ವಿಷಯಕ್ಕೆ ಹೋಗು

ಪುಟ:Rangammana Vathara.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಂಗಮ್ಮನ ವಠಾರ
161

ಹಿರಿಮೆಯನ್ನು ತೋರಿಸುವುದಕ್ಕಾಗಿ ಆತ ಆ ಮನೆಯವರಿಗೆ ನೆರವಾಗುವಂತೆ ರಾಜಮ್ಮ
ಮಾಡಿದ್ದಳು. ಆ ಸಹಾಯದ ಪರಿಣಾಮ ಈ ರೀತಿಯಾಗಬಹುದೆಂಬ ಸಂದೇಹ
ಒಂದಿಷ್ಟಾದರೂ ಇದ್ದಿದ್ದರೆ ಆಕೆ ಅದಕ್ಕೆ ಆಸ್ಪದವೀಯುತ್ತಿರಲಿಲ್ಲ.
ರಂಗಮ್ಮ ಮಾಡುವಂತಹದೇನೂ ಉಳಿಯಲಿಲ್ಲ.ಅವರು ಸೋಲನ್ನೊಪ್ಪ
ಬೇಕಾಯಿತು.
ರಂಗಮ್ಮನ ರಾಯಭಾರದ ವಿವರ ತಿಳಿದ ಮೇಲೆ ಚಂಪಾವತಿಯೂ ನಿರಾಶ
ಳಾದಳು.
ವೆಂಕಟೇಶ ತಾಯಿಯ ಮಾತನ್ನು ಮೀರಿ ಹೋಗುವಷ್ಟರ ಧೈರ್ಯವಂತನಾಗಿರ
ಲಿಲ್ಲ. ಇಬ್ಬರು ಮಕ್ಕಳಿಗಾಗಿಯೂ ರಾಜಮ್ಮ ಕನ್ಯಾನ್ವೇಷಣೆ ನಡೆಸಿದಳು. ಮನಸ್ಸು
ಕಹಿಯಾಗಿದ್ದ ವೆಂಕಟೇಶ ಹೇಳಿದ:
"ನೀನು ಮದುವೆ ಮಾತೆತ್ತಿದರೆ ಈ ಮನೆ ಬಿಟ್ಟು ಹೋಗ್ತೀನಿ."
ಹಾಗೆ ಹೆದರಿಸಿದವನು, 'ಮದುವೆಯಾದರೆ ಅಹಲ್ಯೆಯನ್ನೇ'ಎಂದು ಹೇಳಲಿಲ್ಲ.
ಸೊರಗುತ್ತಿದ್ದ ಅಹಲ್ಯೆಯನ್ನು ಸೂಕ್ಷ್ಮವಾಗಿ ಚಂಪಾ ನಿರೀಕ್ಷಿಸಿದಳು.ವೆಂಕಟೇಶ
ನೊಡನೆ ಸಂಪರ್ಕ ಬೆಳಸಲು ಆಕೆ ಯತ್ನಿಸಿದಂತೆಯೇ ತೋರಲಿಲ್ಲ.
'ಇವರಿಬ್ಬರ ನಡುವೆ ಯಾವ ಮಾತುಕತೆಯೂ ಆಗಿಯೇ ಇಲ್ಲವೇನೋ . ತುಟಿ
ಗಳು ಹೋಗಲಿ,ಕಣ್ಣುಗಳೇ ಪರಸ್ಪರ ಮಾತನಾಡಿದಂತಿಲ್ಲ.ಅಷ್ಟರಲ್ಲೇ ಸುತ್ತಿಗೆ ಏಟು
ಹೊಡೆದು ಅಪ್ಪಚ್ಚಿ ಮಾಡಿದ್ದಾಯ್ತು'...ಎಂದು ಚಂಪಾ ಮನಸ್ಸಿನೊಳಗೇ ಅಂದು
ಕೊಂಡು ನಿಟ್ಟುಸಿರುಬಿಟ್ಟಳು.
ಆದಾದ ಒಂದುವರೆ ತಿಂಗಳಲ್ಲಿ ಅಹಲ್ಯೆಯ ಮದುವೆಯಾಯಿತು. ವಠಾರದ
ಹೊರಗೆ ಊರ ದೇವಸ್ಥಾನದಲ್ಲಿ ನಡೆಯಿತು,ಮದುವೆ. ಆಕೆ ಗಂಡನೊಡನೆ ಚನ್ನ
ಪಟ್ಣಕ್ಕೆ ಹೊರಟು ನಿಂತಳು. ವರ,ರಾಮಚಂದ್ರಯ್ಯನ ಹಳೆಯ ಸಹಪಾಠಿ.ಅಹಲ್ಯೆಯ
ತಾಯಿಯ ಕಡೆಯವರು ಬಂದು ನಿಂತು ಮದುವೆ ಮಾಡಿಸಿದರು.
ರಾಧಾ ಕೊನೆಯ ನಿಮಿಷದವರೆಗೂ ಅಹಲ್ಯೆಯ ಜೊತೆಯಲ್ಲೇ ಇದ್ದಳು.
ಅಹಲ್ಯೆಯನ್ನು ಬೀಳ್ಕೊಡುವಾಗ ತನಗೆ ಅಳು ಬಂದುದನ್ನು ಕಂಡು ಚಂಪಾ
ವತಿಗೆ ಆಶ್ಚರ್ಯವಾಯಿತು. ಆಕೆ ಕಂಪಿಸುವ ಧ್ವನಿಯಲ್ಲಿ ಅಂದಳು:
"ಹೋಗಿ ಬರ್ತೀಯಾ ಅಹಲ್ಯಾ? ಪ್ರಪಂಚದಲ್ಲಿ ಕೆಟ್ಟದ್ದೂ ಇದೆ_ ಒಳ್ಳೇದೂ
ಇದೆ.ಕೆಟ್ಟದನ್ನಷ್ಟೇ ಜ್ಞಾಪಿಸ್ಕೋಬೇಡವಮ್ಮ_ಮನಸ್ಸಿಗೆ ಆಗಿರೋ ನೋವನ್ನೆಲ್ಲಾ
ಮರೆತ್ಬಿಡು...ಬರ್ತೀಯಾ?...ನಮ್ಮನ್ನ ಮರೀಬೇಡವಮ್ಮ."
ಅಹಲ್ಯಾ ಅಳುತ್ತ ರಂಗಮ್ಮನ ವಠಾರದಿಂದ ಹೊರಟು ಹೋದಳು.
ಇದನ್ನೆಲ್ಲಾ ನೋಡುತ್ತಿದ್ದ ಜಯರಾಮುವಿಗೆ ಬೇಕು ಬೇಕೆಂದೇ ಯಾರೋ
ಕಾದ ಕಬ್ಬಿಣದಿಂದ ತನ್ನ ಹೃದಯದ ಮೇಲೆ ಬರೆ ಎಳೆದಂತಾಯಿತು. ಅವನ ಮುಖ

21