ಪುಟ:Rangammana Vathara.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

171

"ನಾನು ಇಷ್ಟೆಲ್ಲಾ ಹೇಳಾಬಾರದಿತ್ತೇನೋ. ಆ ಎದುರುಮನೆ ಹುಡುಗಿ
ವಿಷಯಾನಾದರೂ ಬಿಡಬಹುದಾಗಿತ್ತು. ಓದ್ಸೋದನ್ನೇ ನಿಲ್ಲಿಸಿ ಬಿಡ್ತಾನೋ ಏನೋ,"
ಎಂದು ಅವರು ಮನಸ್ಸಿನಲ್ಲೆ ಪರಿತಪಿಸಿದರು.
ವೆಂಕಟಸುಬ್ಬಮ್ಮನ ಯಜಮಾನರು ಬಂದಾಗ ತೋರಿದಷ್ಟು ಕುತೂಹಲವನ್ನು
ದೇವಯ್ಯನ ತಂದೆ ಬಂದಾಗ ವಠಾರದ ಹೆಂಗಸರು ತೋರಲಿಲ್ಲ. ಆದರೂ ರಂಗಮ್ಮನ
ಮಾತಿಗೆ ಕಿವಿಗೊಡುತ್ತಾ ಕುಳಿತಿದ್ದ ವಯಸ್ಸಾಗಿದ್ದ ಗೌಡರನ್ನು-ಮಹಡಿಯ ಮೇಲಿನ
ಹುಡುಗರಲ್ಲೊಬ್ಬನ ತಂದೆಯನ್ನು-ನೋಡುವ ಕೆಲಸವನ್ನಷ್ಟು ಮಾಡಿದರು.
ಅಷ್ಟೇ ಆಗಿದ್ದರೆ, ಆ ಸಂದರ್ಶನವನ್ನು ಅವರು ಮರೆತು ಬಿಡುತ್ತಿದ್ದರು. ಆದರೆ
ದೇವಯ್ಯನ ತಂದೆ ಅದಕ್ಕೆ ಅವಕಾಶ ಕೊಡಲಿಲ್ಲ.
ವೆಂಕಟಸುಬ್ಬಮ್ಮನ ಯಜಮಾನರು ತಮ್ಮ, ಹುಡುಗರನ್ನು ಸರಿಯಾಗಿ ಮಾತ
ನಾಡಿಸದೆಯೇ ಹೊರಟು ಹೋದರು. ಆದರೆ ದೇವಯ್ಯನ ತಂದೆ ತಮ್ಮ ಹುಡುಗ
ನನ್ನು ಸರಿಯಾಗಿಯೆ ಮಾತನಾಡಿಸಲೆಂದು ಸಂಜೆ ವಾಪಸು ಬಂದರು.
ಆಗ ಕೊಠಡಿಯಲ್ಲಿದ್ದವರು ರಾಜಶೇಖರ ಮತ್ತು ಚಿಕ್ಕ ಹುಡುಗ ಮಾತ್ರ.
ದೇವಯ್ಯನ ತಂದೆಯ ಆಗಮನ ವಾರ್ತೆಯನ್ನು ರಂಗಮ್ಮನಿಂದ ತಿಳಿದ ರಾಜಶೇಖರ
ನಿಗೆ ಗಲಿಬಿಲಿ ಎನಿಸಿತ್ತು. ನವರಾತ್ರಿಯ ಹಬಕ್ಕೆ ದೇವಯ್ಯನೂ ಚಿಕ್ಕ ಹುಡುಗನೂ
ಊರಿಗೆ ಹೋಗಿದ್ದರು. ಊರಿನಿಂದ ಹಿಂತಿರುಗಿದ ಮೇಲೆ ದೇವಯ್ಯನ ಹಾರಾಟ
ಸ್ವಲ್ಪ ಕಡಿಮೆಯಾಗಿತ್ತು. ಕಾಲೇಜ್ ಹಾಸ್ಟೆಲಿಗೆ ಸೇರುವ ಪ್ರಸ್ತಾಪವನ್ನು ಮತ್ತೆ
ಮಾಡಲಿಲ್ಲ. ಆದರೆ ಕೆಟ್ಟ ಅಭ್ಯಾಸಗಳನ್ನು ಆತ ಬಿಟ್ಟುಕೊಡಲೂ ಇಲ್ಲ.
ದೇವಯ್ಯ ಸೇದಿ ಎಸೆದಿದ್ದ ಸಿಗರೇಟು ಚೂರುಗಳನ್ನು ರಾಜಶೇಖರ ಹೆಕ್ಕಿ
ತೆಗೆದು ಕೊಠಡಿಯನ್ನು ಶುದ್ಧಗೊಳಿಸಿದ್ದ.
ಕೊಠಡಿಗೆ ಬಂದ ಗೌಡರು ಮೌನವಾಗಿದ್ದರು. ಆ ಮೌನವನ್ನು ಕಂಡು ರಾಜ
ಶೇಖರನ ಭಯ ಹೆಚ್ಚಿತು.
"ಆಯ್ಯೊ, ಇವರು ಮಾತನ್ನಾದರೂ ಆಡಬಾರದೆ?"
-ಎಂದು ರಾಜಶೇಖರ ಮನಸಿನೊಳಗೇ ಸಂಕಟಪಟ್ಟ.
ಗೌಡರು ಕೊಠಡಿಯಲ್ಲಿದ್ದ ಕನ್ನಡ ಪಠ್ಯ ಪುಸ್ತಕವನ್ನೋದುತ್ತ ಮಗನ ಚಾಪೆಯ
ಮೇಲೆ ಕುಳಿತರು. ಮಗನ ಆಗಮನದ ನಿರೀಕ್ಷೆಯಲ್ಲಿ ಗೌಡರಿದ್ದುದನ್ನು ತಿಳಿದ
ರಂಗಮ್ಮ ಕತ್ತಲಾದೊಡನೆಯೇ, ಎಂದಿಗಿಂತ ಸ್ವಲ್ಪ ಬೇಗನೆ, ದೀಪ ಹಾಕಿದರು.
ಏಳೂವರೆ ಹೊತ್ತಿಗೆ ದೇವಯ್ಯ ಕೊಠಡಿಗೆ ಬಂದ. ತಂದೆಯನ್ನು ಕಂಡೊಡನೆ
ದೇಹದ ಕಸುವೆಲ್ಲ ಹೊರಟು ಹೋದಂತಾಯಿತು ಅವನಿಗೆ.
"ಎಷ್ಟು ಹೊತ್ತಿಗೋ ಮನೇಗ್ಬರೋದು?" ಎಂದು ಗುಡುಗುತ್ತ ಗೌಡರು
ಎದ್ದು ನಿಂತು ಮಗನ ಸಮೀಪಕ್ಕೆ ಬಂದರು.

ತಪ್ಪಿಸಿಕೊಳ್ಳಲು ಹಾದಿಯೇ ಇಲ್ಲದ ಅಪರಾಧಿಯ ಹಾಗಾಯಿತು ದೇವಯ್ಯನ