ಪುಟ:Rangammana Vathara.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

174

ಸೇತುವೆ

ಹುಡುಗ ಮೆಟ್ಟಲೇರಿ ಹೋದ ಬಳಿಕ ರಂಗಮ್ಮ ನೊಂದುಕೊಂಡು ಧ್ವನಿಯಲ್ಲಿ
ಹೇಳಿದರು:
"ನನ್ಮೇಲೆ ಕೋಪ ಆತನಿಗೆ_ಗೌಡ ಬಂದಾಗ ದೂರು ಹೇಳ್ದೆ ಅಂತ. ನನಗೇನು
ದ್ವೇಷವೆ? ಆ ಹುಡುಗನಿಗೆ ಒಳ್ಳೇದಾಗ್ಲೀಂತ್ಲೇ ಅಲ್ವೆ ನಾನು ಹೇಳಿದ್ದು?"
ಪದ್ಮಾವತಿ, ತನ್ನ ಮೈಗೆ ಅಂಟಿಕೊಂಡಿದ್ದ ಮಗುವನ್ನು ಎರಡೂ ಕೈಗಳಿಂದ
ಮತ್ತಷ್ಟು ಬಿಗಿಯಾಗಿ ತನ್ನೆಡೆಗೆ ಎಳೆದುಕೊಳ್ಳುತ್ತ, ಮುಗುಳ್ನಕ್ಕಳು.

೧೮
ಚಳಿಗಾಲ ಬಂದಾಗ ರಂಗಮ್ಮ ಮೈತುಂಬ ಕಂಬಳಿ ಹೊದೆದುಕೊಳ್ಳುತ್ತಿದ್ದರು.
ನರನಾಡಿಗಳಲ್ಲಿ ರಕ್ತ ಸಂಚಾರ ಕ್ಷೀಣವಾಗಿ ಅವರಿಗೆ ತುಂಬಾ ಸಂಕಟವಾಗುತ್ತಿತ್ತು.
ಈ ಸಲ ಅವರೆಂದರು:
"ಅಸಾಧ್ಯ ಚಳಿ ಈ ವರ್ಷ! ಅಸಾಧ್ಯ ಚಳಿ!"
ಆದರೆ ಇದೇ ಮಾತನ್ನು ಅವರು ಪ್ರತಿ ವರ್ಷವೂ ಹೇಳುತ್ತಿದ್ದರು. ಪ್ರತಿ
ಯೊಂದು ಸಲವೂ 'ಈ ವರ್ಷದ ಚಳಿ ಅಸಾಧ್ಯ' ಎಂದೇ ಅವರಿಗೆ ತೋರುತ್ತಿತ್ತು.
ಹೆಚ್ಚು ಕಡಮೆ ಪ್ರತಿ ಮುಂಜಾನೆಯೂ ಇಬ್ಬನಿ ಬೀಳುತ್ತಿತ್ತು. ಬೇಗನೆ ಎಚ್ಚರ
ವಾದರೂ ರಂಗಮ್ಮ ಮನೆಯಿಂದ ಹೊರಬರುತ್ತಿರಲಿಲ್ಲ. ಸೂರ್ಯನ ಬೆಳಕು ಓಣಿ
ಯೊಳಕ್ಕೆ ಬರುವವರೆಗೂ ಅವರು ಗಂಟಲಿನಿಂದ ಒಂದೇ ಸಮನೆ ಏನಾದರೂ ಸದ್ದು
ಹೊರಡಿಸುತ್ತ ಕುಳಿತುಬಿಡುತ್ತಿದ್ದರು.
ಪೋಲೀಸ್ ರಂಗಸ್ವಾಮಿಯ ಹುಡುಗ, ಮೀನಾಕ್ಷಮ್ಮನ ಮಗ, ಇಲ್ಲವೆ ಉಪಾ
ಧ್ಯಾಯರ ಮಕ್ಕಳು ಬಂದು ಕೂಗಿ ಕರೆಯುತ್ತಿದ್ದರು:
"ಅಜ್ಜೀ....ಎದ್ದಿಲ್ವೆ ಅಜ್ಜೀ?....ಹಾಲು ಬಂತು ಅಜ್ಜೀ..."
ಅಂತಹ ದಿನಗಳಲ್ಲಿ ರಂಗಮ್ಮನ ಪರವಾಗಿ ಕಮಲಮ್ಮನೇ ಹಾಲು ಹಾಕಿಸಿ
ಕೊಳ್ಳುತ್ತಿದ್ದಳು.
ಅದನ್ನು ಆಮೇಲೆ ಇಸಕೊಳ್ಳುತ್ತ ರಂಗಮ್ಮನೆನ್ನುತ್ತಿದ್ದರು:
"ಏನು ಹಾಲು ಕೊಡುತ್ತೇಂತ ಈ ಚಳಿಗೆ ಹಿಂಡ್ತಾರೋ...."
ಡಿಸೆಂಬರ್ನಲ್ಲೊಂದು ರಾತ್ರೆ, ಮುಂಜಾನೆ, ಚಳಿ ವಿಪರೀತವಾಗಿತ್ತು. 'ಆಹ್'
ಎಂದು ಉಸಿರುಬಿಟ್ಟರೆ ಸಾಕು, ಬಾಯಿಯಿಂದ ಉಗಿ ಹೊರಡುತ್ತಿತ್ತು.
ಆ ಬೆಳಗ್ಗೆ ಎಷ್ಟು ಹೊತ್ತಾದರೂ ರಂಗಮ್ಮ ಏಳಲೇ ಇಲ್ಲ.

ಎಷ್ಟು ಸಾರೆ ಬಾಗಿಲು ತಟ್ಟಿದರೂ ಉತ್ತರ ಬರಲಿಲ್ಲ. ಕಮಲಮ್ಮ ಗಾಬರಿ