್ಲಿಯ ಹುಡುಗಿ ಅಹಲ್ಯಾ-"
"ಹೂಂ.ಏನು?"
"ಎಷ್ಟು ಚೆನ್ನಾಗಿ ಹಾಡ್ತಾಳೇಂತ.ಇವತ್ತೊಂದು ಹೊಸ ಹಾಡು ಹಾಡಿದ್ಲು.
ತುಂಬಾ ಸೊಗಸಾಗಿತ್ತು."
"ಯಾವುದು- ಅಂದು ತೋರ್ಸು."
"ಇನ್ನೂ ಬರ್ಕೊಂಡಿಲ್ಲಾಂದ್ರೆ."
"ಗೊತ್ತಮ್ಮಾ.ಮೊದಲ್ನೇ ಸಾಲು ಹೇಳು,ಸಾಕು.ಯಾವ ಹಾಡೂಂತ
ನೋಡ್ತೀನಿ."
ಮಲಗಿದ್ದಲ್ಲಿಂದಲೇ ಪಿಸುದನಿಯಲ್ಲೇ ಮೊದಲ ಸಾಲನ್ನು ಚಂಪಾ ಅಂದಳು:
"ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು........"
ಶಂಕರನಾರಾಯಣಯ್ಯ ಸುಮ್ಮನಿದ್ದ.ಚಂಪಾ ಕೇಳಿದಳು:
"ಹ್ಯಾಗಿದೆ?ಚೆನ್ನಾಗಿಲ್ವಾ?" "ಚೆನ್ನಾಗಿದೆ.ನಾನು ಕೇಳೇ ಇರ್ಲಿಲ್ಲ ಈವರೆಗೂ."
"ನಾಳೆ ದಿವಸ ಪೂರ್ತಿ ಹಾಡ್ತೀನಿ."
"ಚಂಪಾ!"
ಎಷ್ಟೊಂದು ವೈವಿಧ್ಯಪೂರ್ಣವಾಗಿ ಆ ಹೆಸರನ್ನು ಆತ ಉಚ್ಚರಿಸುತ್ತಿದ್ದ!
ಒಂದೊಂದು ಸ್ವರಕ್ಕೂ ಒಂದೊಂದು ಅರ್ಥ.ಈ ಸಲ ಕರೆದ ಧ್ವನಿಯ ಅರ್ಥವೇ
ನೆಂಬುದು ಅವಳಿಗೆ ಗೊತ್ತಿತ್ತು.ಆಕೆ ಮಾತನಾಡಲಿಲ್ಲ.ರಾಗವೆಳೆದಳು:
"ಊ..."
"ನಾನು ಯಾತ್ರಿಕ.ನೀನು ಕಲೆಯ ಬಲೆ."
"ಊ..."

ರಾಗವೆಳೆಯುತ್ತಲೇ ಚಂಪಾವತಿ ತನ್ನೊಂದು ತೋಳಿನಿಂದ ಆತನ ಕತ್ತನ್ನು