ಪುಟ:Rangammana Vathara.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

175

ಗೊಂಡು ಮೀನಾಕ್ಷಮ್ಮನ ಮನೆಗೆ ಓಡಿದಳು. ಗಂಡಸರಲ್ಲಿ ಹೆಚ್ಚಿನವರಲ್ಲ ಕೆಲಸಕ್ಕೆ
ಹೊರಟು ಹೋಗಿದ್ದು, ಉಳಿದಿದ್ದವರು ಸುಬ್ಬುಕೃಷ್ಣಯ್ಯ ಮತ್ತು ಶಂಕರನಾರಾ
ಯಣಯ್ಯ ಮಾತ್ರ . ಇಬ್ಬರೂ ಧಾವಿಸಿ ಒಂದು ಬಾಗಿಲು ತಟ್ಟಿದರು. ಪ್ರಯೋಜನ
ವಾಗಲಿಲ್ಲ.
"ಇನ್ನೇನಪ್ಪಾ ಮಾಡೋದು?" ಎಂದು ಸುಬ್ಬುಕೃಷ್ಣಯ್ಯ .
ಶಂಕರನಾರಾಯಣಯ್ಯ ತನ್ನ ಕುರ್ಚಿ ತಂದಿಟ್ಟು ಅದರ ಮೇಲೆ ನಿಂತು ಎರಡು
ಹಂಚುಗಳನ್ನು ಎತ್ತಿಟ್ಟ. ಸೂರ್ಯನ ಬೆಳಕು ಕಟ್ಟೆಯೊಡೆದ ಕೆರೆಯ ಹಾಗೆ ರಂಗಮ್ಮನ
ಮನೆಯೊಳಕ್ಕೆ ನುಗ್ಗಿತು.
ಆದರೆ ಅಷ್ಟು ಹೊತ್ತಿಗಾಗಲೆ ಎದ್ದುಬಿಟ್ಟಿದ್ದರು ರಂಗಮ್ಮ. ಬಾಗಿಲ ವರೆಗೆ
ತೆವಳಿ ಬಂದು ಅಗಣಿ ತೆರೆದರು. ಹೊರಗಿದ್ದವರಿಗೆ ಕಂಡುಬಂದುದು, ಒಂದೇ ರಾತ್ರೆ
ಯಲ್ಲಿ ಬಹಳ ಕುಗ್ಗಿ ಹೊಗಿದ್ದ ರಂಗಮ್ಮ. ಅವರ ಕಣ್ಣುಗಳು ಹನಿಗೂಡಿದ್ದುವು.
ನೆರೆದಿದ್ದ ಎಲ್ಲರನ್ನೂ ಉದ್ದೇಶಿಸಿ ಮಾತನಾಡುವ ಶಕ್ತಿ ತಮಗಿಲ್ಲವೆನ್ನುವಂತೆ ಸುಬ್ಬು
ಕೃಷ್ಣಯ್ಯನನ್ನೇ ನೋಡುತ್ತ ಅವರೆಂದರು:
"ಕಾಲು ಕಣೋ. ಎರಡೂ ಕಾಲೂ ಹಿಡಕೊಂಬಿಡ್ತು. ಮಡಚೋಕೇ ಆಗ್ಲಿಲ್ಲ.
ವಯಸ್ಸಾಯ್ತು. ಇನ್ನು ತುಂಬ ಕಷ್ಟಾನಪ್ಪಾ".
"ಮಗನಿಗೆ ಕಾಗದ ಬರೀಬೇಕೇನು?" ಎಂದು ಕೇಳಿದ ಸುಬ್ಬುಕೃಷ್ಣಯ್ಯ,
ಬರಯಬೇಕೆಂದಾದರೆ ಬರೆದುಕೊಟ್ಟೇ ಕೆಲಸಕ್ಕೆ ಹೊಗೋಣವೆಂದು.
ಆದರೆ ರಂಗಮ್ಮ ಬೇಡವೆಂದರು:
"ಛೆ! ಛೆ! ನನಗೇನಾಗಿದೆ?" ಸ್ವಲ್ಪ ಚಳಿಯಾಯ್ತು ಅಷ್ಟೆ ...."
ಅವರ ದೃಷ್ಟಿ ಛಾವಣಿಯತ್ತ ಹೋಯಿತು. ಶಂಕರನಾರಾಯಣಯ್ಯ ಮೌನ
ವಾಗಿ ಮತ್ತೊಮ್ಮೆ ಕುರ್ಚಿಯನ್ನೇರಿ ಹಂಚುಗಳನ್ನು ಮೊದಲಿದ್ದಲ್ಲೇ ಇರಿಸಿದ.
ಆ ದಿನ ರಂಗಮ್ಮ ಮನೆಗೆಲಸಗಳನ್ನು ನಿಧಾನವಾಗಿ ಮಾಡಿದರು.
"ಒಂದು ದಿನ ಹೀಗೆ ಚಳೀಲಿ ಮೈ ಹೆಪ್ಪುಗಟ್ಟಿ ಸತ್ತೇ ಹೋಗ್ತೀನಿ ನಾನು "
ಎಂದು, ಬಿಸಿಲು ಚೆನ್ನಾಗಿ ಬಂದ ಮೇಲೆ, ರಂಗಮ್ಮ ಹೇಳಿದರು.
........ ದಿನಗಳುರುಳಿದವು. ಚಳಿಗಾಲ ಹಿಮ್ಮೆಟ್ಟಿತು. ಹೊಸ ವರ್ಷದ ವಿವಿಧ
ಕ್ಯಾಲೆಂಡರುಗಳು ವಠಾರದ ಮನೆಗೋಡೆಗಳನ್ನು ಅಲಂಕರಿಸಿದುವು.
ಇಂಟರ್ ಪಾಸ್ ಮಾಡಿದ ಜಯರಾಮು, ಎರಡು ತಿಂಗಳ ಕಾಲ ಕೆಲಸಕ್ಕಾಗಿ
ಅಲೆದ. ಪ್ರತಿ ಸಲವೂ ಯಾರನ್ನಾದರೂ ಭೇಟಿ ಮಾಡಿದಾಗಲೆಲ್ಲ, ಈ ಸಲ ಸಿಕ್ಕಿಯೇ
ಸಿಗುತ್ತದೆ ಎಂದು ತೋರುತ್ತಿತ್ತು. ಅದು ಅಶಾವಾದದ ಬಳ್ಳಿ ಬಿಟ್ಟಿದ್ದ ಒಂಟಿ ಹೂ.
ಭ್ರಮೆ ಎಂದು ಅದರ ಹೆಸರು. ಉದ್ಯೋಗ ಜಯರಾಮುವಿನ ಪಾಲಿಗೆ ಮಿಸುನಿ
ಜಿಂಕೆಯಾಯಿತು. ರಾತ್ರೆ ಕನಸಿನಲ್ಲೂ ಮರಕೊಳಿಸುವ ಹಾಗೆ ಹಗಲು ಯಾರು

ಯಾರೋ ಸೀಸದ ಮಾತುಗಳನ್ನು ಅವನ ಕಿವಿಯೊಳಕ್ಕೆ ಎರಕು ಹುಯ್ಯುತ್ತಿದ್ದರು.