ಪುಟ:Rangammana Vathara.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

151

ಹುಡುಗ ಬೇಗನೆ ಚೇತರಿಸಿಕೊಂಡಾಗ, ರಾಜಶೇಖರನಿಗೆ ಸಮಾಧಾನವಾಯಿತು.
ಚಿಕ್ಕವನು ನಾಲ್ಕು ದಿನ ರಜೆ ಪಡೆದು ಊರಿಗೆ ಹೋಗಿ ಬಂದ.
...ಆದರೆ ರಂಗಮ್ಮ ಆ ಹುಡುಗರ ವಿಷಯವಾಗಿ ಕಟು ಮಾತು ಆಡಬೇಕಾದ
ಮತ್ತೊಂದು ಸನ್ನಿವೇಶ ಒದಗಿ ಬಂತು. ಅದಕ್ಕೆ ಕಾರಣ ದೇವಯ್ಯ.
ರಾಧೆಯ ಯೋಚನೆಯನ್ನು ಬಿಟ್ಟುಕೊಟ್ಟ ಆ ಹುಡುಗನ ಕಣ್ಣುಗಳು ವಿಶ್ರಾಂತಿ
ಇಲ್ಲದೆ ಅತ್ತಿತ್ತ ಹೊರಳಿದ್ದುವು. ಎದುರು ಬದಿಯ ಮೂಲೆಯಲ್ಲಿದ್ದ ಮಹಡಿಯ
ದೊಡ್ಡ ಮನೆಯ ಹುಡುಗಿಯನ್ನು ಆತ ಕಂಡ. ಮೊದಮೊದಲು ಏನೋ ಎತ್ತವೋ
ಎಂದು ಸ್ವಲ್ಪ ಅಳುಕು ಆತನನ್ನು ಬಾಧಿಸಿತು. ಆದರೆ ಕ್ರಮೇಣ ಅವನ ಅಭಿಪ್ರಾಯ
ಗಳು ನಿರ್ಧಿಷ್ಟ ರೂಪ ತಳೆದುವು. ಎಲ್ಲ ಹುಡುಗಿಯರೂ ಒಂದೇ-ನೋಡಿ
ಮುಟ್ಟಿ ಆನಂದಿಸಬೇಕಾದ ಬೊಂಬೆಗಳು, ಎಂಬುದು ಅವನ ಅಭಿಪ್ರಾಯಗಳಲ್ಲಿ
ಒಂದು. ಆತನಿಗಿದ್ದುದು ನೋಟದ ಅನುಭವ ಮಾತ್ರ. ಆತ ಹೇಳಿಕೊಳ್ಳುವ ಸ್ಫುರಡಟ೨ಅಟ
ದ್ರೂಪಿಯೇನೂ ಆಗಿರಲಿಲ್ಲ. ಆದರೆ ತಾನು ಅತ್ಯಂತ ಸುಂದರವಾದ ಯುವಕ, ಯಾವ
ಹುಡುಗಿಯಾದರೂ ಸರಿಯೇ ತನ್ನನ್ನು ಕಂಡು ಮೋಹಿಸಲೇಬೇಕು-ಎಂಬುದು ಅವನ
ಧೃಢ ನಂಬಿಕೆಯಾಗಿತ್ತು.
ಅಷ್ಟು ಆತ್ಮವಿಶ್ವಾಸವಿದ್ದ ದೇವಯ್ಯ ಎದುರು ಬೀದಿಯ ಶ್ರೀಮಂತ ಹುಡುಗಿಗೆ
ಕಾಣಿಸುವಂತೆ ಕಿಟಕಿಯ ಬಳಿ ನಿಂತುಕೊಳ್ಳತೊಡಗಿದ. ಬಾಲ್ಕನಿಗೆ ಆಗಾಗ್ಗೆ ಬರುತ್ತಿದ್ದ
ಆ ಹುಡುಗಿ ದೇವಯ್ಯನನ್ನು ನೋಡಿದಳು.ಆದರೆ ಮುಖದ ಮೇಲೆ ಯಾವ ಭಾವನೆ
ಯನ್ನು ತೋರ್ಪಡಿಸಲಿಲ್ಲ. ದೇವಯ್ಯ ಮುಂದಿನ ಹೆಜ್ಜೆಯೆಂದು ಆ ಹುಡುಗಿಯನ್ನು
ನೋಡಿ ಹಲ್ಲು ಕಿರಿದ.ಹುಡುಗಿ ದುರದುರನೆ ವಠಾರದತ್ತ ನೋಡಿದಳು.
"ಕಿಟಕಿಯಿಂದೀಚೆಗೆ ಬಾರೋ. ಓದಕ್ಕೆ ಕಾಣ್ಸಲ್ಲ.."ಎಂದು ರಾಜಶೇಖರ
ಎರಡು ಸಾರಿ ದೂರಿಕೊಂಡ ಮೇಲೆ ದೇವಯ್ಯ ಹೊರಬಂದು ವಠಾರದ ಮಹಡಿ
ಮೆಟ್ಟುಲುಗಳ ಮೇಲೆ ನಿಂತು ನೋಡತೊಡಗಿದ.
ಇದು ಜಯರಾಮುವಿನ ದೃಷ್ಟಿಗೆ ಬಿತ್ತು. ಆ ಹುಡುಗಿಯ ವಿಷಯವಾಗಿ
ಆತನಿಗೆ ತೀರಾ ಕೆಟ್ಟ ಅಭಿಪ್ರಾಯವೂ ಇರಲಿಲ್ಲ; ಅಷ್ಟು ಒಳ್ಳೆಯ ಅಭಿಪ್ರಾಯವೂ
ಇರಲಿಲ್ಲ.ಆದರೆ ದೇವಯ್ಯನ ವಿಷಯದಲ್ಲಿ ಮಾತ್ರ ಮನಸ್ಸು ವ್ಯಗ್ರವಾಯಿತು.
ದೇವಯ್ಯ ನಿಧಾನವಾಗಿ ನಯವಾಗಿ ವರ್ತಿಸಿದ್ದರೆ,ಪರಿಸ್ಥಿತಿ ವಿಕೋಪಕ್ಕೆ
ಹೋಗುತ್ತಿರಲಿಲ್ಲ.ಆದರೆ ಆತನದು ಆತುರ ಪ್ರಕೃತಿ,ಎಲ್ಲಿಲ್ಲದ ಅವಸರ.ಆ ಹುಡುಗಿ
ಕಾಲೇಜಿಗೆ ಹೊರಟಾಗ ಪ್ರತಿ ದಿನವೂ ಬೆಳಗ್ಗೆ ಆಕೆಯ ಹಿಂದೆ ಬಸ್‌ಸ್ಟಾಪಿನವರೆಗೂ
ಹೋದ.
ಒಮ್ಮೆ ಆಕೆ "ಕೋತಿ!"ಎಂದು ಬಯ್ದಳು.
ದೇವಯ್ಯನಿಗೆ ಮುಖಭಂಗವಾಯಿತು.ಇವಳ ಜಂಭ ಎಷ್ಟರ ತನಕ ಇರುತ್ತೋ
ಒಂದು ಕೈ ನೋಡಿಯೇ ಬಿಡಬೇಕು ಎಮಧೂ ತೀರ್ಮಾನಿಸಿದ