ಪುಟ:Rangammana Vathara.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಓದಿದ ಬಳಿಕ

"ಓದಿಯಾಯಿತೆ?"
"ಓಹೋ!"
"ಹೇಗಿದೆ?"
"..............."
"ಸುಮ್ಮನಿದ್ದೀರಲ್ಲ?"
"ಹೇಗಿದೆ ಅಂತ ಹೇಳಲು ಸ್ವಲ್ಪ ಕಾಲಾವಕಾಶ ಬೇಕು."
"ಆಗಲಿ. ಸಂದೇಹಗಳೇನಾದರೂ ಇದ್ದರೆ ಕೇಳಿ."
".......ನಿಮ್ಮ ಈ ಕಾದಂಬರಿಗೆ ಕಥಾನಾಯಕ-ಕಥಾನಾಯಿಕೆ ಯಾರು?"
"ಹಲವರು!"
"ಆದರೆ ಸಾಮಾನ್ಯವಾಗಿ ನಮ್ಮ ಕಾದಂಬರಿಗಳಲ್ಲಿ ಹೀಗಿಲ್ಲ"
"ನಿಜ. ಕಾದಂಬರಿ ಈ ರೀತಿಯಾಗಿಯೂ ಇರಬಹುದು. ಅಲ್ಲದೆ, ಇದು ತೀರಾ
ಹೊಸತೂ ಅಲ್ಲ."
"ಈ ಕಾದಂಬರಿಯಲ್ಲಿರೋದು ವಠಾರ ಜೀವನ, ಅಲ್ಲವೆ?"
"ಹೌದು."
"ವಠಾರ ಜೀವನವನ್ನು ಚಿತ್ರಿಸಿದ್ದೇವೆಂದು ಈ ಮೊದಲೇ ಹೇಳಿಕೊಂಡವ
ರುಂಟು."
"ಗೊತ್ತು. ಆದರೆ ಜೀವನವನ್ನು ನೋಡುವ ದೃಷ್ಟಿಗಳಲ್ಲಿ ವ್ಯತ್ಯಾಸವಿರ್ತದೆ.
ಇಲ್ಲಿರುವುದು ನನ್ನ ದೃಷ್ಟಿ"
"ನೀವು ಕಾದಂಬರಿಯನ್ನು ಬರೆದ ಉದ್ದೇಶ?"
"ಕಾದಂಬರಿಗಳನ್ನು ಜನ ಯಾಕೆ ಓದ್ತಾರೆ? ಮನೋರಂಜನೆಗೇಂತ, ಇಲ್ಲವೆ
ಕಾಲ ಹರಣಕ್ಕೇಂತ. ಇದನ್ನಾದರೂ ಆದರು ಕೈಗೆತ್ತಿಕೊಳ್ಳೋದು ಅದೇ ಉದ್ದೇಶ
ದಿಂದ ಅಂತ ನಾನು ಬಲ್ಲೆ!"
"ಅಷ್ಟೇ ಅಂತೀರಾ?"

"ಅದೀಗ ನಿಜಸ್ಥಿತಿ. ಆದರೆ ನಾನು ಬರಿಯ ಮನೋರಂಜನೆಯನ್ನು ಗುರಿ
ಯಾಗಿಟ್ಟು ಯಾವತ್ತೂ ಕೃತಿ ರಚಿಸೋದಿಲ್ಲ. ಇಲ್ಲಿಯೂ ಅಷ್ಟೆ. ಇದು ವಾಸ್ತವ
ಜೀವನವನ್ನು ಅವಲಂಬಿಸಿದೊಂದು ಕಟ್ಟುಕತೆ. ಇದನ್ನೋದುವಾಗ ಓದುಗರಿಗೆ ವಿವಿಧ
ರಸಾನುಭವವಾದೀತು ಅಂತ ನನ್ನ ನಂಬುಗೆ. ಆದರೆ ಅಷ್ಟೇ ಅಲ್ಲ. ಓದಿಯಾದ
ಮೇಲೂ ನಮ್ಮ ಸಮಾಜದೊಂದು ಜನ ವಿಭಾಗದ ಜೀವನಚಿತ್ರ ಅವರ ನೆನಪಿನಲ್ಲಿ
ಉಳಿಯಬೇಕು ಅನ್ನೋದು ನನ್ನ ಬಯಕೆ. ಆ ಚಿತ್ರ ಬದುಕಿನ 'ಏನು?'-'ಯಾಕೆ?'