ಪುಟ:Rangammana Vathara.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

113

ಬಳಸಿಕೊಂಡಳು
.....ಬಲಪಾರ್ಶ್ವದ ಮನೆಯಲ್ಲಿ ಪದ್ಮಾವತಿ ಚಪಡಿಸುತ್ತಿದ್ದಳು, ನಿದ್ದೆ
ಬಾರದೆ. ಗಂಡ ನಾಗರಾಜರಾಯ ಗೊರಕೆ ಹೊಡೆಯುತ್ತಿದ್ದ.ಮಕ್ಕಳು ಎಂದೋ
ಮಲಗಿದ್ದೂವು. ಆ ಸಂಜೆ ಚಂಪಾವತಿಯ ಹಾಡುಗಳನ್ನು ಕೇಳಿದಾಗಿನಿಂದ ಆಕೆಯ
ಮನಸ್ಸು ಅಲ್ಲೋಲಕಲ್ಲೋಲವಾಗಿತ್ತು. ಮದುವೆಯ ಮೊದಲಿನ ಅನಂತರದ ದಿನ
ಗಳೆಲ್ಲ ನೆನಪಿಗೆ ಬಂದುವು. ಸವಿಯಾದುದು ಎಷ್ಟೊಂದು ಅಲ್ಪವಾಗಿತ್ತು ಅದರಲ್ಲಿ!
ಪದ್ಮಾವತಿ ಬುದ್ಧಿವಂತೆ. ನಾರಾಯಣಿ ಇದ್ದ ಮನೆಗೆ ಬಿಡಾರ ಬಂದವರು ಶ್ರೀಮಂತ
ರಲ್ಲವೆಂಬುದನ್ನು ಆಕೆ ಸುಲಭವಾಗಿ ತಿಳಿದುಕೊಂಡಿದ್ದಳು. ಆದರೂ ಎಷ್ಟೊಂದು
ಅನ್ಯೋನ್ಯವಾಗಿದ್ದರು ಇಬ್ಬರೂ!
ಅಂತಹ ಪ್ರೀತಿ ತನಗೆ ದೊರೆತಿರಲ್ಲಿಲ್ಲ.
ಒಪ್ಪಿದ ಮೊದಲ ಗಂಡಿಗೇ ಹೆತ್ತ ತಾಯಿ ತಂದೆ ತನ್ನನ್ನು ಧಾರೆಯೆರೆದು
ಕೊಟ್ಟು ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸಿದ್ದರು. ಗಂಡನ ಆಯ್ಕೆಯ ವಿಷಯ
ದಲ್ಲಿ ಆಕೆ ಹೇಳುವುದೇನೂ ಇರಲಿಲ್ಲ. ಪಾಲಿಗೆ ಬಂದದ್ದನ್ನೇ ಪಂಚಾಮೃತವೆಂದು
ಸ್ವೀಕರಿಸಿದ್ದಳು.
ಪ್ರತಿಯೊಂದೂ ಯಾಂತ್ರಿಕವಾಗಿಯೆ ನಡೆಯುತ್ತಿತ್ತು, ಆ ಸಂಸಾರದಲ್ಲಿ . ಉಡು
ವುದು- ಉಣ್ಣುವುದು, ಪ್ರೀತಿಸುವುದು- ಮಕ್ಕಳನ್ನು ಹೊತ್ತು ಪೋಷಿಸುವುದು, ಪ್ರತಿ
ಯೊಂದೂ. ಮಾತೂ ಅಷ್ಟೇ. ಆ ನಾಗರಾಜರಾಯ ಅತಿ ಮಿತಭಾಷಿ. ಒಮ್ಮೆ
ಹೇಳಿದ ಮಾತುಗಳೇ ಪ್ರತಿದಿನವೂ ಮತ್ತೆ ಮತ್ತೆ.
ಪಕ್ಕದ ಮನೆಯಲ್ಲಿ ಪಿಸುಮಾತು ನಡೆದೇ ಇತ್ತು. ಕಮಲಮ್ಮ ಪದ್ಮಾವತಿಗೆ
ಹೇಳಿದ್ದರು:
"ಈ ಸರಸವೆಲ್ಲಾ ಮಾಡಿಕೊಂಡ ಹೊಸದರಲ್ಲಿ ಕಣ್ರೀ."
"ಅವರಿಗೆ ಮದುವೆ ಆಗಿ ಆಗ್ಲೇ ಐದು ವರ್ಷ ಆಯ್ತಂತೆ ಕಮಲಮ್ಮ."
"ತಾಳಿ ಸ್ವಲ್ಪ. ಬಗಲಿಗೊಂದು ಬೆನ್ನಿಗೊಂದು ಆ ಪಕ್ಕಕ್ಕೊಂದು ಈ ಪಕ್ಕ
ಕ್ಕೊಂದು ಮಕ್ಕಳಾಗ್ಲಿ."
ಕಮಲಮ್ಮನ ನಾಲ್ಕು ಮಕ್ಕಳು ಕೈಬಿಟ್ಟು ಹೋಗಿದ್ದವು.ಆ ಸಂಕಟದಿಂದ
ಮನಸ್ಸು ಸದಾ ಕಹಿಯಾಗಿದ್ದರೂ ಮನುಷ್ಯ ಸ್ವಭಾವವನ್ನಾಕೆ ಸ್ವಲ್ಪಮಟ್ಟಿಗೆ ಚೆನ್ನಾ
ಗಿಯೇ ತಿಳಿದಿದ್ದಳು. ಸ್ವತಃ ಸುಖ ಕಂಡಿರದ ಜೀವ ಇನ್ನೊಬ್ಬರ ಸುಖವನ್ನು ನೋಡಿ
ಕರುಬುತ್ತಿರಲಿಲ್ಲ ನಿಜ. ಆದರೆ ಅಂತಹ ಯಾವ ಸುಖವೂ ಸ್ಥಿರವಲ್ಲವೆಂಬುದು ಮಾತ್ರ
ಆಕೆಯ ದೃಢ ನಂಬಿಕೆಯಾಗಿತ್ತು.
ಪಕ್ಕದ ಮನೆಯಲ್ಲಿ ಕತ್ತಲಲ್ಲಿ ದಂಪತಿ ಸಣ್ಣನೆ ನಕ್ಕ ಹಾಗೆ ಸದ್ದು.ನಿಜವೊ-
ಭ್ರಮೆಯೊ.ಪಿಸು ಮಾತು ಕೇಳಿಸುತ್ತಿರಲಿಲ್ಲ.ಮಾತು ನಿಂತಿತು ಎಂದ ಮೇಲೆ-

15