ಪುಟ:Rangammana Vathara.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

135

ಮೇಲಿನ ಕೊಠಡಿಯಲ್ಲಿ ವಾಸವಾಗಿದ್ದವರ ಮುಖ್ಯಸ್ಥ ತಮಗೆ ಕಾಗದ ಬರೆದಿದ್ದಾನೆಂದು
ಅವರಿಗೆ ಹೆಮ್ಮೆ ಎನಿಸಿತು. ಕಾಗದ ಕೊಡಲು ಕೈ ಚಾಚಿದ ಹುಡುಗನನ್ನು ನೋಡುತ್ತ
ಅವರೆಂದರು;
"ಅದೇನು ಬರೆದಿದ್ದಾನೋ ನೀವೇ ಸ್ವಲ್ಪ ಓದೀಪ್ಪ."
ಪರಮೇಶ್ವರಪ್ಪ ತನ್ನ ಊರಿನ ಹುಡುಗರ ಪರಿಚಯ ಮಾಡಿಕೊಟ್ಟು, ತಾನು
ಹಿಂದೆ ಇದ್ದ ಕೊಠಡಿಯನ್ನು ಬೇರೆ ಯಾರಿಗೂ ಕೊಡದೆ ಆ ಹುಡುಗರಿಗೇ ಕೊಡ
ಬೇಕೆಂದು ಕೇಳಿಕೊಂಡಿದ್ದ. 'ಬೇಡುವ ಆಶೀರ್ವಾದಗಳು' ಎಂದೇನೂ ಬರೆದಿರಲಿಲ್ಲ.
ಆದರೆ 'ಇತಿ ನಮಸ್ಕಾರಗಳು' ಎಂದು ತಿಳಿಸಿದ್ದ.
ಓದಿಯಾದ ಮೇಲೆ ಆ ಕಾಗದವನ್ನು, ಕೈ ಸ್ವಲ್ಪ ಕೆಳಕ್ಕೆ ಒಡ್ಡಿ, ರಂಗಮ್ಮ ಇಸ
ಕೊಂಡರು.
"ಬಾಡಿಗೆ ಎಷ್ಟೂಂತ ಗೊತ್ತೇನಪ್ಪ?"
"ಪರಮೇಶ್ವರಪ್ಪ ಹೇಳಿದಾರೆ...ಹದಿಮೂರು ರೂಪಾಯಿಂತ."
ಉಳಿದ ಶರತುಗಳನ್ನೂ ರಂಗಮ್ಮ ವಿವರಿಸಿದರು.
"ಪರಮೇಶ್ವರಪ್ಪ ವಿಶ್ವಾಸವಿಟ್ಟು ಬರೆದಿದಾನೆ ಅಂದ್ಮೇಲೆ ಕೊಡದೆ ಇರೋ
ಕಾಗುತ್ತೋ? ಅವನಿಗೆ ಪಾಸಾಯ್ತು ಅಲ್ವೆ?"
"ಅವರಿಗೆ ಪಾಸಾಯ್ತು. ಬೇರೆ ಇಬ್ಬರಿಗೆ ಒಂದೊಂದು ಪಾರ್ಟು ಹೋಗಿದೆ.
ಸೆಪ್ಟೆಂಬರಿಗೆ ಕಟ್ತಾರೆ"
ರಂಗಮ್ಮನಿಗೆ ಆ ವಿವರವೊಂದೂ ಅರ್ಥವಾಗಲಿಲ್ಲ.
"ಅಂತೂ ಚೆನ್ನಾಗಿದಾನಲ್ಲ,ಅಷ್ಟೇ ಸಂತೋಷ. ನಮ್ಮ ವಠಾರದಲ್ಲಿ ಓದಿದ
ಹುಡುಗರಿಗೆಲ್ಲ ದೊಡ್ಡ ಕೆಲಸ ಸಿಕ್ಕಿಯೇ ಸಿಗುತ್ತೆ."
ರಂಗಮ್ಮ ಪ್ರಯಾಸಪಟ್ಟು ಮಹಡಿಯ ಮೆಟ್ಟಲುಗಳನ್ನೇರಿ ಆ ಹುಡುಗರನ್ನು
ಕರೆದೊಯ್ದು ಕೊಠಡಿ ತೋರಿಸಿದರು. ಕಾಗದ ಕೊಟ್ಟವನು ಹದಿಮೂರು ರೂಪಾಯಿ
ಗಳನ್ನು ಎಣಿಸಿ ಕೊಟ್ಟ, ತಮ್ಮ ಸಾಮಾನು ತರಲೆಂದು ಇಳಿದು ಹೋದ ಹುಡುಗರನ್ನು
ಜಯರಾಮು ಮತ್ತು ರಾಧಾ ನೋಡಿದರು.
ಶಂಕರನಾರಾಯಣಯ್ಯ ಬರೆದಿದ್ದ 'ಮನೆ ಬಾಡಿಗೆಗೆ ಇದೆ. ಒಳಗಡೆ ವಿಚಾರಿಸಿ'
ಬೋರ್ಡು ರಂಗಮ್ಮನ ಮನೆಯೊಳಕ್ಕೆ ಹೋಯಿತು.
ಹುಡುಗರ ಕೈಯಲ್ಲಿ ರಂಗಮ್ಮ ಕರಾರು ಪತ್ರ ಬರೆಸುವ ಪದ್ಧತಿ ಇರಲಿಲ್ಲ. ಆದರೆ
ರಾತ್ರೆ ಸುಬ್ಬುಕೃಷ್ಣಯ್ಯನನ್ನು ಕರೆಸಿ ಪರಮೇಶ್ವರಪ್ಪ ಬರೆದಿದ್ದ ಕಾಗದವನ್ನು
ಮತ್ತೊಮ್ಮೆ ಓದಿಸಿದರು.

"ನೋಡು ಬ್ರಾಹ್ಮಣನಲ್ದೇ ಇದ್ದರೆ ಏನಾಯ್ತು? ಈ ಊರು ಬಿಟ್ಟು
ಹೋದ್ಮೇಲೂ ರಂಗಮ್ಮನ ವಠಾರವನ್ನ ಆತ ಮರೆತಿಲ್ಲ. ಎಷ್ಟೊಂದು ವಿಶ್ವಾಸ
ಇಟ್ಕೊಂಡಿದಾನೆ!"