ಪುಟ:Rangammana Vathara.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

10

ಸೇತುವೆ

ಯೊಂದು ಮನೆಯಲ್ಲೂ ಅಡುಗೆ ಅರ್ಧಮರ್ಧವಾಗಿಯೇ ಉಳಿದಿತ್ತು. ಆದರೆ ಹಸಿದ
ಮಕ್ಕಳು_ಯಾಕೆ, ದೊಡ್ಡವರು ಕೂದ_ಬರಿ ಹೊಟ್ಟೆಯಲ್ಲೇ ಇರುವುದು ಸಾಧ್ಯ

ವಿರಲಿಲ್ಲ.

ಒಬ್ಬಾಕೆಯೆಂದಳು:

"ಸಾವಿನ ಮನೇ ಮುಂದುಗಡೆ ನೀರು ಹರಿತೀದೆಯಲ್ಲಾ. ಈಚೆ ಪಕ್ದಲ್ಲಿ

ದ್ಕೊಂಡು ಊಟ ಮಾಡ್ಬೌದು ಕಣ್ರೀ..."

ಎರಡು ಮೂರು ಬಚ್ಚಲುಗಳ ನೀರು ದುರ್ಗಂಧ ಬೀರುತ್ತ ಒಂದು ಸಾಲಿನ

ಮನೆಗಳ ಮುಂದಿನಿಂದ ಸಣ್ಣಗೆ ಹರಿಯುತ್ತಿದ್ದುದು ನಿಜ.

ವಠಾರಕ್ಕೆ ಹೊಸದಾಗಿ ಬಂದಿದ್ದ ಎಳೆಯ ಗೃಹಿಣಿ, ಇನ್ನು ಹತ್ತು ದಿನ ಉಪ

ವಾಸವಿರಬೇಕಾಗುವುದೇನೋ ಎಂಬಂತೆ, ತನ್ನ ಬಾಗಿಲ ಬಳಿ ಮುಖ ಸಪ್ಪಗೆ ಮಾಡಿ

ಕೊಂಡು ನಿಂತಳು.

ಇನ್ನೊಬ್ಬಳೆಂದಳು:

"ಈ ಮಕ್ಕಳಿಗೇನ್ರೀ ಮಾಡೋದು?"

ಎಲ್ಲ ಹೆಂಗಸರು ರಂಗಮ್ಮನತ್ತ ನೋಡಿದರು, ತೀರ್ಪಿಗಾಗಿ. ರಂಗಮ್ಮ ಪ್ರತಿ

ಯೊಂದು ಮಾತನ್ನೂ ತೂಗಿ ತೂಗಿ ಹೇಳಿದರು:

"ಈಗಿನ ಕಾಲ್ದಲ್ಲಿ ಅಷ್ಟೆಲ್ಲ ಕಟ್ಟುನಿಟ್ಟಾಗಿ ಹ್ಯಾಗೆ ಇರೋಕಾಗುತ್ತೆ? ಮಕ್ಕಳು

ಊಟ ಮಾಡ್ಲಿ. ದೊಡ್ಡೋರಲ್ಲಿ ಗಟ್ಟಿಮುಟ್ಟಾಗಿರೋರು ನಿರಾಹಾರವಾಗಿದ್ದ

ರಾಯ್ತು."

......ರಂಗಮ್ಮ ಗಟ್ಟಿಮುಟ್ಟಾಗಿರಲಿಲ್ಲ. ಆದರೂ ಅವರು ನಿರಾಹಾರಿಯಾಗಿ

ಉಳಿದರು.

......ಬಿಸಿಲಿನ ತಾಪ ಕಡಿಮೆಯಾದಂತೆ, ಸಂಜೆಯಾದಂತೆ, ವಠಾರಕ್ಕೆ ಗಂಡಸರು

ಬರತೊಡಗಿದರು. ಎಲ್ಲೆಲ್ಲಿಯೋ ಅಲೆದು ರಾತ್ರೆ ಮನೆ ಸೇರುವವರಲ್ಲೂ ಕೆಲವರು

ಆ ದಿನ ಬೇಗನೆ ಮನೆಗೆ ಬಂದರು.

ಪ್ರಯಾಣಕ್ಕೆ ಮುನ್ನ ಮೀಯಿಸಲೆಂದು ನಾರಾಯಣಿಯನ್ನು ಹೊರಕ್ಕೆ ತಂದು

ದಾಯಿತು. ರಂಗಮ್ಮ ಎಂದಿಗಿಂತ ಮುಂಚಿತವಾಗಿಯೇ ಕೊಳಾಯಿಯ ಬೀಗ ತೆರೆದರು. ಸಾಮಾನ್ಯವಾಗಿ ಮೂರು ಬಿಂದಿಗೆ ನೀರು ವಠಾರದ ಪ್ರತಿಯೊಂದು ಮನೆಗೂ ಉಚಿತ. ಅನಂತರದ ಪ್ರತಿ ಮೂರು ಬಿಂದಿಗೆಗೂ ತಿಂಗಳಿಗೆ ಎಂಟಾಣೆ. ಆದರೆ ಈ ದಿನ ಅಂತಹ ಲೆಕ್ಕಚಾರವಿಲ್ಲ.

ರಂಗಮ್ಮನೇ ಅಂದರು:

"ತಗೋಳೀಪ್ಪಾ, ಎಷ್ಟು ಬೇಕಾದರು ತಗೊಂಡು ಹೋಗಿ ನೀರು."

ನಿರ್ಜೀವವಾಗಿದ್ದ ನಾರಾಯಣಿಯ ಮುಖದ ಮೇಲೆ ನೆಮ್ಮದಿ ಇರಲಿಲ್ಲ.

ನ್ಯಾಯವಾದ ಮುಕ್ತಾಯವಿಲ್ಲದೆ ನಡುವಿನಲ್ಲೇ ಕಡಿದು ಹೋದ ಹಾಗಿತ್ತು ಆ ದೇಹ.