ಪುಟ:Rangammana Vathara.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

187

ಶೇಖರಯ್ಯನಿಗೆ ಅದನ್ನು ಕೊಡಬೇಕು; ಜಯರಾಮುಗೆ ಮದುವೆಯಾಗಿ ಆತ ಪ್ರತ್ಯೇಕ
ಸಂಸಾರ ಹೂಡುವವರೆಗೆ ಅವರೆಲ್ಲ ಜತೆಯಾಗಿ ಇದ್ದರೂ ಇದ್ದರೇ. ಅಂತೂ ಮೇಲಿನ
ಕೊಠಡಿ ಮನೆಗಳು ಖಾಲಿಯಾದರೆ ಅವುಗಳನ್ನೆಲ್ಲಾ ಓದುವ ಹುಡುಗರಿಗೇ ಬಿಟ್ಟುಬಿಡ
ಬೇಕು. ಬೇಸಗೆಯ ರಜಾದಲ್ಲಿ ಹುಡುಗರಿಂದ ಬಾಡಿಗೆ ಸಿಗುತ್ತಿರಲಿಲ್ಲ. ಹಾಗೆ ನಷ್ಟ
ವಾಗದಂತೆ, ತಿಂಗಳ ಬಾಡಿಗೆಯನ್ನೇ ಸ್ವಲ್ಪ ಹೆಚ್ಚಿಸಿದರಾಯ್ತು...
ಚಂದ್ರಶೇಖರಯ್ಯನೊಡನೆ ಇದನ್ನೆಲ್ಲ ಮಾತನಾಡಿ, ಇನ್ನೆರಡು ದಿನ ಬಿಟ್ಟು
ಕೊಂಡು 'ಮನೆ ಬಾಡಿಗೆಗೆ ಇದೆ' ಬೋರ್ಡನ್ನು ಹೊರಗೆ ತೂಗಹಾಕುವುದು ಮೇಲೆಂದು
ಅವರು ಅಂದುಕೊಂಡರು.
...ಚಂಪಾವತಿಗೆ ಬೇನೆ ಬರಿತ್ತಿತ್ತು. ವಠಾರದವರೆಲ್ಲಾ "ನಾವು ನೋಡ್ಕೋ
ತೇವೆ," "ನಾವು ನೋಡ್ಕೋತೇವೆ" ಎಂದು ಆಶ್ವಾಸನೆ ಕೊಟ್ಟರೂ ಶಂಕರನಾರಾ
ಯಣಯ್ಯ ದಾದಿಯೊಬ್ಬಳನ್ನು ಗೊತ್ತುಮಾಡಿದ. ಆ ದಾದಿ ತಮ್ಮ ಜನವಲ್ಲವೆಂದು
ತಿಳಿದರೂ ವಠಾರದವರು ಆಕ್ರೋಶ ಮಾಡಲಿಲ್ಲ.
ಆ ಸಂಜೆ ಪೋಲೀಸ್ ರಂಗಸ್ವಾಮಿ ಕೆಂಗಣ್ಣು ಉರಿಸಿಕೊಂಡು ಮನೆಗೆ ಬಂದ.
ರಾಜಾ ಮಿಲ್ಲಿನೆದುರು 'ಕೂಲಿಕಾರರ ಗಲಾಟೆ' ಆಗಿತ್ತು. ಸೇರಿದ್ದ ಗುಂಪನ್ನು ಚೆದುರಿ
ಸಲು ಪೋಲೀಸರು ಲಾಠೀ ಪ್ರಹಾರ ಮಾಡಿದ್ದರು. ರಂಗಸ್ವಾಮಿಯೂ ಲಾಠಿ ತಿರುಗಿಸಿ
ಬಡಜನರನ್ನು ಹೊಡೆದಿದ್ದ. ತನ್ನನ್ನು ಎಲ್ಲರೂ ವೈರಿಯಂತೆ ಕಾಣುವರೆಂಬ ತಿಳಿವಳಿಕೆ
ಯಿಂದಲೇ ಆತ ಮನೆಗೆ ಬಂದ. ಏನೋ ಕುಂಟು ನೆಪ ತೆಗೆದು ಹೆಂಡತಿಯ ಮೇಲೆ
ರೇಗಾಡಿದ .ಆಕೆಯನ್ನು ಹಿಡಿದು ಬಲವಾಗಿ ಥಳಿಸಿದ. ಗದ್ದಲವಾಯಿತು. ರಂಗಮ್ಮನ
ವಠಾರದಲ್ಲಿ ಏನೋ ಆಗುತ್ತಿದೆಯೆಂದು ಬೀದಿಯಲ್ಲಿ ನಡೆದು ಹೋಗುತ್ತಿದ್ದವರು ಕ್ಷಣ
ಕಾಲ ತಡೆದು ನಿಂತು, ಬರಿಯ ಮನೆ ಜಗಳವೆಂದು ಮುಂದುವರಿದರು.
ಎರಡು ದಿನಗಳಿಂದ ರಾಮಚಂದ್ರಯ್ಯ ಮರೆಮಾಡಿದ್ದ ಕೆಟ್ಟ ಸುದ್ದಿಯೂ ಆ
ಸಂಜೆ ಹೊರಬಂತು.
'ರಾಮಚಂದ್ರಯ್ಯನ ಕೆಲಸ ಹೋಯಿತಂತೆ' ಎಂಬ ಕಹಿವಾರ್ತೆ ಮನೆಯಿಂದ
ಮನೆಗೆ ಸಂಚಾರ ಮಾಡಿತು.
ನಿಜವಾಗಿ ಸುದ್ದಿ ಅಷ್ಟೇ ಆಗಿರಲಿಲ್ಲ. ದಾಸ್ತಾನುಗಳ ಲೆಕ್ಕ ಸರಿಯಾಗಿಲ್ಲವೆಂದು
ಎರಡು ಮೂರು ಸಾರೆ ಆಡಳಿತದವರು ರಾಮಚಂದ್ರಯ್ಯನಿಗೆ ಎಚ್ಚರಿಕೆ ಕೊಟ್ಟಿದ್ದರು.
ತನ್ನ ಸಹಾಯಕ ಏನಾದರೂ ಮಾಡುತ್ತಿರಬಹುದೆಂದು ರಾಮಚಂದ್ರಯ್ಯ ಸಂಶಯ
ಗ್ರಸ್ತನಾದ. ಆದರೆ ಸಂಶಯವನ್ನು ಸಿದ್ದಪಡಿಸಿಕೊಡುವ ಯಾವ ಪುರಾವೆಯೂ
ಸಿಗಲಿಲ್ಲ. ಆಡಳಿತದವರು ಒಮ್ಮಿಂದೊಮ್ಮೆಲೆ ರಾಮಚಂದ್ರಯ್ಯನನ್ನು ಕೆಲಸದಿಂದ
ವಜಾ ಮಾಡಿದರು. ಅದು ಅಕ್ರಮವೆಂದು ದೂರುವ ಹಾಗೂ ಇರಲಿಲ್ಲ. ತನ್ನ
ಮೇಲಿನ ಆಪಾದನೆಗಳನ್ನು ಆಡಳಿತದವರು ಸುಲಭವಾಗಿ ರುಜುಪಡಿಸುವರೆಂಬುದು
ಆತನಿಗೆ ಗೊತ್ತಿತ್ತು.