ಪುಟ:Rangammana Vathara.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

144

ರಂಗಮ್ಮನ ವಠಾರ

ಸಿಗ್ತೇನು?"
"ಓ__ಸಿಕ್ತು."
"ನೀವೇನಾ ರಾಜಶೇಖರ ಅಂದರೆ?"
"ಹೌದು. ಒಳಗ್ಬನ್ನಿ. ನಿಮ್ಮ ಹೆಸರು ಜಯರಾಮು ಅಲ್ವಾ?"
"ಹೌದು.ಜಯರಾಂ ಅಂತ," ಎಂದು ಸ್ವಲ್ಪ ತಿದ್ದುವ ಧ್ವನಿಯಲ್ಲಿ ಜಯ
ರಾಮು ಹೇಳಿದ. ತನ್ನ ತಾಯಿ ಹೆಸರು ಹಿಡಿದು ಕರೆಯುವುದನ್ನು ಕೇಳಿ ತಿಳಿದು
ಕೊಂಡಿರಬೇಕು ಎಂದು ಲೆಕ್ಕ ಹಾಕಿದ.
ಜಯರಾಮು ಒಳಗೆ ಬರಲಿಲ್ಲವೆಂದು ರಾಜಶೇಖರ ನಿಂತೇ ಇದ್ದ. ಆತನ
ದೃಷ್ಟಿ ಜಯರಾಮು ಹಿಡಿದಿದ್ದ ಪುಸ್ತಕದತ್ತ ಹೋಯಿತು. ತಾನು ಸೆಪ್ಟೆಂಬರ್ ವೀರ
ನೆಂದು ಹೇಳಬೇಕಾದ ಹೊತ್ತು ಬಂತು ಎಂದುಕೊಂಡ ಜಯರಾಮು.
ಮಾತು ಮುಂದುವರಿಸಬೇಕೋ ಬೇಡವೊ ಎಂದು ಸಂಕೋಚಪಡುತ್ತಲೆ ರಾಜ
ಶೇಖರ ಕೇಳಿದ:
"ನೀವು ಕ್ಲಾಸಿಗೆ ಹೋಗೊಲ್ವೊ?"
"ಇಲ್ಲಾರಿ ಸೆಪ್ಟೆಂಬರ್ಗೆ ಕಟ್ಟಿದೀನಿ."
"ಬಿ.ಎಸ್.ಸೀನೆ?"
ಇದು ನುಂಗಲಾರದ ತುತ್ತು ಎನ್ನಿಸಿತು ಜಯರಾಮುಗೆ.
"ಅಲ್ಲ. ಇಂಟರ್. ಒಂದು ಪಾರ್ಟಿದೆ, ಅಷ್ಟೆ."
ಕಣ್ಣುಗಳನ್ನು ಮಿನುಗಿಸುತ್ತ ರಾಜಶೇಖರ ಕೇಳಿದ:
"ನಿಮಗೆ ಪರಮೇಶ್ವರಪ್ಪ ಗೊತ್ತಾ?"
ಪರಮೇಶ್ವರಪ್ಪನ ವಿಷಯವಾಗಿ ಆ ಹುಡುಗನಿಗೆ ತುಂಬ ಗೌರವ ಎಂಬುದು ಆ
ಧ್ವನಿಯಿಂದಲೆ ಸ್ಪಷ್ಟವಾಗುತ್ತಿತ್ತು.
"ಹೌದು ಹೋದ ವರ್ಷ ಇಲ್ಲೇ ಇದ್ರು."
"ಅವರ ಸಹಾಯದಿಂದಲೇ ನಮಗೆ ಈ ಕೊಠಡಿ ಸಿಗ್ತು."
ಪರಮೇಶ್ವರಪ್ಪ ರಂಗಮ್ಮನಿಗೆ ಕಾಗದ ಬರೆದಿದ್ದ ವಿಷಯವಂತೂ ಜಯ
ರಾಮುಗೆ ಗೋತ್ತಿತ್ತು.
"ಪರಮೇಶ್ವರಪ್ಪ ಈಗೇನು ಮಾಡ್ತಾರೆ?"
"ಓ_ಅವರು ಬೆಳಗಾಂವಿಗೆ ಹೊರಟ್ಹೋದ್ರು. ವಕೀಲಿ ಓದ್ತಾರಂತೆ."
"ಅದ್ಯಾಕೆ, ಅಷ್ಟು ದೂರ?"
"ಅಲ್ಲಿ ಮೇಷ್ಟ್ರ ಕೆಲಸ ಸುಲಭವಾಗಿ ಸಿಗ್ತದಂತೆ. ಅವನ್ನೂ ಮಾಡ್ಕಂಡು ವಕೀಲಿ
ಓದ್ತಾರಂತೆ."
"ಓ...ಹಾಗಾ?"
ಸಂಭಾಷಣೆ ಮುಂದುವರಿಸಲು ಬೇರೆ ವಿಷಯವಿಲ್ಲದೆ ರಾಜಶೇಖರ