ಪುಟ:Rangammana Vathara.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

177

"ಅದೆಲ್ಲ ಯೋಚಿಸ್ವೇಕಾದ್ದಿಲ್ಲ ಚಂದ್ರಶೇಖರಯ್ಯ. ನಮ್ಮ ತಂದೇನ ಈ ವಿಷಯ
ದಲ್ಲಿ ಕೇಳೋ ಅಗತ್ಯವೇ ಇಲ್ಲ."
"ಹಾಗಾದ್ರೆ ನಾಳೇನೆ ಒಂದು ಅರ್ಜಿ ಬರಕೊಡಿ."
"ಹೂಂ. ಬರಕೊಡ್ತೀನಿ."
ಆಮೇಲೆ ಜಂದ್ರಶೇಖರಯ್ಯ ಮೌನವಾದ. ತಾನು ಕೃತಜ್ಞತೆಯನ್ನರ್ಪಿಸಿಲ್ಲ
ಜಯರಾಮು ಕಸಿವಿಸಿಗೊಂಡ. ಆದರೆ ಏನನ್ನು ಹೇಳಬೇಕೇಂದು ತೋಚಲಿಲ್ಲ.
ಏನನ್ನೋ ಹೇಳಲು ಹೊರಟಾಗ ನಾಲಿಗೆ ತಡವರಿಸಿತು.
"ನೀವು ಮಾಡ್ತಿರೋ ಉಪಕಾರ ಎಂಥದೂಂತ ಖಂಡಿತ ಊಹಿಸಲಾರಿರಿ ಚಂದ್ರ
ಶೇಖರಯ್ಯ."
ಆತ ನಕ್ಕುಬಿಟ್ಟ.
"ಇನ್ನೂ ಕೆಲಸವೇ ಸಿಕ್ಕಿಲ್ವಲ್ಲ ಜಯರಾಮು. ಆಮೇಲೆ ಥ್ಯಾಂಕ್ಸ್ ಕೊಡಿ."
ಜಯರಾಮು ತನ್ನ ಮನೆಯೊಳಕ್ಕೆ ಹೋಗಿ, ತಾಯಿಗೂ ತಂಗಿಗೂ ತಾನು
ಬರೆಯಲಿರುವ ಹೊಸ ಅರ್ಜಿಯ ವಿಷಯ ತಿಳಿಸಿದ. ಆ ತಾಯಿಯ ಮುಖದ ಮೇಲೆ
ಆಸೆಯ ಮುಗುಳುನಗೆ ಮೂಡಿತು. ಯಾವ ಬಗೆಯ ಕೆಲಸ? ಕಚೇರಿ ಎಲ್ಲಿರೋದು?
ಎಂದೆಲ್ಲ ವಿವರವಾಗಿ ಕೇಳಿ ರಾಧಾ ಅವನನ್ನು ಬೇಸರಪಡಿಸಿದಳು.
ಬೇರೆಯೂ ಒಂದು ಯೋಚನೆ ಹೊಳೆದು ರಾಧಾ ಕೇಳಿದಳು:
"ವಿಮಾ ಸಂಸ್ಥೆಯ ಕತೆ ಯಾರೂ ಬರೆದೇ ಇಲ್ಲ, ಅಲ್ವೆ ಅಣ್ಣ? ನೀನು ಅದನ್ನು
ಬರೆದರೆ ಚೆನ್ನಾಗಿರುತ್ತೆ."
.....ಬಟ್ಟೆ ಬದಲಾಯಿಸುತ್ತಿದ್ದ ಚಂದ್ರಶೇಖರಯ್ಯ ತಾಯಿ ಮಕ್ಕಳ ಸಂವಾದ
ಕೇಳಿಸುವುದೇನೋ ಎಂದು ಕಿವಿಗೊಟ್ಟ. ತನ್ನ ವಿಷಯವಾಗಿ ಅವರೇನು ಮಾತನಾಡು
ತ್ತಿದ್ದರೆಂದು ತಿಳಿಯುವ ಆತುರ ಆತನಿಗೆ. ಆದರೆ ಏನೂ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ.
ರಾಧೆಯ ಕೀಟಲೆ ನಗೆ, ಜಯರಾಮುವಿನ ಹುಸಿ ಮುನಿಸಿನ ಉತ್ತರ ....
"ನೀವು ಮಾಡ್ತಿರೋ ಉಪಕಾರ ಎಂಥದೂಂತ ಖಂಡಿತ ಊಹಿಸ್ಲಾರಿರಿ ಚಂದ್ರ
ಶೇಖರಯ್ಯ..."
ಹುಚ್ಚು ಹುಡುಗ. ನಾಳೆಯ ದಿನ ಆ ಕೆಲಸ ದೊರೆತು, ರಾಧೆಯೂ ರಾಧೆಯ
ತಾಯ್ತಂದೆಯರೂ ತನ್ನ ಬಗೆಗೆ ಒಳ್ಳೆ ಮಾತನ್ನಾಡುವಾಗ ತನಗೆ ಆಗುವ ಸಂತೋಷ
ಎಷ್ಟೆಂಬುದನ್ನು ಊಹಿಸುವುದು ಅವನಿಂದ ಸಾಧ್ಯವೆ?
ಚಂದ್ರಶೇಖರಯ್ಯ ಮದುವೆಯಾಗಲು ತೀರ್ಮಾನಿಸಿದ್ದ. ಆ ತೀರ್ಮಾನಕ್ಕೆ
ಇದೇ ಕಾರಣವೆಂದು ಯಾವುದಾದರೂ ಒಂದನ್ನಷ್ಟೇ ಎತ್ತಿ ತೋರಿಸುವುದು ಸಾಧ್ಯವಿರ
ಲಿಲ್ಲ. ಊರಿನಲ್ಲಿ ಹಿರಿಯರು ಆಡುತ್ತಿದ್ದ ನಿಂದೆಯ ನುಡಿಗಳನ್ನು ಕೇಳಿ ಕೇಳಿ ಆತನಿಗೆ
ಸಾಕಾಗಿತ್ತು.ಆದರೆ ಅದಕ್ಕಿಂತಲೂ ಮುಖ್ಯವಾಗಿ ಆತನ ಯೌವನ ಕೇಳುತ್ತಿತ್ತು:

23