ಪುಟ:Rangammana Vathara.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

172

ಸೇತುವೆ

ಸ್ಥಿತಿ. ತಾವು ಬರುವ ವಿಷಯವನ್ನು ತಂದೆ ಮೊದಲೇ ಬರೆದು ತಿಳಿಸಿದೆ ಈ ಸ್ಥಿತಿ
ಯೊದಗಿತಲ್ಲಾ ಎಂದು ಆತ ಹಲುಬಿದ. ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ
ತಿಳಿಯುವುದರೊಳಗೇ ಆತನಿಗೇ ಏಟುಗಳು ಬಿದ್ದುವು. ತಂದೆ ಮಗನಿಗೆ ಅಂಗೈ ಬೀಸಿ
ಹೊಡೆದರು; ಮುಷ್ಟಿಯಿಂದ ಗುದ್ದಿದರು; ತನ್ನ ಕಾಲು ಹಿಡಿಯಲು ಬಂದವರನ್ನು
ಪಾದದಿಂದ ತುಳಿದರು. ತಮ್ಮ ಕುಲಕ್ಕೆ ಮನೆತನಕ್ಕೆ ಕಳಂಕಪ್ರಾಯನಾದ ಆ ಮಗನನ್ನು
ಮನಸ್ವೀ ಬಯ್ದರು. ದೇವಯ್ಯ ಯಾವ ರಕ್ಷಣೆಯೂ ದೊರೆಯದೆ "ಅಮ್ಮಾ-ಅಮ್ಮಾ-
ಸತ್ತೇ ಸತ್ತೇ," ಎಂದು ಕೂಗಾಡಿದ.
ರಾಜಶೇಖರನೂ ಚಿಕ್ಕ ಹುಡುಗನೂ ಗಡಗಡನೆ ನಡುಗುತ್ತ ಮೂಲೆ ಸೇರಿದರು.
ಜಯರಾಮು ತನ್ನ ತಾಯಿಯೊಡನೆ ಆ ಕೊಠೊಡಿಯ ಬಾಗಿಲಿನ ಎದುರು ಬಂದು
ನಿಂತ. ಕೆಳಗಿನಿಂದ ಚಿಕ್ಕ ಪುಟ್ಟ ಹುಡುಗರು ದೇವಯ್ಯನ ಚೀರಾಟದ ಸದ್ದು ಕೇಳಿ
ಮೇಲಕ್ಕೆ ಓಡಿ ಬಂದರು. ಗೌಡರು ಶರೀರದ ಆದ್ಯಂತ ಕಂಪಿಸುತ್ತಿದ್ದರು. ನೆಲದ
ಮೇಲೆ ಮೂಲೆಯಲ್ಲಿ ಮುದುರಿ ಕುಳಿತು ತನ್ನ ಮಗ ಎಳೆಯ ಮಗುವಿನಂತೆ ಅಳತೊಡ
ಗಿದುದನ್ನು ಕಂಡಾಗ, ಗೌಡರ ರೋಷ ಮೆಲ್ಲೆನೆ ಕರಗಿತು.
ಹೊಡೆತ ನಿಂತಿತೆಂದು ಜಯರಾಮು ತನ್ನ ತಾಯಿಯೊಡನೆ ಹಿಂತಿರುಗಿದ. ಇಷ್ಟು
ಬೇಗನೆ ತಮಾಷೆ ಮುಗಿಯಿತಲ್ಲಾ ಎಂದು ನೆರೆದಿದ್ದ ಹುಡುಗರಿಗೆ ನಿರಾಶೆಯಾಗಿ,
ದೇವಯ್ಯನಿಗೆ ಏಟು ಬಿದ್ದ ಸುದ್ದಿಯನ್ನು ಕೆಳಗೆ ವಠಾರದಲ್ಲಿ ಪ್ರಸಾರ ಮಾಡಲು
ಅವರು ಇಳಿದು ಹೋದರು.
ಗೌಡರು ತಮ್ಮ ಹೃದಯದ ಅಳಲನ್ನು ಯಾರೂ ತಿಳಿದುಕೊಳ್ಳಲಾರರೆಂದು
ಮನಸಿನೊಳಗೇ ಕೊರಗುತ್ತ, ಅಸಹನೀಯವಾಗುತ್ತಾ ಬಂದಿದ್ದ ಮೌನವನ್ನು ಮುರಿದು,
ಹೇಳಿದರು:
"ಇವತ್ನಿಂದ್ಲೇ ನೀನು ಸುಧಾರಿಸಿದ್ರೆ ಬದುಕ್ದೆ. ಇಲ್ಲೆ ಓದ್ರೆ ನನ್ಮ್ಗಗ ಸತ್ತಾಂತ
ತಿಳ್ಕಂತೀನಿ."
ರಾಜಶೇಖರನ ಕಡೆಗೆ ತಿರುಗಿ ಅವರೆಂದರು:
"ಏನಪ್ಪಾ, ದೇವೂನ ಒಂದಿಷ್ಟು ನೋಡ್ಕೊ ಅಂದ್ರೆ ಇಂಗ್ಮಾಡೋದಾ ನೀನು?"
ರಾಜಶೇಖರ ಉತ್ತರ ಕೊಡಲಾರದೆ ಹೋದ.
ಗೌಡರು ರುಮಾಲನ್ನು ತಲೆಗೇರಿಸಿ ಕೆಳಕ್ಕಿಳಿದು ರಂಗಮ್ಮನನ್ನು ಕರೆದರು.
"ನಾನು ಓಗ್ಬರ್ತಿನಿ ತಾಯೀ"
"ಆಗಲಪ್ಪಾ. ಈವಾಗ್ಲೇ ಹೊರಡ್ತೀರಾ?"
"ರಾತ್ರೆ ಗಾಡಿಗೆ ಓಯ್ತೀನಿ. ನಮ್ಮ ಹುಡುಗನ ಮೇಲೆ ಒಂದಿಷ್ಟು ನಿಗಾ
ಮಡಗಿರಿ ಅವ್ವಾ...ದೊಡ್ಡೋನು ಊರಲ್ಲೇ ಹೊಲ ನೋಡ್ಕೊಂತ ಅವ್ನೆ. ಇವ್ನು
ಎರಡ್ನೇಯೋನು. ಒಂದಿಷ್ಟು ಓದಿ ಅಭಿವೃದ್ಧಿಗೆ ಬರ್ಲೀಂತ ಆಸೆ."

"ಆಗಲಪ್ಪಾ ಆಗಲಿ. ನಾನು ಹೇಳ್ತಿರ್ತೀನಿ. ನಮ್ಮ ವಠಾರದಲ್ಲಿ ಈವರೆಗೆ