ಪುಟ:Rangammana Vathara.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

141

"ಇಲ್ಲ."
ಮಾತು ನಿಂತಿತು. ಮತ್ತೆರಡು ನಿಮಿಷಗಳಲ್ಲಿ ಆತ ಗೊರಕೆ ಹೊಡೆಯುವುದು
ಕೇಳಿಸಿತು.

೧೫

ಆ ವರ್ಷ ವಠಾರಕ್ಕೆ ಬಂದ ಮೂವರು ಹುಡುಗರಿಗೂ ಬೆಂಗಳೂರು ಹೊಸ
ದಾಗಿತ್ತು. ಅಂತಹ ವಠಾರ ಜೀವನವೂ ಹೊಸದು. ಅವರಲ್ಲಿಬ್ಬರು ಊರಲ್ಲಿದ್ದಾಗ
ಕತೆ ಕಾದಂಬರಿಗಳಲ್ಲಿ ಬೆಂಗಳೂರಿನ ವಿಷಯ ಸಾಕಷ್ಟು ಓದಿ ನಾಲಿಗೆ ಚಪ್ಪರಿಸಿದ್ದರು.
ಈಗ ಬೆಂಗಳೂರು ಜೀವನ ಮೈಗೂಡಲು ಅವರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ.
ಇನ್ನೊಬ್ಬ_ ಪರಮೇಶ್ವರಪ್ಪನ ಕಾಗದ ತಂದುಕೊಟ್ಟು ರಂಗಮ್ಮನೊಡನೆ
ಮಾತನಾಡಿದ ಹುಡುಗ_ ಒಳ್ಳೆಯವನಾಗಿದ್ದ. ಆದರೆ ಆತ ಪುಸ್ತಕದ ಕೀಟ. ಪಠ್ಯ
ಪುಸ್ತಕಗಳ ಹೊರಗೆ ಬೇರೆ ಪ್ರಪಂಚವಿದೆ ಎಂಬುದನ್ನು ಎಂದೂ ಒಪ್ಪಿದವನಲ್ಲ. ಎರಡು
ವಾರಗಳಿಗೊಮ್ಮೆ ತಪ್ಪದೆ ಊರಿಗೆ ಕಾಗದ ಬರೆಯುತ್ತಿದ್ದ. ನಿಯಮಕ್ಕೆ ಮೀರಿ
ಹೋಟೆಲುಗಳಿಗೆ ಭೇಟಿ ಕೊಡುತ್ತಿರಲಿಲ್ಲ. ಸಂಜೆ ಒಬ್ಬನೇ ತಿರುಗಾಡಲು ಹೋಗು
ತ್ತಿದ್ದ. ಆದರೆ ಆಗಲೂ ಕಂಕುಳಲ್ಲೊಂದು ಪುಸ್ತಕವಿರುತಿತ್ತು. ಕತ್ತಲಾದೊಡನೆ
ಕೊಠಡಿಗೆ ಹಿಂತಿರುಗುತಿದ್ದ.
ಸೂಕ್ಷ್ಮ ನಿರೀಕ್ಷೆಯಲ್ಲಿ ಸಮರ್ಥನಾದ ಜಯರಾಮುವಿಗೆ ಈ ಹುಡುಗನ ಗುಣ
ತಿಳಿಯಿತು. ಸ್ನೇಹಿತರನ್ನು ಗಳಿಸಿಕೊಳ್ಳುವ ಆತುರವೇನೂ ಜಯರಾಮುವಿಗೆ ಇರ
ಲಿಲ್ಲವಾದರೂ, ಒಂದೇ ವಠಾರವೆಂದ ಮೇಲೆ ಮಾತನಾಡಿಸದೆ ಇರಬಾರದೆಂದು
ಭಾವಿಸಿದೆ.
ವಠಾರಕ್ಕೆ ಅಂಚೆಯವನು ಬರುತ್ತಿದ್ದುದು ಎಂದಾದರೊಮ್ಮೆ. ಹೊರ ಅಂಗಳ
ದಲ್ಲಿ ಯಾರಾದರೂ ಇದ್ದರೆ, ಆ ಬೀದಿಯಲ್ಲಿ ಅಂಚೆಯವನು ಹಾದು ಹೋದಾಗ
ಎಲ್ಲರ ಕಣ್ಣುಗಳೂ ಅವನ ಕಡೆ ತಿರುಗುತ್ತಿದ್ಧವು. ಆತ ವಠಾರದೊಳಕ್ಕೆ ಬರುವ ಕೃಪೆ
ತೋರಿದ ದಿನ, ಎಲ್ಲರ ಕತ್ತುಗಳೂ ನೀಳವಾಗುತ್ತಿದ್ದುವು. ಕಾಗದ ತಮ್ಮದಿರಬಹುದು,
ತಮ್ಮದೇ ಇರಬೇಕು ಎಂದು ಪ್ರತಿಯೊಂದು ಮನೆಯವರೂ ಭಾವಿಸುತ್ತಿದರು. ಆಗ
ರಂಗಮ್ಮನೂ ಹೊರ ಬಂದು, ಕಾಗದ ಯಾವುದಾದರೂ ಮನೆಯ ಒಳಹೋಗುವು
ದನ್ನು ನೋಡುತ್ತಿದ್ದರು. ಆಗ ಇತರರಿಗೆ ನಿರಾಶೆಯಾಗುತ್ತಿತ್ತು. ಆದರೂ ಅಪ್ಪಿ
ತಪ್ಪಿ ತಮ್ಮ ಕಾಗದವೇ ಆ ಮನೆಯೊಳಗೆ ಹೋಗಿರಬಹುದೆಂಬ ಶಂಕೆ ಕೆಲವರಿಗೆ ತಲೆ

ದೋರದೆ ಇರುತ್ತಿರಲಿಲ್ಲ. ಹೀಗಾಗಿ, ಕಾಗದ ಬಂದು ಯಾವುದಾದರೂ ಮನೆ ಸೇರಿ