ಪುಟ:Rangammana Vathara.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

155

ಜವಾನರೂ ನೀರು ಹಿಡಿದು ಒಳಕ್ಕೊಯ್ದು ಹೂ ಗಿಡಗಳಿಗೆ ಚಿಮುಕಿಸುತ್ತಿದರು.
ಬೀದಿಯ ಕೊಳಾಯಿಯ ನೀರಿಗೆ ದುಡು ಕೊಡಬೇಕಾಗಿರಲಿಲ್ಲಿವಾದ್ದರಿಂದ ಅದನ್ನೇ
ಹೊದೋಟಕ್ಕಗಿ ಆ ದೊಡ್ಡ ಮನೆಯವರು ಉಪಯೋಗಿಸುವುದು ಸಹಜವಾಗಿತ್ತು.
"ಒಂದೆರಡು ಬಿಂದಿಗೆ ನೀರು ಹಿಡ್ಕೋತೀನಪ್ಪಾ," ಎಂದು ರಾಜಮ್ಮ
ಆಂಗಲಾಚಿದಯಳು.
"ಒಂದ್ಗಂಟೆ ಒತ್ತು ಬಿಟ್ಕಂಬನ್ನಿ," ಎಂದನೊಬ್ಬ. ಇನ್ನೊಬ್ಬ ಹೇಳಿದ:
"ವಠಾರದ ಕೊಳಾಯಿ ಕೆಟ್ಟೋಗೈತೆ?"
ಆ 'ಶೂ- ಮುಂಡೇವು'ಗಳೆದುರು ಬೇಡುತ್ತ ನಿಲ್ಲುವುದು ಮಾನಗೇಡೆಂದು
ರಾಜಮ್ಮ ಬುಸುಗುಟ್ವಿಕೊಂಡು ವಠಾರಕೈ ವಾಪಸು ಬಂದಳು. ಮನೆಯೊಳಗೇ ಇದ್ದು,
ಎಲ್ಲರದೂ ಆದ ಬಳಿಕ ತಾನು ನೀರು ಹಿಡಿದುಕೊಂಡಳು.
...ಅಷ್ಟೇ ಆಗಿದ್ದರೆ ಅದು ನಾಲ್ಕು ದಿನಗಳೊಳಗೆ ಮರೆತು ಹೋಗಬೇಕಾದ
ಸಾಮಾನ್ಯ ವಿಷಯವಾಗುತ್ತಿತು.
ಆದರೆ ಅದು ಅಷ್ಟೇ ಆಗಿರಲಿಲ್ಲ.
ಹಾಗೆಂದು ಮೊದಲು ಕಂಡು ಹಿಡಿದವಳು ಚಂಪಾ.
ಒಂದು ಮಧ್ಯಾಹ್ನ 'ಚಂದ್ರಲೇಖಾ' ಚಿತ್ರದ ಮ್ಯಾಟಿನಿ ಪ್ರದರ್ಶನ ನೋಡಲು
ಚಂಪಾವತಿಯ ನಾಯಕತ್ವದಲ್ಲಿ ವಠಾರದಿಂದ ಒಂದು ತಂಡ ಸೆಂಟ್ರಲ್ ಟಾಕೀಸಿಗೆ
ಹೊರಟಿತು. ಬರಲು ಬಹಳ ಜನ ಒಪ್ಪಿದ್ದರೂ ಹೊರಟಾಗ ಅವರಿದ್ದುದು ಚಂಪಾ
ವತಿಯ ಮಗುವನ್ನೂ ಸೇರಿಕೊಂಡು ಆರು ಜನ. ರಾಧಾ ಅಹಲ್ಯಾ, ಕಾಮಾಕ್ಷಿಯರ
ಉತ್ಸಾಹ ಹೇಳತೀರದು. ಮೀನಾಕ್ಷಮ್ಮನ ಮಗ ಆ ಚಿತ್ರವನ್ನು ಹಿಂದೆಯೇ ನೋಡಿದ್ದ.
ಅತನಿಗೆ ಒಂದಾಣೆ ಲಂಚ ಕೊಟ್ಟು ತಾಯಿ ಒಬ್ಬಳೇ ಗುಂಪಿನ ಜತೆ ಹೊರಟಳು.
ಚಂಪಾವತಿ ಮಗಳನ್ನೆತ್ತಿಕೊಂಡು ಬಂದಳು.
ಈಗ ಸ್ವಲ್ಪ ಸಮಯದಿಂದ ಅಹಲ್ಯೆಯ ಮುಖದ ಮೇಲೊಂದು ಕಳೆ ಇದ್ದು
ದನ್ನು ಚಂಪಾ ಕಂಡಿದ್ದಳು. ಹುಡುಗಿ ಬೆಳೆಯುತ್ತಿರುವುದರಿಂದ ಹಾಗೆ ಎಂದಷ್ಟೇ
ವಿವರಣೆ ಕೊಡಲು ಚಂಪಾ ಸಿದ್ಧಳಿರಲಿಲ್ಲ, ಆ ಕಳೆಯ ಅರ್ಥವೇನೆಂಬುದು ಆಕೆಗೆ
ಗೊತ್ತಿತ್ತು. ಪ್ರಾಯಶಃ ಹೀಗಿದೆಯೇನೋ ಎಂದು ಆಕೆ ಊಹಿಸಿಕೊಂಡಳು. ಆ
ಊಹೆ , ಇತರ ಎಷ್ಟೋ ವಿಷಯಗಳಂತೆ, ಮನಸಿನೊಂದು ಮೂಲೆಯಲ್ಲಿ ವಿಶ್ರಾಂತಿ
ಪಡೆಯಿತು.
ಅವರೆಲ್ಲ ರಾಜಾ ಮಿಲ್ಲನ್ನು ಬಳಸಿಕೊಂಡು ನಡೆದೇ ಹೋದರು. ನಡೆಯುತ್ತಿ
ದ್ದಾಗ ತಮ್ಮನ್ನು ನೋಡುತ್ತಿದ್ದ ಗಂಡಸರ ನೋಟಗಳು ಅವರಿಗೆ ಹೊಸದಾಗಿರಲಿಲ್ಲ.
ಅಹಲ್ಯೆ ಚಂಚಲಳಾಗಿ ಬಾರಿ ಬಾರಿಗೂ ಅತ್ತಿತ್ತ ನೋಡುತ್ತಿದ್ದಳು. ಯಾರನ್ನೋ
ಹುಡುಕುವ ಹಾಗಿತ್ತು ಆಕೆ....

ಅದನ್ನು ಗಮನಿಸಿದ ಚಂಪಾ ಮುಗುಳ್ನಕ್ಕಳು.