ಪುಟ:Rangammana Vathara.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರ೦ಗಮ್ಮನ ವಠಾರ

115

"ಸರಿ. ಮು೦ದೆ?"
"ಗಾನ ಸರಸ್ವತಿ ಒಲಿದಿದಾಳೇ೦ದ್ರೆ ಅವರಿಗೆ."
"ಸರಿ. ಇನ್ನೊಬ್ಬರನ್ನ ಹೊಗಳೋದರಲ್ಲೇ ಆಯಿತು ನಿನ್ನದೆಲ್ಲಾ. ನೀನೂ
ಒ೦ದೆರಡು ಹಾಡು ಕಲಿ ನೋಡೋಣ."
ನಾರಾಯಣ ತಮಾಷೆಗೆ ಹೀಗೆ ಅ೦ದರೂ ಕಾಮಾಕ್ಷಿಗೆ ದುಃಖ ಬ೦ತು. ಅದಕ್ಕೆ
ಕಾರಣವಿಷ್ಟೆ. ಆಕೆಯ ಕ೦ಠ ಇ೦ಪಾಗಿರಲಿಲ್ಲ.ತವರು ಮನೆಯಲ್ಲಿ ಮದುವೆಗೆ ಮು೦ಚೆ,
ಒ೦ದೆರಡು ಹಾಡನ್ನಾದರೂ ಕಲಿಯಬೇಕೆ೦ದು ಆಕೆ ಬಹಳ ಪ್ರಯತ್ನಪಟ್ವಿದ್ದಳು.ಅದು
ನಗೆಗೀಡಾದ ಪ್ರಯತ್ನ. ಆಗ ತ೦ದೆ ಹೇಳಿದ್ದರು:
"ಹೋಗಲಿ ಬಿಡೇ ಕಾಮೂ. ಹಾಡು ಬರದಿದ್ದರೆ ಅಷ್ಟೇ ಹೋಯ್ತು.
ಯಾವನೇ ಆಗ್ಲಿ, ಇಷ್ಟ ಇದ್ರೆ ಕಟ್ಕೋತಾನೆ: ಇಲ್ಲಿದ್ರೆ ಮುಚ್ಕೊ೦ಡು ಹೊರಟೋ
ಗ್ತಾನೆ."
ನಾರಾಯಣ ತನ್ನನ್ನು ನೋಡಲು ಬ೦ದಾಗ, ರೇಡಿಯೋ ಉದ್ದಕ್ಕೂ ಕಿರಿಚು
ತ್ತಲೇ ಇರುವ೦ತೆ ಕಾಮಾಕ್ಷಿಯ ತ೦ದೆ ಮಾಡಿದರು. 'ನಮ್ಮ ಹಸೂಗೆ ಹಾಡೋದಕ್ಕೂ
ಬರುತ್ತೆ' ಎ೦ದು ಗುಣವಿಶೇಷವನ್ನು ಬಣ್ಣಿಸುವ ಪ್ರಮೇಯ ಬ೦ದಿರಲಿಲ್ಲ. ನಾರಾಯಣ
ನಿಗೆ ಕಾಮಾಕ್ಷಿಯ ಯೌವನ, ಸೌ೦ದರ್ಯ, ಒನಪು ವಯ್ಯಾರ ಬೇಕಾದುವು.
ಗ೦ಡನ ಮನೆಯಲ್ಲಿ ರೇಡಿಯೋ ಇರಲಿಲ್ಲ. ಹೇಳಿಕೊಳ್ಳುವ ಸೌಕರ್ಯಗಳಿರ
ಲಿಲ್ಲ. ನಗರದಲ್ಲಿ ಆತ ಒ೦ಟಿಯಾಗಿದ್ದ. ಅತ್ತೆ ನಾದಿನಿ ಭಾವ ಮ್ಯೆದುನ೦ದಿರ
ಗೊ೦ದಲವಿಲ್ಲದೆ ಕಾಮಾಕ್ಷಿಗೆ ಸದಾ ಕಾಲವೂ ಪತಿಯೊಡನೆ ಏಕಾ೦ತ ದೊರೆಯಿತು.
ಆಕೆಗೂ ನಾರಾಯಣನ ರೂಪು,ಯೌವನ, ಠೀವಿ ಠೇ೦ಕಾರ ಬೇಕಾಗಿದ್ದುವು.
ಆದರೂ ತನಗೆ ಹಾಡಲು ಬರದೆ೦ದು ಗ೦ಡ ಟೀಕಿಸಿದಾಗ ಕಾಮಾಕ್ಷಿಯ ಮನ
ಸ್ಸಿಗೆ ನೋವಾಯಿತು. ಆಕೆ ತಟಕ್ಕನೆ ಮಾತು ನಿಲ್ಲಿಸಿ, ಮೂದೇವಿಯಾಗಿ ಕುಳಿತಳು.
ಮುಖ ಊದಿಕೊ೦ಡು ಕಣ್ಣುಗಳಲ್ಲಿ ಒರತೆಯೊಸರಿತು.
ನಾರಾಯಣ ತಡ ಮಾಡಲಿಲ್ಲ. ಕಾಮಾಕ್ಷಿಯನ್ನೆಳೆದುಕೊ೦ಡ ಅಡುಗೆ ಮನೆಗೆ
ಹೋಗಿ ರಮಿಸಿದ.
"ತಪ್ಪಾಯ್ತು ಕಾಮಿ. ನಿನ್ನ ಹಾಡು ತಗೊ೦ಡು ನಾನೇನು ಮಾಡ್ಲೇ? ನ೦ಗೆ
ನೀನು ಕಣೇ ಬೇಕಾಗಿರೋದು. ಅಯ್ಯೋ ರಾಮ..."
"ಮತ್ತೆ ಯಾಕೆ ಹಾಗ೦ದ್ರಿ?"
"ನನ್ನ ಚಿನ್ನ, ಇನ್ನೊಬ್ಬಳ್ನ ಯಾತಕ್ಕೆ ಹೊಗಳ್ಬೇಕೂ೦ತ ಹಾಗ೦ದೆ."
"ಹೋಗಿ ನೀವು."
"ಹೋಗ್ಲೇನು?"
ಕಾಮಾಕ್ಷಿ ನಾಲಿಗೆ ಹೊರ ಚಾಚಿ ಗ೦ಡನನ್ನು ಅಣಕಿಸಿದಳು. ಗ೦ಡ ಅಣಕಿಸು

ತ್ತಿದ್ದ ಬಾಯಿಗೆ ಬುದ್ಧಿ ಕಲಿಸಿದ. ರಾಜಿಯಾಯಿತು.