ಕಾಯುತ್ತಿದ್ದಳು. ಒಮ್ಮೆ ಎದುರು ಬಿಡಾರದಿಂದ ಎರಡು ತುಂಡು ಸೌದೆ ಕದ್ಧಳೆಂಬ ಆರೋಪ ಆಕೆಯ ಮೇಲೆ ಹೂರಿಸಲ್ಪಟ್ಟಿತು. ಆಗ ವಠಾರ ಧೂಳೆದ್ಧು ಹೋಗುವ ಹಾಗೆ ನಾರಾಯಣಿ ಕಿರಿಚಿಕೊಂಡಿದ್ದಳು:
"ನನ್ನ ಕಳ್ಳಿ ಆಂದೋರ ನಾಲಿಗೆ ಬಿದ್ದು ಹೋಗ!ತೋರಿಸ್ಸ್ ನಾನು ಕದ್ದ ಸೌದೇನ!
ಕೊಡಿ ರುಜುವಾತು!"
ಆ ಆಹ್ವಾನವನ್ನು ಸ್ವೀಕರಿಸುವುದು ಸುಲಭವಾಗಿರಲ್ಲಿಲ. ಎಲ್ಲಿತ್ತು ಸಾಕ್ಶ್ಯ?
ಹಿಡಿ ಬೂದಿಯನ್ನೆತ್ತಿ, ಇದು ಈ ಮನೆಯ ಸೌದೇ ಬೂದಿ ಎನ್ನುವುದು ಸಾಧ್ಯವಿತ್ತೆ? ನಾರಾಣಿ ತಲೆಗೂದಲು ಕೆದೆರಿ ಕಿತ್ತಾಡಿ, ಕಣ್ಣು ಕೆಂಪಗೆ ಮಾಡಿ,ಅಂಗೈಯಿಂದ ತಲೆ ಚಚ್ಚಿಕೊಂಡು, ತಾನು ನಿರಪರಾಧಿಯೆಂದು ತೋರಿಸಿಕೊಡಲು ಯತ್ನಿಸಿದ್ದಳು.ಆದರೆ,ಆಕೆ ಅಪರಾಧಿ ಎಂಬ ವಿಶಯದಲ್ಲಿ ಯಾರಿಗೂ ಸಂದೇಹವಿರಲಿಲ್ಲ.
ಅದು ಎರಡು ವರ್ಷಗಳಿಗೆ ಹಿಂದಿನ ಮಾತು. ಆ ದಿನದಿಂದ ಎದುರು ಬಿಡಾರದ,
ಎರಡೇ ಅಡಿ ಅಂತರದಲ್ಲಿದ್ದ ಎದುರು ಬಿಡಾರದ, ಮೀನಾಕ್ಷಮ್ಮನೂ ಅವಳ ಮನೆಯವರೂ ನಾರಾಯಣಿಯ ಸಂಸಾರದೊಡನೆ ಮಾತು ಬಿಟ್ಟಿದ್ದರು. ಮಿನಾಕ್ಷಮ್ಮನಿಗಿದ್ದುದು ಅದೇ ಆಗ ಶಾಲೆಗೆ ಹೋಗತೊಡಗಿದ್ದ ಒಬ್ಬನೇ ಮಗ. ಆತ ನಾರಾಯಣಿಯ ಮಕ್ಕಳೊಡನೆ ಆಟಾವಾಡದಂತೆ ನೋದಲು ಮೀನಾಕ್ಷಮಾ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ನಾರಾಯಣಿಯ ದೊಡ್ಡ ಹುಡುಗನೂ ಮೀನಾಕ್ಷಮ್ಮನ ಮಗನೂ ಹೋಗುತ್ತಿದ್ದುದು ಒಂದೇ ಶಾಲೆಗೆ.
ಒಂದು ದಿನ ಶಾಲೆಗೆ ಹೋಗುತ್ತ ಮಾತಿಗೆ ಮಾತು ಬೆಳೆದು ಮೀನಾಕ್ಷಮ್ಮನ
ಮಗ ನಾರಾಯಣಿಯ ಹುಡುಗನಿಗೆ ಹೇಳಿದ:
ನಿಮ್ಮಮ್ಮ ಸೌದೆ ಕಳ್ಳಿ.
ಇನ್ನೊಮ್ಮೆ ಹೇಳು!
ಅದೇ ಮಾತು ಇನ್ನೊಮ್ಮೆ.
ಪರಿಣಾಮ, ಬೀದಿಯಲ್ಲಿ ಹುಡುಗರೆಲ್ಲ ಗುಂಪು ಕಟ್ಟಿಕೊಂಡು ನೋಡಿದ ಜಂಗೀ
ಕುಸ್ತಿ. ಕೈಯುಗುರಿನಿಂದ ಒಬ್ಬರು ಇನ್ನೊಬ್ಬರ ಮುಖ ಪರಚಿ ಗಾಯ ಮಾಡಿದರು. ಅಂಗಿ ಹರಿದರು. ವರದಿ ಮನೆಗೆ ಬಂದಾಗ, ವಠಾರದ ತಾಯಂದಿರೊಳಗೆ ಜಗಳವಾಯಿತು.
ಆ ಇಬ್ಬರು ಹುಡುಗರೇನೋ ಅದನ್ನೆಲ್ಲ ಬೇಗನೆ ಮರೆತು ವಠಾರದ ಹೊರಗೆ,/p> ಸ್ನೇಹಿತರಾಗಿಯೇ ಇದ್ದುದು ನಿಜ. ಆದರೆ ಹೆಂಗಸರು ಒಬ್ಬರನ್ನೊಬ್ಬರು ಕ್ಷಮಿಸಲಿಲ್ಲ.
ನಾರಾಯಣಿಗಿಂತಲೂ ಹಿಂದೆಯೇ ಆ ವಠಾರದಲ್ಲಿ ವಾಸ ಮಾಡುತ್ತಿದ್ದ ಸಂಸಾರ
ಗಳೂ ಇದ್ದುವು: ಅನಂತರ ಬಂದವರೂ ಇದ್ದರು. ಅವರೆಲ್ಲರಿಗೂ ನಾರಾಯಣಿ ಪರಿಚಿತಳಾಗಿದ್ದಳು. ಸ್ನೇಹವನ್ನು ಯಾಚಿಸಿ ತಾವಾಗಿಯೇ ಆಕೆಯ ಬಳಿಗೆ ಹೋಗಬೇಕೆಂದು ಅವರಲ್ಲಿ ಯಾರಿಗೂ ಎಂದೂ ಅನಿಸಿರಲಿಲ್ಲ.