ಪುಟ:Rangammana Vathara.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

170

ಸೇತುವೆ

ಆದರೆ ಗೌಡರು ಬರಲಿಲ್ಲ.
"ಬ್ಯಾಡಿ. ಇಲ್ಲೇ ಇರ್ತೀನಿ. ನಮ್ಮ ದೇವಯ್ಯ..."
ರಂಗಮ್ಮ ಆತನ ಮಾತಿಗೆ ಕಿವಿಗೊಡದೆ, ಪೋಲೀಸ್ ರಂಗಸ್ವಾಮಿಯ ಹುಡುಗ
ನನ್ನು ಕಳುಹಿಸಿ ಚಂಪಾವತಿಯ ಮನೆಯಿ೦ದ ಕುರ್ಚಿ ತರಿಸಿದರು. ಗೌಡರು ಹೆಬ್ಬಾಗಿಲ
ಬಳಿಯಲ್ಲೆ ಕುರ್ಚಿಯ ಮೇಲೆ ಆಸೀನರಾದರು. ರಂಗಮ್ಮನೂ ಗೋದಡೆಗೊರಗಿ ಬಾಗಿಲ
ಬಳಿ ಕುಳಿತುಕೊ೦ಡರು.
ಆಗ ಹುಡುಗ ದೇವಯ್ಯನ ತಂದೆಯಲ್ಲವೆ ಈತ? ಎಷ್ಟೊಂದು ಸಾರಿ ತಮ್ಮ
ಮನಸ್ಸಿನ ನೆಮ್ಮದಿಯನ್ನು ಕದಡಿತ್ತು ಆ ವಿಧ್ಯಾರ್ಥಿಗಳ ಕೊಠಡಿ! 'ನನಗೆ ಯಾಕೆ
ಇದೆಲ್ಲ? ಹಾಳಾಗಿ ಹೋಗಲಿ' ಎಂದು ಅವರೆಗೂ ರಂಗಮ್ಮ ಸುಮ್ಮನಾಗಿದ್ದರು.
ಆದರೆ ಈಗ, ಹೆತ್ತ ತಂದೆಯೇ ಕೇಳುತ್ತಿದ್ದಾಗ, ತಮ್ಮ ಹೃದಯದಲ್ಲಿದುದನ್ನೆಲ್ಲ ಆತ
ನೆದುರು ತೋಡಿಕೊಳ್ಳಲು ರಂಗಮ್ಮನಿಗೆ ಅಪೇಕ್ಶೆಯಾಯಿತು. ಅಲ್ಲದೆ ಆ ಹುಡುಗ
ನನ್ನು ಒಳ್ಳೆಯ ಹಾದಿಗೆ ತರಲು ಸ್ವತಃ ತಾವೂ ಎಷ್ಟೊಂದು ಪ್ರಯತ್ನಪಟ್ಟೆವೆ೦ಬು
ದನ್ನು-ಸ್ವಲ್ಪ ಉಪ್ಪು ಖಾರ ಹಚಿಯೇ- ಆತನಿಗೆ ತಿಳಿಸಲು ಅವರು ಬಯಸಿದರು.
"ನಿಮ್ಮ ಹುಡುಗನ ವಿಷಯ ಏನಪ್ಪ ಹೇಳ್ಲಿ ನಾನು?" ಎಂದು ಆರ೦ಭಿಸಿ
ರ೦ಗಮ್ಮ , ಸ್ವಲ್ಪ ಹೊತ್ತು ತಡೆದು, ಹೇಳುತ್ತಿರುವುದೊ೦ದೂ ತಮಗೆ ಪ್ರಿಯವಲ್ಲ
ವೆ೦ಬ೦ತೆ ತಲೆಯಾಡಿಸಿ, ಮನಸ್ಸಿನಲ್ಲಿದ್ದುನ್ನೆಲ್ಲ ಹೇಳಿಯೇ ಬಿಟ್ಟರು.
ಅದನ್ನು ಕೇಳುತ್ತಿದ ಆ ಸದ್ಗೃಹಸ್ಥರ ಮುಖ ಸಪ್ಪಗಾಯಿತು. ಹೃದಯ
ಭಾರವಾಯಿತು; ಅವರು ದೀರ್ಘವಾಗಿ ಶ್ವಾಸವೆಳೆದರು.
ಗೌಡರು ಮಾತಿಲ್ಲದೆ ಕುಳಿತಿದ್ದುದನ್ನು ಕ೦ಡು, ತಾವು ಆಡಿದುದು ಅತಿಯಾಯಿ
ತೇನೋ ಎ೦ದು ರ೦ಗಮ್ಮನಿಗೇ ವ್ಯಾಕುಲವಾಯಿತು.
"ಆದರೆ ಇದನ್ನೆಲ್ಲ ಮನಸ್ಸಿಗೆ ಹಚ್ಕೋಬಾರ್ದು. ಚಿಕ್ಕ ಹುಡುಗ, ಇನ್ನೂ ಬುದ್ಢಿ
ತಿಳೀದು....ಒ೦ದೆರಡು ಸಾರೆ ಬಯ್ದು ಬುದ್ಢಿವಾದ ಹೇಳಿದ್ರೆ ತಿದ್ಕೋತಾನೆ."
"ಅದೇನು ತಿದ್ಕೋತಾನೋ," ಎ೦ದಷ್ಟೇ ಉತ್ತರ ಬ೦ತು.
ಒ೦ದು ಕ್ಷಣ ತಡೆದು, ಏನೋ ನಿರ್ಧಾರಕ್ಕೆ ಬ೦ದವರ೦ತೆ ಗೌಡರೆ೦ದರು:
"ಎಷ್ಟೊತ್ತೊಗೆ ಬತ್ತವೆ ಹುಡುಗ್ರು?"
"ಸಾಯ೦ಕಾಲ ಆರು ಘ೦ಟೆಗೆಲ್ಲಾ ಸಾಮಾನ್ಯವಾಗಿ ಬ೦ದ್ಬಿಡ್ತಾರೆ. ರಾಜ
ಶೇಖರನೇನೋ ತಪ್ಪದೆ ಬರ್ತಾನೆ. ನಿಮ್ಹುಡುಗ__"
ಗೌಡರು ಕುಳಿತಲ್ಲಿ೦ದ ಎದ್ದರು:
"ಆಗಲ್ರಮ್ಮ. ಸಿಟ್ಟೀ ಕಡೆ ಒಸಿ ಕೆಲಸ ಇದೆ. ಮುಗಿಸ್ಕೊ೦ಡು ಬತ್ತೀನಿ.
"ಅಷ್ಟು ಎತ್ತರವಾಗಿದ್ದ ಗೌಡರು ರ೦ಗಮ್ಮನ ಮಾತು ಕೇಳಿ ಅಷ್ಟರಲ್ಲೆ ಸ್ವಲ್ಪ
ಕುಗ್ಗಿ ಹೋಗಿದ್ದರು. ಅವರು ಬೀದಿಗಿಳಿದು ಮರೆಯಾದುದನ್ನು ನೋಡುತ್ತಲಿದ್ದ

ರ೦ಗಮ್ಮನಿಗೆ ಕಸಿವಿಸಿ ಎನಿಸಿತು.