ಪುಟ:Rangammana Vathara.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

194

ಸೇತುವೆ

"ನಿಮ್ಮ 'ರಂಗಮ್ಮನ ವಠಾರ' ಕೃತಿ ಬರುತದೇಂತ ಓದಿದಾಗ ಏನನಿಸಿತು ಗೊತ್ತೆ?"
"ಏನು?"
"ನಿರಂಜನರೂ ಅದೇ ವಿಷಯ ಬರೆಯ ಹೊರಟರಲ್ಲಾ ಅಂತ."
ಆ ವಿಷಯ ಎಂದಿರಾ?ವಿಷಯದ ಬಗ್ಗೆ ನನ್ನ ಆಕ್ಷೇಪವಿಲ್ಲ.ಭಿನ್ನಾಭಿಪ್ರಾಯ
ವಿರೋದು ಅದರ ನಿರುಪಣೆಗೆ ಸಂಬಂಧಿಸಿ.ವಿಷಯ ಯಾವುದೇ ಆದರೂ ಬದುಕನ್ನು
ನೋಡೋ ದೃಷ್ಟಿ ಒಂದಿರುತ್ತದೆ!ನಿಮ್ಮ ಊಹೆಗೆ ಆಧಾರವೇ ಇಲ್ಲ್ ಎನ್ನಲಾರೆ.'ವಠಾರ'
ಪದವನ್ನು 'ಗಟಾರ' ಅಂತ ಈಗಾಗಲೇ ಬಳಸಿದ್ದರಿಂದ ಹಾಗಗಿದೆ.ಒಂದೇ ಪದಕ್ಕೆ ಬೇರೆ ಬೇರೆ ಅರ್ಥಗಳಿರೋದು ಸಾಧ್ಯ.ಆದರೆ,ಯಾವುದಾದರೂ ಪದಕ್ಕೆ ವಿಪರೀತಾರ್ಥ ಕಲ್ಪಿಸಿ ಅದೀ ಸತ್ಯ ಅಂತ ಸಾಧಿಸೋ ಆಧುನಿಕ ಶಬ್ದಬ್ರಹ್ಮರಿಗೆ ನಮ್ಮ ನಾಡಿನಲ್ಲಿ ಅಭಾವವಿಲ್ಲ."
"ನಿಮ್ಮ ಈ ಕೃತಿಯೂ ಕೈಹೊತ್ತಿಗೆಯ ರೂಪದಲ್ಲೇ ಹೊರಗೆ ಬಂದು ಸುಲಭ ಬೆಲೆಗೆ ಓದುಗರಿಗೆ ದೊರೆಯುವಂತಾದುದಕ್ಕೆ ನೀವು ಸಂತೋಷಪಡ್ತೀರಿ ಅಲ್ಲವೆ?"
"ಹೌದು.ಅದಕ್ಕಾಗಿ ವಾಹಿನಿ ಪ್ರಕಾಶನದ ಒಡೆಯರಿಗೆ ನಾನು ಕೃತಜ್ಞ್."
"ವಿವಹರಣೆಗಳಿಗಾಗಿ ಋಣಿ.ಹೊರಡಲು ಸಮ್ಮತಿ ಕೊಡಿ.ಏಕಾಂತದಲ್ಲಿ ಎಲ್ಲಾ
ದರೂ ಕೂತ್ಕೊಂಡು ನಿಮ್ಮ ಪಾತ್ರಗಳಾದ ರಂಗಮ್ಮ_ಚಂಪಾವತಿ-ಶಂಕರನಾರಾ
ಯಣಯ್ಯ-ಚಂದ್ರಶೇಖರಯ್ಯ-ಜಯರಾಮು-ರಾಧೆ, ಆ ಓದುವ ಹುಡುಗರು_
ಪೋಲೀಸ್ ರಂಗಸ್ವಾಮಿ,ಇವರೆಲ್ಲರ ಜತೆ ಇನ್ನೊಮ್ಮೆ ಬೆರೀಬೇಕು.ಆ ಬಳಿಕ
'ರಂಗಮ್ಮನ ವಠಾರ'ದ ಬಗೆಗೆ ಅಭಿಪ್ರಾಯ ತಿಳಿಸ್ತೇನೆ."
"ಹಾಗೆಯೇ ಆಗಲಿ."


೨೫

ನಿರಂಜನ