ಪುಟ:Rangammana Vathara.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

153

ಬಯಕೆ ಹೆಚ್ಚುತ್ತಿತ್ತು. ಆದರೆ ಈ ಸಲ ಯಾರೂ ಬರಲಿಲ್ಲ.
ಮಂಜು ಕವಿದ ಒಂದು ಮುಂಜಾನೆ ರಂಗಮ್ಮನೆಂದರು:
"ಮಳೆ ಹೋಯ್ತೂಂತ ಕಾಣುತ್ತೆ."
ಹೊರಗೆ ತೋರಿಸದೆ ಇದ್ದರೂ ಒಳಗೆ ,ಮಳೆ ನಿಂತಿತಲ್ಲಾ ಎಂದು ಅವರೆಗೆಷ್ಟೋ
ಸಮಾಧಾನವೆನಿಸಿತ್ತು.
ನಾದಿನಿ ಹೋದಂದಿನಿಂದ ಉಪಾಧ್ಯಾಯರ ಹೆಂಡತಿ ಕಷ್ಟಕ್ಕೆ ಒಳಗಾಗಿದ್ದಳು.
ಐದು ಜನ ಮಕ್ಕಳಿದ್ದ ಆ ಸಂಸಾರದ ಗೃಹಕೃತ್ಯವನ್ನು ಒಬ್ಬಳಿಂದಲೇ ನೆರವೇರಿಸಿ
ಕೊಂಡು ಹೋಗುವುದು ಸುಲಭವಾಗಿರಲಿಲ್ಲ. ಸಾಲದುದಕ್ಕೆ ಅವಳ ಆರೋಗ್ಯವೂ
ಸರಿಯಾಗಿರಲಿಲ್ಲ. ಈ ವರ್ಷ ವರ್ಗ ಬೇರೆ ಆಗುವುದೆಂದು ಕಿಂವದಂತಿ ಹುಟ್ಟಿಕೊಂಡು
ಲಕ್ಷ್ಮೀನಾರಾಯಣಯ್ಯ ಗಾಬರಿಯಾಗಿದ್ದರು. ಈ ಸಲ ಬೀಸುತ್ತಿದ್ದ ದೊಣ್ಣೆಯಿಂದ
ತಪ್ಪಿಸಿಕೊಳ್ಳಲಾಗುವುದಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿತ್ತು.
"ಮುಂದಿನ ಏಪ್ರಿಲ್ ಹೊತ್ತಿಗೆ ವರ್ಗವಾದರೂ ಆಗಬಹುದು" ಎಂದು ಲಕ್ಷ್ಮೀ
ನಾರಾಯಣಯ್ಯ ರಂಗಮ್ಮನಿಗೆ ಸುದ್ದಿ ತಿಳಿಸಿದರು.
"ವರ್ಗವಾದರೂ ಎಲ್ಲಾದರೂ, ಹತ್ತಿರಕ್ಕೇ ಆಗುತ್ತೆ. ಸಂಸಾರವನ್ನೆಲ್ಲಾ ಇಲ್ಲೇ
ಬಿಟ್ಟಿರ್ರ್ತೀನಿ," ಎಂದು ಮುಂದಿನ ಯೋಜನೆಯನ್ನೂ ಲಕ್ಷ್ಮೀನಾರಾಯಣಯ್ಯ ತಿಳಿ
ಸಿದ್ದರಿಂದ, 'ಮನೆ ಬಾಡಿಗೆಗೆ ಇದೆ' ಬೋರ್ಡಿನ ವಿಚಾರ ರಂಗಮ್ಮ ಯೋಚಿಸಿಲಿಲ್ಲ.
............
ಈ ನಡುವೆ ವಠಾರದ ನೆಮ್ಮದಿಯನ್ನು ಕದಡಿದೊಂದು ಪ್ರಕರಣ ನಡೆದು
ಹೋಯಿತು.
ಅದು ಆರಂಭವಾದುದು ನೀರಿನ ನಲ್ಲಿಯ ಬಳಿ. ರಾಧೆಯ ಬಕೀಟಿನ ಹಿಂದೆ
ರಾಜಮ್ಮನ ಬಿಂದಿಗೆ ಇತ್ತು, ಆನಂತರ ಅಹಲೈಯ ಸರದಿ.
"ಒಂದು ರಾಶಿ ಬಟ್ಟೆ ಬಿದ್ದಿದೆ ಒಗೆಯೋಕೆ. ನಾನು ಮೊದಲು ನೀರು ಹಿಡಕೋ
ತೀನಿ ಕಣೇ," ಎಂದು ಅಹಲ್ಯಾ ರಾಧೆಗೆ ಹೇಲಿದರು. ರಾಧೆ ಬೇಡವೆನ್ನಲಿಲ್ಲ. ಅವ
ರಿಬ್ಬರೂ ಸ್ಥಳ ಬದಲಿಸಿಕೊಂಡರು. ತಟ್ಟೆಯಲ್ಲಿ ಉಪ್ಪಿಟ್ಟು ತುಂಬಿ ವೆಂಕಟೇಶನಿಗೆ
ಕೊಟ್ಟು ಬಂದ ರಾಜಮ್ಮನಿಗೆ, ಅಹಲ್ಯಾ ತನಗಿಂತ ಮುಂದಾಗಿ ನಿಂತಿದ್ದುದು ಕಂಡಿತು.
ಆಕೆ ಏನಾಗಿತ್ತೆಂಬುದನ್ನು ಗಮನಿಸದೆ ಅಹಲ್ಯೆಯತ್ತ ಧಾವಿಸಿದಳು.
"ಅಹಹಹಾ ನೀನೇ! ನಡಿ ಹಿಂದೆ!" ಎಂದು ಅಹಲ್ಯೆಯ ತೋಳು ಹಿಡಿದು ಆಕೆ
ಎಳೆದಳು.
ಆಗ ಕೊಳಾಯಿಯ ಬಳಿ ಇದ್ದ ಪದ್ಮಾವತಿಯೆಂದಳು:
"ನನ್ನದಾಯ್ತು. ಇನ್ನು ಹಿಡಕೊಳ್ಳೀಮ್ಮಾ."
ಅಹಲ್ಯಾ ತನ್ನ ಬಿಂದಿಗೆ ಇಡಬೇಕು. ಆದರೆ ರಾಜಮ್ಮ ಬಿಡಲೊಲ್ಲಳು. ಅಹಲ್ಯಾ

20