ಪುಟ:Rangammana Vathara.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

4

ಸೇತುವೆ

ಆದರೆ ಈ ದಿನ ಪ್ರತಿಯೊಂದು ಹೃದಯವನ್ನೂ ದುಃಖದ ಇಕ್ಕುಳ ಹಿಚುಕಿ

ನೋಯಿಸುತ್ತಿತ್ತು.

ಬದುಕು _ಅದೇನು ಸುಖವೊ? ಆದರೆ ಸಾವು _ಸುಖ ಎನ್ನಬಹುದೆ?

ಅಂತಹ ಹೊತ್ತಿನಲ್ಲಿ ಆ ಹೆಂಗಸರಿಗೆ, ನಾರಾಯಣಿಯ ಕಡುವೈರಿಯಾದ

ಮೀನಾಕ್ಷಮ್ಮನ ನೆನಪಾಗದಿರಲಿಲ್ಲ. ಎಲ್ಲಿ ಮೀನಾಕ್ಷಮ್ಮ? ಎಂದು ಸ್ವರವೆತ್ತಿ ಯಾರೂ ಕೇಳದೆ ಹೋದರೂ, ಎಲ್ಲರ ದೃಷ್ಟಿಗಳೂ ಆಕೆಯನ್ನು ಹುಡುಕುತ್ತಿದ್ದುವು.

ಮೀನಾಕ್ಷಮ್ಮ ತನ್ನ ಮನೆಯ ತಲೆಬಾಗಿಲ ಬಳಿ ನಿಂತು, ಎದುರು ಮನೆಯನ್ನೇ

ದಿಟ್ಟಿಸುತ್ತಿದ್ದಳು. ಸೂರ್ಯರಶ್ಮಿಯ ಪ್ರವೇಶವಿಲ್ಲದ ಗವಿಮನೆ. ಆದರೂ ಆ ಮಬ್ಬು ಬೆಳಕಿನಲ್ಲಿ, ಹಳೆಯ ಚಾಪೆಯ ಮೇಲೆ ಹಾಸಿದ್ದ ಹರಿದ ತೆಳು ಹಾಸಿಗೆಯ ಮೇಲೆ ನಾರಾಯಣಿ ಮಲಗಿದ್ದುದು ಕಾಣಿಸುತ್ತಿತ್ತು. ಕೊನೆಯ, ಒಂದು ವರ್ಷದ, ಮಗು ಪಕ್ಕದಲ್ಲಿ ಕುಳಿತಿತ್ತು. ಆಕೆಯ ಗಂದ ಆಡುಗೆ ಮನೆಯಲ್ಲಿದ್ದನೇನೊ...ಅಲ್ಲಿ ಹಾಗೆ ಮಲಗಿದ್ದ ಆ ಮೂಳೆಯ ಹಂದರ ತನ್ನ ಪರಮ ದ್ವೇಷಿ ಎಂದು ಭಾವಿಸಲು ಮೀನಾಕ್ಷಮ್ಮ ಸಿದ್ಧಳಿರಲಿಲ್ಲ.

ಹೊರಬಾಗಿಲಿನಾಚೆ ಅಂಗಳದಲ್ಲಿ ನಿಂತಿದ್ದ ಹೆಂಗಸರಲ್ಲಿ ಒಬ್ಬಾಕೆ ಮೀನಾಕ್ಷಮ್ಮ

ನನ್ನು ಅಲ್ಲಿಂದಲೆ ನೋಡಿ ಸನ್ನೆ ಮಾಡಿ ಕರೆದಳು...ಮೀನಾಕ್ಷಮಾ ಅಗಲ ಕಿರಿದಾದ ಆ ಓಣಿಯುದ್ದಕ್ಕೂ ನಡೆದು, ಅಂಗಳ ತಲುಪಿದಳು. ಮುಂದುವರಿಯಲಾಗಲಿಲ್ಲ. ಗುಂಪಿನಿಂದ ದೂರವಾಗಿಯೇ ನಿಂತಳು.

"ಬನ್ನಿ ಮೀನಾಕ್ಷಮ್ಮ."

ಅಷ್ಟು, ದೂರ ಬಂದಿದ್ದುದೇ ಸಾಲದೆ?

"ಇಂಥ ಕಷ್ತ ಯಾರಿಗೂ ಬರಬಾರ್ದು, ಅಲ್ವೆ ಮೀನಾಕ್ಷಮ್ಮ?"

ಸಂಡೆಹವಾದರೂ ಏನು ಅದರಲ್ಲಿ?

ಯಾರೋ ಒಬ್ಬಳು ಕೇಳಿದಳು:

"ಒಳ್ಕ್ಕೆ ಹೋಗಿ ನೋಡಿದಿರಾ?"

"ಇಲ್ಲ" ಎಂದಳು ಮೀನಾಕ್ಷಮ್ಮ. ಅರೆ ಕ್ಷಣ ತಡೆದು ಆಕೆ ಎಂದಳು: "ಹೋಗಿ ನೋಡ್ತೀನಿ."

ನಡುಗುತ್ತಿತ್ತು ಆ ಸ್ವರ. ನಾರಾಯಣಿಯನ್ನು ವೈರಿಯಾಗಿ ಪರಿಗಣಿಸಿದ ತಾನು

ಪಾಪಿ ಎನ್ನುವ ಭಾವನೆ. ಒಮ್ಮೆಲೆ ಮೀನಾಕ್ಷಮ್ಮ ಸೆರಗನ್ನು ಕಣ್ಣಿಗೊತ್ತಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು.

ಯಾರು ಬಾಯ್ತೆರೆದು ಮಾತನಾಡಲಿಲ್ಲ. ಆದರೆ ಮೊದಲೇ ತೀರ್ಮಾನವಾಗಿ

ತ್ತೇನೋ ಎನ್ನುವ ಹಾಗೆ, ಎಲ್ಲರೂ ನಾರಾಯಣಿಯ ಮನೆಯತ್ತ ಬಂದರು. ಮೀನಾಕ್ಷಮ್ಮ ಅವರನ್ನೆಲ್ಲ ಹಿಂಬಾಳಿಸಿದಳು.

ಅಷ್ಟರೆಲ್ಲೆ ಗಂದಸಿನ ಗೋಳೋ ಎಂಬ ಹೃದಯಭೇದಕ ಆರ್ತನಾದ ಆ