ಗುಂಡಣ್ಣ ತನ್ನ ತಮ್ಮನ ಸಂಪಾದನೆಯನ್ನು ಅವಲಂಬಿಸಿ ಪರೋಪಕಾರಿಯಾಗಿ
ಮನೆಯಲ್ಲೇ ನಿಶ್ಚಿಂತೆಯಿಂದ ದಿನ ಕಳೆಯುತ್ತಿದ್ದ ಉಂಡಾಡಿ.
"ರಾಜಮ್ಮ. ಎಲ್ಲ್ಹೋದ್ನೇ ನಿನ್ಮಗಾ?"
"ಪಕ್ಕದ್ಮನೇಲಿ ಇಸ್ಪೀಟಿಗೆ ಕೂತಿದಾನೇನೊ?"
ರಾಜಮ್ಮ ಹೆಬ್ಬಾಗಿಲನ್ನು ದಾಟಿ ಹೊರ ಅಂಗಳಕ್ಕೆ ಹೋಗಿ ಕರೆದಳು.
"ಗುಂಡಾ...ಏ ಗುಂಡೂ!"
ಬೀದಿಯ ಆಚೆಗಿದ್ದ ಮನೆಗಳಿಂದಲೂ ಜನ ವಠಾರದತ್ತ ನೋಡುತ್ತಿದ್ದರು.
ಬೀದಿ ಕೂಳಾಯಿಯ ಪಕ್ಕದಲ್ಲಿದ್ದ ಮನೆಯಾಕೆ ಹಿತ್ತಲ ಗೋಡೆಗೆ ಎದೆಯಾನಿಸಿ ನಿಂತು ಕೇಳಿದಳು:
"ಏನ್ರೀ ರಾಜಮ್ಮ? ಏನು ಗಲಾಟೆ?"
"ನಾರಾಯಣಿ ಹೊರಟ್ಹೋದ್ಲು ಕಣ್ರೀ."
"ಓ!"
ದಿನವೂ ಮನೆಯಲ್ಲೆ ಇರುತ್ತಿದ್ದ ಗುಂಡಣ್ಣ ಆ ಹೊತ್ತೇ ಎಲ್ಲಿಗೋ ಎದ್ದಿರ
ಬೇಕೇ?
ಗುಂಡಣ್ಣ ಬರಲಿಲ್ಲ. ಆದರೆ ಅಲ್ಲೇ ಕೆಳಗೆ ಅಂಗಡಿ ಬೀದಿಯಲ್ಲಿದ್ದ ನಾರಾ
ಯಣಿಯು ಮಕ್ಕಳು ಓಡಿ ಬಂದುವು. ಚಿಕ್ಕ ಹುಡುಗಿಗೂ ಹುಡಗನಿಗೂ ಅರ್ಥವಾಗ ಲಿಲ್ಲ. ದೊಡ್ಡವನಿಗೆ-ಪುಟ್ಟನಿಗೆ-ಅರ್ಥವಾಯಿತು. ಆದರೆ, ಮೂವರೂ ಅತ್ತರು. ಚಿಕ್ಕವರು ಗಟ್ಟಿಯಾಗಿ, ದೊಡ್ಡವನು ಮೆಲ್ಲ ಮೆಲ್ಲನೆ, ಬಿಕ್ಕಿ ಬಿಕ್ಕಿ
ಮಿನೂನಾಕ್ಷಮ್ಮ ಸಮಿಪದಲ್ಲಿ ಇದ್ದ ಶಾಲೆಗೆ ಹೋಗಿ ತನ್ನ ಮಗನನ್ನು ಕರದು
ತಂದಳು. ಆತ ಪುಸ್ತಕಗಳನ್ನು ತಾಯಿಯ ವಶಕ್ಕೊಪ್ಪಿಸಿ, ತಂದಯನ್ನು ಕರೆತರ ಲೆಂದು ಒಂದೇ ಉಸಿರಿಗೆ ಮಲ್ಲೇಶ್ವರದ ಅಂಗಡಿ ಬೀದಿಗೆ ಓಡಿದ.
ನಾರಾಯಂಇಯ ಮನೆಯ ಎದುರು ಒಂದೇ ಗುಂಪಾಗಿದ್ದ ಹೆಂಗಸರು ದೂರ
ಸರಿದು ಬೇರೆ ಬೇರೆ ಗುಂಪುಗಳಾದರು.
ರಂಗಮ್ಮ ವಿಳಿಪಿಳಿ ಕಣ್ನು ಬಿಡುತ್ತ ಓಣಿಯ ಉದ್ದಕ್ಕೂ ಎರಡು ಸಾರ ನಡೆದರು.
ಏನನ್ನಾದರೂ ಆಳವಾಗಿ ಯೋಚಿಸುವಾಗಲೆಲ್ಲ ಹಾಗೆ ಅವರು ನಡೆಯುತ್ತದ್ದರು.
ಒಂದು ಬಡ ಸಂಸಾರದಲ್ಲಾದ ಸಾವಿನ ಫಲವಾగి ಹುಟ್ಟಿದ ಯೋಚನೆಗಳು...
ಯೋಚಿಸುತ್ತಲಿದ್ದ ರಂಗಮ್ಮ ನಾರಾಯಣಿಯ ಮನೆಯ ಮುಂದೆ ನಿಂತು ಹೇಳಿದರು;
"ಯಾಕಪಾ ಇನ್ನೂ ಅಳ್ತಾನೇ ಇದೀಯಾ? ಏಳು...ನನ್ನಂಥ ಪಾಪಿಯಲ್ಲ
ನಾರಾಯణి...ಪುಣ್ಯವಂತೆ...ಕೆಳ್ಕೊಂಡು ಬಂದಿದ್ಲು ಇಂಥ ಸಾವು ಬರ್ಲೀವಂತ.... ಏಳು.. ಮಕ್ಕಳ್ನ ನಮ್ಮನೇಲಿ ಕೂಡಿಸು,"
ಆದರೆ ಆ ನಾರಾಯಣಿಯ ಗಂಡ ದಿಗ್ಭ್ರಮೆಗೊಂಡವನ ಗೋಡೆ
ಗೊರಗಿ ಕುಳಿತೇ ಇದ್ದ,