ಪುಟ:Rangammana Vathara.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

150

ಸೇತುವೆ

ಸ್ಸನ್ನು ನಿದ್ದೆಯ ಹೊದಿಕೆಯೊಳಗೆ ಮುಚ್ಚಲೆತ್ನಿಸುತ್ತ, ಅತ್ತಿತ್ತ ಹೊರಳಾಡಿದ.
ರಾಜಶೇಜರನಿಗೆ ಬಹಳ ಹೊತ್ತು ನಿದ್ದೆ ಬರಲೇ ಇಲ್ಲ. ಬಂದ ಆರಂಭದಲ್ಲಿ
ಅವನು ಆಸೆ ಕಟ್ಟಿಕೊಂಡಿದ್ದ_ತಮ್ಮ ಊರಿನ ತಾವು ಮೂವರು ಜತೆಯಾಗಿಯೇ
ಸ್ನೇಹದಿಂದ ಇರಬೇಕೆಂದು. ಆ ಆಸೆ ಈಗ ಇರಲಿಲ್ಲ. ತನ್ನಿಂದ ಬಲು ದೂರ ಸಾಗಿದ್ದ
ಆ ಜತೆಗಾರ ತನ್ನ ತಂದೆಯನ್ನು ಒಪ್ಪಿಸಿ ಕಾಲೇಜು ಹಾಸ್ಟೆಲಿಗೇ ಹೋಗುವ ಸಂಭವ
ವಿತ್ತು. ಹಾಗೆ ಹೋದರೆ ಕೊಠಡಿಯ ಬಾಡಿಗೆಯ ಪೂರ್ತಿ ಭಾರ ಉಳಿದಿಬ್ಬರ ಮೇಲೆ
ಬೀಳುವುದು. ಜತೆಗಿರಲು ಬೇರೊಬ್ಬ ವಿದ್ಯಾರ್ಥಿ ಸುಲಭವಾಗಿ ಸಿಗುವ ಸಂಭವ
ವಿರಲಿಲ್ಲ.
ಮುಂದಿನ ವರ್ಷವಾದರೂ ಉಚಿತ ವಿದ್ಯಾರ್ಥಿನಿಲಯದಲ್ಲಿ ಜಾಗ ದೊರಕಿಸಿ
ಕೊಳ್ಳಲು ತಾನು ಯತ್ನಿಸಬೇಕೆಂದು ರಾಜಶೇಖರ ಅಂದುಕೊಂಡ.
ನಾಲ್ಕು ಅಡಿಗಳ ಅಂತರದಲ್ಲಿ ಮಲಗಿದ್ದ ಸಹಪಾಠಿಯೊಡನೆ ಹೃದಯ ತೆರೆದು
ಮಾತನಾಡಬೇಕೆಂದು ಆಸೆಯಾಯಿತು, ಅತ್ತು ಮನಸ್ಸು ತಿಳಿಯಾಗಿದ್ದ ರಾಜಶೇಖರನಿಗೆ,
ಆದರೆ ಆ ಸಹಪಾಠಿಗೆ ನಿದ್ದೆ ಬಂದಿತ್ತು,ಅಷ್ಟರಲ್ಲೆ.
.....ಈ ವರ್ಷ ರಂಗಮ್ಮ ಮಹಡಿಯ ಮೇಲಿನ ವಿದ್ಯಾರ್ಥಿಗಳ ವಿಷಯದಲ್ಲಿ
ಒಳ್ಳೇ ಅಭಿಪ್ರಾಯ ತಳೆಯಲಿಲ್ಲ. ಹುಡುಗರಲ್ಲೊಬ್ಬ ಸಿಗರೇಟು ಸೇದುತ್ತಿದ್ದುದೂ
ಅವರಿಗೆ ಗೊತ್ತಾಯಿತು. ನಾಲ್ಕು ದಿನ'ಕಾಲ ಕೆಟ್ಟುಹೋಯ್ತೆಂದು' ಅವರು ಗೊಣ
ಗಿದರು. ಆ ಬಳಿಕ,'ಬಾಡಿಗೆ ಸರಿಯಾಗಿ ಬರ್ತಿದೇಂತ ಸುಮ್ಮನಿದೀನಿ' ಎಂದು ತನಗೆ
ತಾನೇ ಸಮಾಧಾನ ಹೇಳಿಕೊಂಡರು.
ಬಂದ ಆರಂಭದಲ್ಲಿ ಮೂವರು ಹುಡುಗರೂ ವಠಾರಾದ ಕಕ್ಕಸನ್ನು ಉಪಯೋಗಿ
ಸಲು ಯತ್ನಿಸಿದ್ದರು.ಆದರೆ ಅಲ್ಲಿ ಕ್ಯೂ ನಿಂತು ಎರಡು ದಿನಗಳಲ್ಲೇ ಅವರಿಗೆ
ಸಾಕೋಸಾಕು ಅನ್ನಿಸಿಹೋಯಿತು. ಆ ಬಳಿಕ ಪ್ರತಿಯೊಂದಕ್ಕೂ ಅವರು ಹೋಟೆ
ಲನ್ನೇ ಆವಲಂಬಿಸಿದರು. ರಾಜಶೇಖರ ಬೆಳಗ್ಗೆ ಒಂದು ಬಕೀಟು ನೀರನ್ನಷ್ಟು ಒಯ್ದು
ಮೇಲಿಡುತ್ತಿದ್ದ. ಬಾಯಾರಿದಾಗ ಕುಡಿಯುವುದಕ್ಕೂ ಓದಿನ ನಡುವೆ ತೂಕಡಿಸಿದಾಗ
ಕಣ್ಣಿಗೆ ಮುಟ್ಟಿಸುವುದಕ್ಕೂ ಅದು ಉಪಯೋಗವಾಗುತ್ತಿತ್ತು.
ಹೋಟೆಲಿನ ಊಟ ಸೇರದೆ ಚಿಕ್ಕವನು ನಾಲ್ಕು ದಿನ ವಾಂತಿಸಭೇದಿಯಿಂದ ನರ
ಳಿದ್ದೂ ಆಯಿತು.
"ಹುಡುಗ ಹ್ಯಾಗಿದಾನೆ?" ಎಂದು ರಂಗಮ್ಮ ರಾಜಶೇಖರನನ್ನು ಒಂದೆರಡು
ಸಾರಿ ವಿಚಾರಿಸಿ,ಸುಮ್ಮನಾದರು. ಬಡಕಲಾಗಿದ್ದ ಪುಟ್ಟ ಹುಡುಗ ದಿನಕ್ಕೆ ಆರೇಳು
ಸಾರಿ,ಕಕ್ಕಸಿಗೆಂದು ಓಣಿ ದಾಟಿ ಬರುತ್ತಿದ್ದುದನ್ನು ಅವರು ಕಂಡರು.
"ಅದೇನೂಂತ ಇಷ್ಟು ಚಿಕ್ಕ ಹುಡುಗರನ್ನ ಅಷ್ಟು ದೂರ ಕಳಿಸ್ತಾರೋ,
ಎಂದು ರಂಗಮ್ಮ ಈಗಿನ ವಿದ್ಯಾಪದ್ಧತಿಯ ವಿಷಯದಲ್ಲೇ ಅಸಮ್ಮತಿ ಸೂಚಿಸಿದರು.
ರಾಜಶೇಖರ ಎಡೆಬಿಡದೆ ಆ ಹುಡುಗನ ಆರೈಕೆ ಮಾಡಿದ. ಕಾಹಿಲೆ ಗುಣವಾಗಿ