ಪುಟ:Rangammana Vathara.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

168

ಸೇತುವೆ

ವುದಿಲ್ಲ ಎಂಬುದಂತೂ ಗೊತ್ತೆ ಇತ್ತು. ಸವತಿ ಆತನಿಗಾಗಿ ಅಲ್ಲಿ ಕಾಯುತ್ತಿದ್ದಳು.
ಕಣ್ಣಿಗೆ ಕತ್ತಲ್ಲು ಕವಿದ ಹಾಗಾಯಿತು ಆಕೆಗೆ.
"ಕಂಠೀನ ನೋಡೋಲ್ವೆ?"
"ಎಷ್ಟು ಹೊತ್ತಿಗೆ ಬರ್ತಾನೆ?"
"ಆರು ಘಂಟೆಗೆ."
"ಮತ್ತೆ! ಕಡೆ ಬಸ್ಸು ಐದು ಘಂಟೆಗೇ ಹೊರಡುತ್ತ."
ವೆಂಕಟಸುಬ್ಬಮ್ಮನ ಬತ್ತಳಿಕೆ ಬರಿದಾಗಿತು. ಒಂದು ಕಾಲದಲ್ಲಿ ತನ್ನೊಬ್ಬಳ್ಳ
ಸೊತ್ತೇ ಆಗಿದ್ದ ಆ ಜೀವವನ್ನು ಕಾತರದ ದೃಷ್ಟಿಯಿಂದ ಆಕೆ ನೋಡಿದಳು.
ಆಕೆಯ ಗಂಡ ಕೊಡೆಯನ್ನು ಕೈಗೆತ್ತಿಕೊಂಡರು. ಚಪ್ಪಲಿಗಳತ್ತ ಪಾದಗಳು
ಚಲಿಸಿದುವು.
"ಏನಾದರೂ ದುಡ್ಡು ಬೇಕೇನು?"
ಈ ಪ್ರಶ್ನೆಯಿಂದ ವೆಂಕಟಸುಬ್ಬಮ್ಮನ ಸ್ವಾಭಿಮಾನ ಕೆರಳಿತು.
"ಬೇಡಿ. ಇದೆ."
"ಸರಿ ಹಾಗಾದರೆ. ಬರ್ತೀನಿ."
"ಹುಡುಗರು ಇದ್ದಿದ್ದರೆ ಜಟಕಾ ತರಿಸಬಹುದಾಗಿತ್ತು."
"ಬೇಡ, ಹಾದಿ ಗೊತ್ತಿದೆ. ಅಂಗಡಿ ಬೀದಿಗೆ ನಡೆಕೊಂಡು ಹೋಗಿ ಅಲ್ಲಿಂದ
ಬಸ್ನಲ್ಲಿ ಹೋಗ್ತೀನಿ."
ಅಷ್ಟು ಹೇಳಿ ವೆಂಕಟಸುಬ್ಬಮ್ಮನ ಯಜಮಾನರು ಬೀದಿಗಿಳಿದು ಹೊರಟೇ
ಹೋದರು."
ಕುಸಿದು ಬೀಳುವ ಹಾಗಾಯಿತೆಂದು ಆ ಹೆಂಗಸು ಕ್ಷಣಕಾಲ ಬಾಗಿಲಿಗೊರಗಿ
ನಿಂತುಕೂಂಡಳು. ಆಮೇಲೆ ಅಡುಗೆ ಮನೆಗೆ ಹೋಗಿ, ಸೀರೆಯ ಸೆರಗನ್ನು ಕಣ್ಣು
ಗಳಿಗೆ ಒತ್ತಿಕೊಂಡು ಎರಡು ನಿಮಿಷ ಮೌನವಾಗಿ ಅತ್ತಳು. ಆಗ ಮತ್ತೆ ಅನ್ನ
ಬೇಯಿಸುವ ಗೋಜಿಗೆ ವೆಂಕಟಸುಬ್ಬಮ್ಮ ಹೂಗಲ್ಲಿಲ್ಲ. ಊಟ ಮಾಡಬೇಕೆಂದೇ
ಆಕೆಗೆ ಅನಿಸಲ್ಲಿಲ್ಲ.
ವೆಂಕಟಸುಬ್ಬಮ್ಮನ ಯಜಮಾನರು ಅಷ್ಟು ಬೇಗ ಹೊರಟು ಹೋದರೆಂದು
ತಿಳಿದು ರಂಗಮ್ಮನಿಗೆ ಅಶ್ಚರ್ಯವಾಯಿತು. ಹೊರಟಾಗ ತನಗೊಂದು ಮಾತು ಹೇಳಿ
ಹೋಗಲಿಲ್ಲವೆಂದು ಮನಸ್ಸಿನೊಳಗೆ ಕುಟುಕಿತು. ತಾನು ಎನು ಹೇಳಿದರೂ ವೆಂಕಟ
ಸುಬ್ಬಮ್ಮನಿಗೆ ನೋವಾಗುವುದೆಂದು ತಿಳಿದು, ರಂಗಮ್ಮ ನಿಟ್ಟುಸಿರನ್ನಷ್ಟೆ ಬಿಟ್ಟು ಸುಮ್ಮ
ನಾದರು.
ಅದಾಗಿ ಬಹಳ ದಿನಗಳು ಕಳೆದರೂ, ಊರಿನಿಂದ ಬಂದ ವೆಂಕಟ್ಟಸುಬ್ಬಮ್ಮನ
ಯಜಮಾನರು ರಾತ್ರೆ ನಿಲ್ಲದೆ ಸಂಜೆಯೇ ಹೊರಟು ಹೋದ ವಿಷಯ ಮಾತ್ರ

ವಠಾರದ ಯಾರಿಗೂ ಮರೆತು ಹೂಗಲ್ಲಿಲ್ಲ. ಅವರೆಲ್ಲ ತಮ್ಮ ತಮ್ಮಮ್ಮೊಳಗೇ ವೆಂಕಟ