ತೆಂಬ ಯೋಚನೆ ಅವನಿಗಿರಲಿಲ್ಲ. ಪ್ರತ್ಯುತ್ತರವನ್ನಾತ ಅಪೇಕ್ಷಿಸಲೂ ಇಲ್ಲ.
"ಬರ್ತೀನಿ" ಎಂದಷ್ಟೇ ಹೇಳಿ ಆತ ಹೆಬ್ಬಾಗಿಲನ್ನು ದಾಟಿ ನಡು ಹಾದಿಯಲ್ಲಿ
ಸಾಗಿ ಓಣಿಯೊಳಕ್ಕೆ ಕಾಲಿಟ್ಟ.
ಪಾದಗಳು ಬೇರುಬಿಟ್ಟು ನೆಲದೊಳಗೆ ಇಳಿದಿದ್ದುವೇನೋ ಎಂಬಂತೆ ಶಿಲಾ
ಪ್ರತಿಮೆಯಾಗಿ ಸ್ವಲ್ಪ ಹೊತ್ತು ಜಯರಾಮು ನಿಂತ.
ಶಂಕರನಾರಾಯಣಯ್ಯನೊಡನೆ ತನ್ನ ಅಣ್ಣ ಮಾತನಾಡುತ್ತಿದ್ದುದನ್ನು ಮೇಲಿ
ನಿಂದಲೆ ಕಂಡಿದ್ದ ರಾಧಾ ಕರೆದಳು:
"ಅಣ್ಣ, ಬಾರೋ...ಬಾ ಅಣ್ಣ."
ಅವರಿಬ್ಬರು ಅದೇನೇನು ಮಾತನಾಡಿದರೆಂದು ತಿಳಿಯುವ ಕುತೂಹಲದಿಂದ
ರಾಧೆಗೆ ನಿಂತಲ್ಲಿ ನಿಲ್ಲಲಾಗುತ್ತಿರಲಿಲ್ಲ.
ಇನ್ನೇನು ಬರುವ ಹೊತ್ತು, ಬಾಗಿಲು ಮುಚ್ಚಬೇಕು, ಎಂದು ಚಂಪಾ ಯೋಚಿ
ಸುತ್ತಿದ್ದಾಗಲೇ ಶಂಕರನಾರಾಯಣಯ್ಯ ಒಳಗೆ ಬಂದುಬಿಟ್ಟು. ಪುಟ್ಟ ಮಗು ತಂದೆಗೆ
ಸ್ವಾಗತ ಬಯಸಿತು. ಅದನ್ನು ಎತ್ತಿಕೊಂಡು ಆತ ಅಡುಗೆಮನೆಯೊಳಕ್ಕೆ ನುಗ್ಗಿದ.
ಒಮ್ಮೆ ಬೀರಿದ ನೋಟದಿಂದಲೇ ಚಂಪಾವತಿ ತಿಳಿದುಕೊಂಡಳು: ಗಂಡ ಎಂದಿ
ನಂತಿರಲಿಲ್ಲ! ಆತನ ಮನಸ್ಸು ಉದ್ವಿಗ್ನವಾಗಿತ್ತೆಂಬುದನ್ನು ಮುಖದ ಬಣ್ಣ ತೋರಿ
ಸುತ್ತಿತ್ತು.
ಊದುಕೊಳವೆಯನ್ನೆತ್ತಿಕೊಂಡು ಸೌದೆ ತುಂಡುಗಳೆಡೆಗೆ ಚಂಪಾವತಿ "ಫ಼ೂ...
ಫ಼ೂ..." ಎಂದಳು. ನಡುವೆ ಮುಖ ತಿರುಗಿಸಿ ಗಂಡನನ್ನು ನೋಡಿ ಕೇಳಿದಳು:
"ಏನಾಯ್ತು?"
"ಏನಿಲ್ಲ. ನಾನು ಬರೆದಿರೋ ಕಲಾಕೃತಿಗಳ ವಿಷಯ ಆ ಹುಡುಗ ಜಯ
ರಾಮು ಕೇಳ್ದ!"
"ಯಾರು ರಾಧೆ ಅಣ್ಣನೇ?"
"ಹೂಂ. ಮಡದಿ ಮೇಲಿರೋನು."
"ಸರಿ. ನಿವೇನಂದಿರಿ?"
"ಶನಿಮಹಾತ್ಮ್ಯೆ ದೇವರ ಚಿತ್ರ ನಾನು ಬರೆದದ್ದು ಅಂದ!"
ಚಂಪಾ ಮಾತನಾಡಲಿಲ್ಲ. ತಾನು ದೊಡ್ಡ ಕಲಾವಿದನಾಗಬೇಕೆಂದು ಶಂಕರ
ನಾರಾಯಣಯ್ಯ ಹಿಂದೆ ಕನಸು ಕಂಡುದಿತ್ತು. ಆದರೆ ಕಲಾವಿದನಾಗಿ ಈ ಪ್ರಪಂಚ
ದಲ್ಲಿ ಬಾಳ್ವೆ ನಡೆಸುವುದು ಕಷ್ಟಸಾಧ್ಯವೆಂಬುದು ಆತನಿಗೆ ಮನವರಿಕೆಯಾಗಲು ಹೆಚ್ಚು
ಕಾಲ ಹಿಡಿದಿರಲಿಲ್ಲ. ಕಹಿ ಮನಸ್ಸು ಮಾಡಿ ಸಿಕ್ಕವರನ್ನೆಲ್ಲ ನಿಂದಿಸುತ್ತ ಕುಳಿತುಕೊಳ್ಳದೆ,
ಶಂಕರನಾರಾಯಣಯ್ಯ ವಾಸ್ತವವಾದಿಯಾಗಿ ಸಿನಿಮಾ ಪೋಸ್ಟರುಗಳ ಚಿತ್ರಕಾರನಾದ,
ಅವನ ಜತೆಯಲ್ಲಿ ಬೇರೆ ಇಬ್ಬರು ದುಡಿಯುತ್ತಿದ್ದರು. ಅವರೆಲ್ಲಿ ಏನು ಚಿತ್ರ ಬರೆದರೂ
ಪುಟ:Rangammana Vathara.pdf/೧೩೩
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ರಂಗಮ್ಮನ ವಠಾರ
121