ಪುಟ:Rangammana Vathara.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

134

ಸೇತುವೆ

ವೆಂಕಟೀಶಯ್ಯ ಲಜ್ಜೆಗೊಂಡು ನಕ್ಕ.
ಅಹಲ್ಯಾ ದಿನವೂ ವೆಂಕಟೇಶನ ಜತೆಗೆ ಹೋಗಿ ಔಷಧಿ ತಂದಳು. ಜ್ವರ ಇಳಿ
ಯಿತು. ವೆಂಕಟೇಶ ಟಾನಿಕ್ ಕೊಡಿಸಿದ. ರಾಮಚಂದ್ರಯ್ಯ ಮೊದಲಿನಂತೆ ಓಡಾಡು
ವಂತಾದ.
ಅವನ ತಾಯಿ ಕೇಳಿದಳು:
"ಔಷಧೀದು ಎಲ್ಲಾ ಒಟ್ಟಿಗೆ ಎಷ್ಟಾಯಿತು?"
"ನಾಲ್ಕು ರೂಪಾಯಿ" ಎಂದ ವೆಂಕಟೇಶ. ಆ ತಾಯಿ ನಂಬಲಿಲ್ಲ.
"ಅಷ್ಟೇನೇ?"
ಆಕೆಯ ಕಡೆ ನೋಡದೆಯೇ ವೆಂಕಟೇಶ ಹೇಳಿದ:
"ಹೌದು, ಅಷ್ಟೆ."

೧೪

ಶಾಲೆ ಕಾಲೇಜುಗಳು ಆರಂಭವಾದೊಡನೆ, ಖಾಲಿ ಇದ್ದ ಕೊಠಡಿಯನ್ನು
ಬಾಡಿಗೆಗೆ ಹಿಡಿಯಲು ರಂಗಮ್ಮನ ವಠಾರಕ್ಕೆ ಹುಡುಗರು ಬಂದರು. ಎಂದಿನಂತೆಯೇ
ಈ ಸಲವೂ ಬ್ರಾಹ್ಮಣ ಹುಡುಗರಿಗೇ ಕೊಠಡಿಯನ್ನು ಕೊಡಲು ರಂಗಮ್ಮ ಯತ್ನಿಸಿ
ದರು. ಆದರೆ ಎಂದಿನಂತೆಯೇ ಈ ಸಲವೂ ಯತ್ನ ಸಫಲವಾಗಲಿಲ್ಲ. ಪರ ಊರಿನ
ಬ್ರಾಹ್ಮಣ ಹುಡುಗರು, ಬಾಡಿಗೆ ಹದಿಮೂರು ರೂಪಯಿ ಎಂದೊಡನೆ ಅಲ್ಲಿಂದ ಕಂಬಿ
ಕೀಳುತ್ತಿದ್ದರು. ಒಳ್ಳೆಯ ಬ್ರಾಹ್ಮಣ ಹುಡುಗರು ಬಂದರೆ ಒಂದು ರೂಪಾಯಿ ಕಡಿಮೆ
ಮಾಡೋಣವೆಂಬ ಯೋಚನೆಯೂ ರಂಗಮ್ಮನಿಗೆ ಬಂತು. ಆದರೆ ಹಾಗೆ ಭೇದ ಭಾವ
ತೋರುವುದು ಸರಿಯಲ್ಲವೆಂದು ಆ ಯೋಚನೆಯನ್ನು ಅವರು ಬಿಟ್ಟುಕೊಟ್ಟರು.
ಒಂದು ಸಂಜೆ ಮೂವರು ಹುಡುಗರು ಬಂದು ಹೇಳಿದರು:
"ರಂಗಮ್ನೋರನ್ನು ನೋಡಬೇಕಾಗಿತ್ತು."
ರಂಗಮ್ಮ ಅವರನ್ನು ಒಳಗೆ ಕರೆಯದೆ ತಾವೇ ಹೊರಗೆ ಬಂದರು.
"ಯಾರಪ್ಪ ನೀವು?"
"ಬಳ್ಳಾಪುರ ನಮ್ಮೂರು. ಪರಮೇಶ್ವರಪ್ಪ ಒಂದು ಕಾಗದ ಕೊಟ್ಟಿದಾರೆ."
ಆ ಹುಡುಗರಲ್ಲೊಬ್ಬ ಮಡಚಿದ್ದೊಂದು ಲಕೋಟೆಯನ್ನು ಹೊರ ತೆಗೆದ.
"ಯಾರು ಪರಮೇಶ್ವರಪ್ಪ?"
"ಅವರು ಹೋದ ವರ್ಷ ಇಲ್ಲೇ ಓದ್ಕೊಂಡಿದ್ರು."

"ಓ ಪರಮೇಶ್ವರಪ್ನಾ?" ಎಂದು ರಂಗಮ್ಮ ರಾಗವೆಳೆದರು. ಹಿಂದಿನ ವರ್ಷ