ಪುಟ:Rangammana Vathara.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

179

"ನಮ್ಮ ಜಯರಾಮುಗೆ ಕೆಲಸ ಸಿಗ್ತು."
ನಮ್ಮ ರಾಧಾಗೆ ಗ೦ಡು ಗೊತ್ತಾಯ್ತು ಎನ್ನುವಾಗ ಇರಬಹುದಾದ ಸ೦ತೋ
ಷದ ಧ್ವನಿಯಿತ್ತು ಆ ಮಾತಿನಲ್ಲಿ.
ಅದರ ಜತೆಯಲ್ಲಿ ಇನ್ನೊ೦ದು ವಾಕ್ಯವನ್ನು ಆಕೆ ಹೇಳಿದಳು:
"ಚ೦ದ್ರಶೇಖರಯ್ಯ ಕೊಡಿಸಿದ್ರು. ಅವರ ಕಚೇರೀಲೇ ಕೆಲಸ.
ರಂಗಮ್ಮ ಆಕೆಗೆ ಅಂದರು:
"ಹಾಗೆಯೇ ಮಗಳ ಮದುವೇನೂ ಒಂದು ಮಾಡಿಸ್ಬಿಡಮ್ಮ."
ಬೇರೆ ದಿನವಾಗಿದ್ದರೆ, ಆ ಮಾತು ಕೇಳಿದೊಡನೆಯೇ ಆಕೆಯ ಮುಖ ಬಾಡು
ತ್ತಿತ್ತು. ಈ ದಿನ ಹಾಗಾಗಲಿಲ್ಲ. ಧೈರ್ಯದಿಂದಲೆ ಆಕೆಯೆಂದಳು:
"ಆಗಲಿ ರಂಗಮ್ನೋರೇ. ನಿಮ್ಮ ಆಶೀರ್ವಾದವಿದ್ದರೆ ಅದೂ ಒಂದು ದಿನ
ಆದೀತು, ನೋಡೋಣ."
ಅಣ್ಣನಿಗೆ ಕೆಲಸ ಸಿಕ್ಕಿತೆಂದು ರಾಧಾ ಕುಣಿದಾಡಿಳು.
ಚಂದ್ರಶೇಖರಯ್ಯನನ್ನು ರಾತ್ರೆ ಊಟಕ್ಕೆ ಕರೆಯಬೇಕೆಂದು ಗೊತ್ತಾಯಿತು.
ಆದರೆ ಸಂಜೆಯಾದರೂ ಆತನ ಸುಳಿವೇ ಇರಲ್ಲಿಲ. ಜಯರಾಮು ಆತ ಇರಬಹುದಾದ
ಜಾಗಗಳಲ್ಲೆಲ್ಲ ಸುತ್ತಾಡಿ, ಒಂದೆಡೆ ಅವನನ್ನು ಕಂಡು, ಕರೆದುಕೊಂಡು ಬಂದ.
...........ಹಿಗ್ಗುತ್ತಿದ್ದ ಹೃದಯವನ್ನು ಬಿಗಿಯಾಗಿ ಹಿಡಿದು ಚಂದ್ರಶೇಖರಯ್ಯ
ಊಟ್ಟಕ್ಕೆ ಕುಳಿತ. ಮೂರು ವರ್ಷಗಳಿಂದ ಪಕ್ಕದ ಮನೆಯಲ್ಲೇ ಇದ್ದ ಆತ, ಮೊದಲ
ಬಾರಿ ಕಂಡ ಅಪರಿಚಿತರ ಮನೆಯಲ್ಲಿ ಕುಳಿತವನಂತೆ, ಸಂಕೊಚದಿಂದ
ವರ್ತಿಸಿದ.
ರಾಧಾ ಅಣ್ಣನಿಗೂ ಚಂದ್ರಶೇಖರಯ್ಯನಿಗೂ ಬಡಿಸುತ್ತ ಹೋದಳು. ಆತ
ರಾಧೆಯನ್ನು ತಲೆಯೆತ್ತಿ ಕೂಡಾ ನೋಡದೆ ಊಟ ಮಾಡಿದ.
ಕೊಠಡಿಗೆ ಹಿಂತಿರುಗಿದ ಚಂದ್ರಶೇಖರಯ್ಯನಿಗೆ ಅಂತಹ ನಿರ್ಮಲ ಒಲವನ್ನು
ದೊರಕಿಸಿಕೊಂಡ ತಾನು ಸುಖಿಯೆಂದು ತೋರಿತು. ಸಿಗರೇಟಿನ ನೆನಪಾಯಿತಾದರೂ,
ಸೇದಲು ಮನಸ್ಸಾಗಲಿಲ್ಲ.

೧೯

ಬಿಸಿಲು ಚೆನ್ನಾಗಿ ಬೀಳತೊಡಗಿದಂತೆ ನಿತ್ಯದ ಉತ್ಸಾಹದಿಂದ ರಂಗಮ್ಮ
ಓಡಾಡಿದರು.
"ಈ ವರ್ಷವಾದರೂ ಬೆಂಗಳೂರಿಗೆ ವರ್ಗವಾಗುವಂತೆ ಪ್ರಯತ್ನಿಸಬೇಕು," ಎಂದು