ಪುಟ:Rangammana Vathara.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

156

ಸೇತುವೆ

ಚಿತ್ರ ಆವರೆಲ್ಲರಿಗೂ ತುಂಬಾ ಹಿಡಿಸಿತು. ಆಗಲೆ ಆರೂವರೆ ಘಂಟೆಯಾಗಿತ್ತು.
ಗಂಡ ಅಷ್ಟರಲ್ಲೇ ಬಂದಿರಬೇಕೆಂದು ಕಾಮಾಕ್ಷಿ ಚಡಪಡಿಸಿದಳು. ಆದರೂ "ಮಲ್ಲೇ
ಶ್ವರದ ಅ೦ಗಡಿ ಬೀದಿ ಮೇಲಿಂದ ಹೋಗೋಣ್ವೇನ್ರಿ?" ಎ೦ದು ಚ೦ಪಾ ಕೇಳಿದಾಗ
ಯಾರೂ ಬೇಡವೆನ್ನಲಿಲ್ಲ.
ಅಂಗಡಿ ಬೀದಿ ತಲಪಿದಾಗ, ಯಾವುದೋ ಬೋರ್ಡಿನತ್ತ ಬೊಟ್ಟುಮಾಡತ್ತ
ರಾಧಾ ಅ೦ದಳು:
"ಅದೇ ನೋಡಿ ಡಾಕ್ಟರ್ ಶಾಪು. ಆ ದಿವಸ ಅಹಲ್ಯಾ ಮನೆಗೆ ಬಂದಿರ್ಲಿಲ್ವೆ?-
ಆ.ಡಕ್ಟರು."
"ರಾಜುಮ್ಮನ ಮಗ ಕೆಲಸ ಮಾಡ್ತಿರೋ ಶಾಪಾ?" ಎಂದು ಮೀನಾಕ್ಷಮ್ಮ ಅತ್ತ.
ನೋಡುತ್ತ ಕೇಳಿದರು. ಚಂಪಾ-ಕಾಮಾಕ್ಷಿಯರೂ ನೋಡಿದರು.
"ಹೂಂ. ಅದೇ," ಎಂದಳು ರಾಧಾ.
ಚಂಪಾ ಸರಕ್ಕನೆ ದ್ರಷ್ಟಿ ತಿರುಗಿಸಿ ಅಹಲ್ಯೆಯನ್ನು ದಿಟ್ಟಿಸಿದಳು. ಲಜ್ಜೆ-ಕಾತರ
ಗಳ ಸಮ್ಮಿಶ್ರಣದ ಸೊಬಗು... ಆ ಔಷಧಾಲಯದತ್ತ ಕಣ್ಣೆತ್ತಿ ನೋಡುವುದಕ್ಕೂ
ಅಧೈರ್ಯ. ಅರ್ಥವಾಯಿತು ಚಂಪಾವತಿಗೆ.
ಅಹಲ್ಯಾ ಮೊದಲಿನಂತೆ ಮಾತನಡತೊಡಗಿದ್ದು, ಬೇರೆ ಬೀದಿಗೆ ಅವರೆಲ್ಲ
ಕಾಲಿಟ್ಟ ಮೇಲೆಯೇ.
ಆ ರಾತ್ರೆ, ಒಂದೆಡೆ ಕಾಮಾಕ್ಶಿ ರಾಜುಕುಮಾರಿಯ ಸಾಹಸಗಳನ್ನು ನಾರಾಯಣ
ನಿಗೆ ಬಣ್ಣಿಸುತ್ತಿದ್ದಂತೆಯೇ, ಇನ್ನೊಂದೆಡೆ ಚಂಪಾ ತನ್ನ ಸಂಶೋಧನೆಯನ್ನು ಗಂಡನಿಗೆ
ತಿಳಿಸಿದಳು.
ಇದು ಸಿನಿಮಾದ ಪ್ರೇಮಕಥೆಯಾಗಿರಲಿಲ್ಲ, ವಾಸ್ತವವಾಗಿತ್ತು.
"ವೆಂಕಟೇಶ ಒಳ್ಳೆಯವನೇ...ಅಲ್ಲ ಅಂತಿಯಾ?" ಎಂದು ಶಂಕರನಾರಾಯ
ಣಯ್ಯ ಹೆಂಡತಿಯನ್ನು ಕೇಳಿದ. ಚಂಪಾವತಿಗೆ, ನಲ್ಲಿ ನೀರಿಗಾಗಿ ಜಗಳವಾದಾಗ
ವೆಂಕಟೇಶ ಹುಡುಗಿಯರ ಪಕ್ಷ ವಹಿಸಿದ್ದು ನೆನಪಾಗಿ ನಗು ಬಂತು.
"ಒಳ್ಳೆಯವನೇ!" ಎನ್ನುತ್ತ, ಆ ಘಟನೆಯನ್ನು ಚಂಪಾ ಗಂಡನಿಗೆ ನೆನಪು
ಮಾಡಿಕೊಟ್ಟಳು.
"ಆತನಿಗೆ ಉದ್ಯೋಗ ಬೇರೆ ಇದೆ. ನಾವು ಪಟ್ಟ ಸುಖ ಅವರು ಅನುಭವಿಸ್ಬೇ
ಕಾದ್ದಿಲ್ಲ!"
ಶಂಕರನಾರಾಯಣಯ್ಯ ಚಂಪಾವತಿಯರ ಸಂಬಂಧವೊ ಹಾಗೆಯೇ ಆರಂಭ
ವಾಗಿತ್ತು. ಆದರೆ ಆಗ ಶಂಕರನಾರಾಯಣಯ್ಯ ನಿರುದ್ಯೋಗಿಯಾಗಿದ್ದ ಕಡುಬಡವ.
ವಿವಾಹ ಸಾಧ್ಯಾವಾಗಲು ಕೆಲವು ವರ್ಷಗಳ ಕಾಲ ಅವರು ಕಾದಿರಬೇಕಾಯಿತು. ಅದು
ಯಮಸಂಕಟ. ಆ ಸುಖವನ್ನು ವೆಂಕಟೇಶ-ಅಹಲ್ಯೆಯರು ಅನುಭವಿಸಬೇಕಾದು

ದಿರಲಿಲ್ಲಿ.