ಪುಟ:Rangammana Vathara.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

152

ಸೇತುವೆ

ದೃಷ್ಟಿದಾಳಿ ಏಕಪ್ರಕಾರವಾಗಿ ನಡೆಯಿತು.
ಒಂದು ದಿನ ಆತ ವಠಾರದ ಮೆಟ್ಟಲುಗಳ ಮೇಲೆ ನಿಂತು ನೋಡುತ್ತಿದ್ದಂತೆ
ಒಬ್ಬಾಕೆ ಒಳಬಂದು "ಅಮ್ಮಣ್ಣೀ"ಎಂದು ರಂಗಮ್ಮನನ್ನು ಕರೆದಳು. ಆಕೆ ಆ ದೊಡ್ಡ
ಮನೆಯ ಕೆಲಸದವಳೆಂಬುದು ದೇವಯ್ಯನಿಗೆ ಗೊತ್ತಾಗಲಿಲ್ಲ.
ಆಕೆ ತಂದ ಸಂದೇಶ ಕೇಳಿ ರಂಗಮ್ಮ ಕಿಡಿಕಿಡಿಯಾದರು.
"ಎಂಥಾ ಹಲ್ಕಾ ಹುಡುಗ್ರು ಸೇರ್ಕೊಂಡುವಪ್ಪಾ ಈ ವರ್ಷ.."ಎಂದು ಆಕೆ
ಆಕ್ರೋಶ ಮಾಡಿದರು.
ಆ ಸದ್ದು ಕೇಳುತ್ತಲೇ ಗಾಬರಿಯಾಗಿ ದೇವಯ್ಯ ಕೊಠಡಿಯೊಳಕ್ಕೆ ಓಡಿದ.
ರಂಗಮ್ಮ ಬಲು ಪ್ರಯಾಸದಿಂದ ಮೆಟ್ಟಲೇರಿ ಬಂದರು.
"ಯಾರೋ ಅದು?ಯಾಕಪ್ಪಾ ಹೀಗ್ಸಾಯ್ತೀರಾ? ನಿಮಗೆ ಅಕ್ಕ ತಂಗಿ ಇಲ್ವೇ
ನಪ್ಪಾ ಯಾರಿಗೂ?ನಮ್ಮ ವಠಾರಕ್ಕೆ ಕೆಟ್ಟ ಹೆಸರು ತರ್ತೀರಲ್ಲಪ್ಪಾ ನೀವು!"
ದೇವಯ್ಯನ ಮುಖ ಕಪ್ಪಿಟ್ಟಿತ್ತು. ಚಿಕ್ಕ ಹುಡುಗ ಆಶ್ಚರ್ಯದ ನೋಟದಿಂದ
ದೊಡ್ಡವನನ್ನು ನೋಡಿದ್ದ. ರಂಗಮ್ಮ ಹೇಳುತ್ತಿದ್ದು ದು ಜಯರಾಮುಗೆ ಕೇಳಿಸುತ್ತಿದೆ
ಯಲ್ಲ. ಈ ವಠಾರದಲ್ಲಿನ್ನು ತಲೆ ಎತ್ತದ ಹಾಗೆ ಆಯಿತಲ್ಲಾ ಎಂದು ರಾಜಶೇಖರ
ಮನಸ್ಸಿನೊಳಗೆ ಗೋಳಾಡಿದ.
ನಾಲ್ಕೈದು ನಿಮಿಷ ಹೇಳಿದ್ದನ್ನೆ ಹೇಳಿ ರಂಗಮ್ಮ ಕೊನೆಯ ಎಚ್ಚರಿಕೆ
ಕೊಟ್ಟರು:
"ಇದೇ ಆಖೈರು. ಇನ್ನೊಂದ್ಸಲ ಹೀಗೇನಾದ್ರೂ ಆದ್ರೆ ಈ ರೂಮು ಬಿಟ್ಟು
ನೀವು ಹೊರಟ್ಹೋಗ್ಬೇಕು. ತಿಳೀತಾ?ಹುಷಾರಾಗಿರಿ!"
ರಂಗಮ್ಮ ಮೆಲ್ಲನೆ ಕೆಳಕ್ಕಿಳಿದರು. ಗದ್ದಲ ಕೇಳಿ ಹೊರಬಂದಿದ್ದ ಚಂಪಾವತಿ
ಯನ್ನು ನೋಡಿ ಅವರೆಂದರು:
"ನನಗೆ ಗೊತ್ತು, ಆ ಜನವೇ ಹಾಗೆ."
ವಿಷಯ ಏನೆಂದು ತಿಳಿದ ಚಂಪಾ ಅಂದಳು:
"ಆ ಜನ ಅಂತ ಏನು ರಂಗಮ್ನೋರ? ಬ್ರಾಹ್ಮಣ ಹುಡುಗರೇನು ಕಡಿಮೇನೇ?
ಹುಡುಗರು ಅಂದ್ರೆ ಯಾವಾಗಲೂ ಅಷ್ಟೇ. ಈಗಿನೋರಲ್ಲಿ ಸ್ವಲ್ಪ ಪೋಲಿತನ
ಜಾಸ್ತಿ."
"ಪೋಲಿತನ ಅಲ್ಲ ಚಂಪಾ, ಭಂಡತನ-ಭಂಡತನ!"

೧೬


ಜಯರಾಮುವಿನ ಪರೀಕ್ಷೆ ಮುಗಿದು ನವರಾತ್ರಿ ಹಬ್ಬ ಬಂತು.
ಹಬ್ಬ ಬಂದಾಗಲೆಲ್ಲ ರಂಗಮ್ಮನಿಗೆ ಮಕ್ಕಳು ಮೊಮ್ಮಕ್ಕಳನ್ನು ನೋಡುವ